Home / ಲೇಖನ / ಇತರೆ / ಆತ್ಮಸ್ಥೈರ್ಯ

ಆತ್ಮಸ್ಥೈರ್ಯ

ಕಾಲದ ಸಾಗರದಲ್ಲಿ ನಮ್ಮ ಜೀವನದ ಡೋಣಿ ತೇಲುತ್ತಾ ಮುಂದೆ ಸಾಗುವಾಗ ಕಷ್ಟ ಪರಂಪರೆ ಮಾನವನಿಗೆ ಬೆನ್ನಟ್ಟಿ ಬರುತ್ತವೆ. ಹೆಜ್ಜೆ ಹೆಜ್ಜೆಗೂ ಕಷ್ಟ-ದುಃಖಗಳು ನಮ್ಮನ್ನು ಕಾಡುವಾಗ ಎದೆಗುಂದದೆ ಅವುಗಳನ್ನು ಎದುರಿಸುವ ಆತ್ಮವಿಶ್ವಾಸ, ಆತ್ಮಸ್ಥೆರ್ಯ ನಾವು ತುಂಬಿಕೊಳ್ಳಬೇಕಾಗುತ್ತದೆ.

ಡಿ. ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬಹಳ ಸುಂದರವಾಗಿ ಅರಹುತ್ತಾರೆ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ-ದುರ್ಬಲರಿಗೆ
ಎಲ್ಲರೊಳಗೊಂದಾಗು-ಮಂಕುತಿಮ್ಮ

ಬೆಟ್ಟದಡಿಯಲ್ಲಿರುವ ಹುಲ್ಲಿನಂತಿದ್ದರೆ ಯಾರಾದರೂ ಮೇಲಿಂದ ಬಿದ್ದರೆ ನೀನು ಅವರನ್ನು ಸುಖವಾಗಿಡಲು ಸಾಧ್ಯ. ಜೊತೆಗೆ ಆ ಹುಲ್ಲನ್ನು ಹಸು-ಕರುಗಳೂ ಕೂಡ ತಿಂದು ತೃಪ್ತಿ ಪಡೆಯುವಂತಾಗಲಿ. ನಿನ್ನ ಮನೆಗೆ ನೀನು ಸುಗಂಧವನ್ನು ಬೀರುವ ಮಲ್ಲಿಗೆಯ ಹೂವಾಗು. ಎಲ್ಲರೂ ನಿನ್ನನ್ನು ನೋಡುವಂತಿರಲಿ. ಕಷ್ಟಗಳ ಮಳೆಯನ್ನು ವಿಧಿ ನಿನ್ನಮೇಲೆ ಸುರಿಸಿದಾಗ ದೃಢಚಿತ್ತನಾಗಿ ನಿಲ್ಲು, ಆ ಕಷ್ಟಗಳು ನಿನ್ನನ್ನು ಏನೂ ಮಾಡಲಾರವು. ಜಗತ್ತಿನಲ್ಲಿರುವ ದೇವರು ಮತ್ತು ದುರ್ಬಲರ ಪಾಲಿಗೆ ಸಿಹಿಯನ್ನು ಕೊಡುವ ಬೆಲ್ಲ ಮತ್ತು ಸಕ್ಕರೆಯಾಗು. ಒಟ್ಟಿನಲ್ಲಿ ಸಮರಸದಿಂದ ಬಾಳು ಎಂಬ ಕವಿಯ ಅನುಭವದ ನುಡಿ ನಮ್ಮಲ್ಲಿ ಧೈರ್ಯವನ್ನು ತುಂಬುತ್ತದೆ. ಇಂಥ ಕಷ್ಟಗಳು ಬುರುವುದಕ್ಕೆ ಮುಖ್ಯಾವಾಗಿ ನಾವೂ ಕಾರಣವಾಗುತ್ತೇವೆ. ನಿತ್ಯ ಬಾಳಿನಲ್ಲಿ ನಮಗೆ ಲಭಿಸಿದಕ್ಕಿಂತಲೂ ಜಾಸ್ತಿಯನ್ನು ಅಪೇಕ್ಷಿಸುವುದೇ ಇದಕ್ಕೆಲ್ಲ ಕಾರಣ. ತೃಪ್ತಿ, ಸಮಾಧಾನ, ನಮ್ಮ ಅಂತಃರಂಗದಲ್ಲಿ ಗೂಡು ಕಟ್ಟಬೇಕು.

‘ಕಷ್ಟ ಬಂದಾಗ ಕಲ್ಲಿನಂತಾಗು, ಸುಖ ಬಂದಾಗ ಬಂದಾಗ ಹೂವಿನಂತೆ ಮೃದುವಾಗು. ಶರಣರ ಮಾತೊಂದು ಬರುತ್ತದೆ. ಬಾಳಿನಲ್ಲಿ ಬರುವ ಕಷ್ಟಗಳನ್ನೆಲ್ಲ ಅನುಭವವನ್ನಾಗಿ ಅಳವಡಿಸಿಕೊಂಡು ಬಾಳಿಗೆ ಒಂದು ನಿರ್ದಿಷ್ಟ ದಾರಿ ರೂಪಿಸಿಕೊಂಡು ಅದನ್ನು ತಲುಪುವಂತೆ ಸಾಗಬೇಕು. ಎಂದು ಮ್ಯಾಕ್ಸ್‌ಮಲ್ಲರ್‌ರು ಹೇಳುತ್ತಾರೆ.

