Home / ಕವನ / ಕವಿತೆ / ರನ್ನದುಡುಗುಣಿ

ರನ್ನದುಡುಗುಣಿ

ರನ್ನ ದುಡುಗುಣಿ ಚಿನ್ನದ ಕೊಂಡಿ
ಹೊನ್ನಿನಾ ಡಾಬಾ ಇಟ್ಟಿದಳಽ|
ಎಣಕೆನಿಲ್ಲದೆ ಮಾಣಿಕಸಽರ
ಎದಿಬದಿ ತಾನು ಹಾಕುವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೧||

ಕಸೂತಿ ಕುಬಸಾ ಕೈಯಲಿ ಕನ್ನಡಿ
ನೆರಽಳ ನೋಡಿ ಹಿಗ್ಗುವಳಽ|
ಬಸವೇಸೂರನ ಎಡದಲಿ ಕುಂತು
ಹಸ್ಯಾಮಾಡಿ ತಾ ನಗುವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೨||

ಮುಗಿನಾಗ ಹೊಳೆವ ಮುತ್ತಿನ ಮೂಗುತಿ
ಮಿಗಿಲಾದ ಆಭರಣಿಟ್ಟಿದಳಽ|
ಅಚ್ಚರಂಗದ ಶಾಲನುಟ್ಟು
ಅನಂತ ಕೋಟಿ ರೂಪವಳಽ|
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೩||

ದುಂಡಗೈಯವಳು ದಿಮಿದಿಮಿಗಾರಳು
ದುಂಡಮುತ್ತಿನ ವಾರಳಽ|
ಹಿಂಡ ಗೆಳದ್ಯಾರು ಕಂಡುಸಿ ಕರದರ
ಹೆಣೂಲ ಭಂಗಾರ ಹಾಕುವಳಽ
ಕಡಿಯ ಕಂಕಣ ಕಮಳದ ಮುಖಿಯ
ಹೊಳಿವ ಮುತ್ತಿನ ವಾಲಿಗಳಽ|
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೪||

ಧನೂರ ಬಣ್ಣಾ ಶಾಲ ಕೈಯಲಿ
ಐದು ಅಂಕುಶಾ ಹಿಡಿದವಳಽ
ಜಯ ಜಯ ಮಂಗಳಽ| ಜಯ ಜಯ ಮಂಗಳಽ|
ಸುಂದರಿ ಸಾಂಬನಿಗೇ| ಜಯ ಜಯ ಮಂಗಳಽ ||೫||
*****

ಈ ಹಾಡಿನಲ್ಲಿ ಪಸ್ತ್ರಾಭರಣಗಳ ವರ್ಣನೆಯಿದೆ.

ಛಂದಸ್ಸು:- ಮಂದಾನಿಲ ರಗಳೆ

ಶಬ್ದಪ್ರಯೋಗಗಳು:- ಇಟ್ಟಿದಳ=ಇಟ್ಟದ್ದಾಳೆ. ಎಣಿಕಿನಿಲ್ಲದೆ=ಎಣಿಕೆ ಇಲ್ಲದೆ, ಹಸ್ಯಾ ಮಾಡಿ=ಹಾಸ್ಯ ಮಾಡಿ. ದಿಮಿದಿಮಿಗಾರಳ=ತುಂಬು ಮೈಯವಳು. ವಾರಳು=ಓರಣವುಳ್ಳವಳ. ಕಂಡುಸಿ=ಖಂಡಿತವಾಗಿ. ಧನೂರ ಬಣ್ಣ=ಧನ್ನೂರಿನ ಸೀರೆ.

“ಬಸವೇಸೂರನ ಮಡದಿ.” ಇಲ್ಲಿ ವರನನ್ನು ಬಸವೇಶ್ವರನಿಗೆ ಹೋಲಿಸಿದೆ. ಹೀಗೆ ಇಂತಹ ಹಾಡುಗಳಲ್ಲಿ ಗಂಡಹೆಂಡಿರನ್ನು ಶಿವಪಾರ್ವತಿಯರಿಗೂ ಹರಿಲಕ್ಷ್ಮಿಯರಿಗೂ ಹೋಲಿಸುವುದುಂಟು.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...