‘ಆತ್ಮಸ್ಥೈರ್ಯ’ ಇಲ್ಲದಿದ್ದರೆ ಸಾರ್ಥಕ ಬದುಕಿಲ್ಲ. ಅಕ್ಕಸಾಲಿಗನು ಬಂಗಾರಕ್ಕೆ ಬೆಂಕಿಯಲ್ಲಿ ಹಾಕಿ ಪರೀಕ್ಷಿಸುವ ಹಾಗೆ ಕಬ್ಬಿಣಕ್ಕೆ ಒರೆಗೆ ಹಚ್ಚಿ ನೋಡುವನೆ! ಹಾಗೇ ಉತ್ತಮರಾಗಿ, ಸಚ್ಚಾರಿತ್ರ್ಯವುಳ್ಳವರಾಗಿ ಬಾಳುವಾಗ ನಮ್ಮನ್ನು ಪರೀಕ್ಷೆಗೆ ಒಡ್ಡುವಂತೆ ದೇವರು ನಮಗೆ ಕಷ್ಟಗಳ ನೀಡಿ ಪರೀಕ್ಷಿಸುತ್ತಾನೆ. ಅಂತಹ ಸಮಯದಲ್ಲಿ ಅವುಗಳನ್ನು ಎದುರಿಸುವ ದಿಟ್ಟತನವಿಲ್ಲದಿದ್ದರೆ ನಾವು ಹೇಡಿಗಳಾಗಿಯೇ ಜೀವಿಸಬೇಕಾಗುತ್ತದೆ. ಯುದ್ಧಕ್ಕೆ ಹೋದಾಗ ವೈರಿಯ ತೀವ್ರ ಆಕ್ರಮಣಕ್ಕೆ ಭಯದಿಂದ ಬೆನ್ನು ಕೊಟ್ಟು ಹಿಂದಕ್ಕೋಡಿದರೆ ನಮ್ಮ ಯೋಧರೇ ನಮ್ಮ ಮೇಲೆ ಪ್ರಹಾರ ಮಾಡುವಂತೆ ಕಷ್ಟಗಳಿಗೆ ಹೆದರಿದರೆ ನಮ್ಮೊಳಗಿನ ಆತ್ಮವಿಶ್ವಾಸ ಇಲ್ಲವಾಗಿ ಸಾವಿನ ಅಂಚಿಗೆ ನಾವು ತಲುಪಬೇಕಾಗುತ್ತದೆ.

ನಮ್ಮ ಸಂತರು ಕಷ್ಟ-ಸುಖಗಳಿಗೆ ಸ್ಪಂದಿಸದೇ ಸಮನಾಗಿ ಸ್ವೀಕರಿಸಬೇಕು. ನಾವು ಟೀವಿಯಂತೆ ಬಾಳಬೇಕೆನ್ನುತ್ತಾರೆ. ಟೀವಿಯು ಪರದೆಯ ಮೇಲೆ ನಡೆಯುವ ಎಲ್ಲ ಘಟನೆಗಳಿಗೂ ಟೀವಿ ಮುಗ್ಧವಾಗಿ ಸ್ವೀಕರಿಸುವಂತೆ ಬಾಳನ್ನ ಹಾಗೇ ನಾವು ಸಹಜವಾಗಿ ಸ್ವೀಕರಿಸಿದಾಗ ಅದೊಂದು ಸಾರ್ಥಕ ಬದುಕಾಗುತ್ತದೆ. ಅಂದಹಾಗೆ ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂದು ಗಾದೆಯೊಂದು ದಕ್ಕಿದೆ ಪ್ರಸಾದವೆಂದು ಖುಷಿಯಿಂದ ಇರಬೇಕೆಂದು ಹೇಳಿದರೆ ಗೌತಮ ಬುದ್ಧರು ‘ಆಸೆಯೇ ದುಃಖಕ್ಕೆ ಕಾರಣ’ ಎಂದು ಹೇಳಿದರು. ಆಸೆ-ಬಯಕೆ ಸ್ವಾರ್ಥಗಳು ದೂರವಿಟ್ಟು ಬಾಳಿದಾಗ ಮಾತ್ರ ನಿಜವಾದ ಜೀವನದ ಗುರಿ ಸಾಧಿಸಲು ಸಾಧ್ಯ.

ರಂಗನಾಥ ದಿವಾಕರರು ಒಂದು ಕಡೆ ಸಮಸ್ಯೆಗಳಿಂದಲೇ ಜೀವನ, ಸಮಸ್ಯೆಗಳಿಂದಲೇ ಸಂಸಾರ, ಸಮಸ್ಯೆಗಳೇ ಎಲ್ಲ ಚಟುವಟಿಕೆಗಳಿಗೆ ಕಾರಣ ಎನ್ನುತ್ತಾರೆ. ಮಹಾಭಾರತದಲ್ಲಿ ಕುಂತಿ ತನ್ನ ಸೋದರಳಿಯ ಶ್ರೀ ಕೃಷ್ಣನಿಗೆ ವರದ ರೂಪದಲ್ಲಿ ಕಷ್ಟ ಬೇಡುತ್ತಾಳೆ. ಅಂದಹಾಗೇ ಕಷ್ಟಗಳೇ ನಮ್ಮ ಯಶಸ್ಸಿನ ಬದುಕಿನ ಮೆಟ್ಟಲುಗಳು, ಅದಕ್ಕೆ ದ.ರಾ. ಬೇಂದ್ರೆಯವರು ಒಂದು ಕಡೆ `ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂದರು. ಕಷ್ಟ-ಸುಖಗಳ ಸಮ್ಮಿಶ್ರಣದಿಂದ ಬದುಕು ಸಿಹಿ ಜೇನಾಗಲು ಸಾಧ್ಯ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...