Home / ಕವನ / ಕವಿತೆ / ಬಾಲಿ ತಾ ಮೈನೆರದು

ಬಾಲಿ ತಾ ಮೈನೆರದು

ಬಾಲಿ ತಾ ಮೈನೆರದು ಬಾಗಿಲದಾಗೆ ನಿಂತಾಳ|
ಬಾಳೇಲಿ ಹಂಗ ಮಕ ಬಾಡೇ| ಸೋ ||೧||

ಬಾಳೇಲಿ ಹಂಗ ಮಕ ಬಾಡಿ ಅವರವ್ವಾ|
ಬಾ ಬಾಲಿನಂದ ಕರದಾಳ| ಸೋ ||೨||

ರಂಬಿ ತಾ ಮೈಯನೆರದ ಅಂಗಳದಾಗ ನಿಂತಾಳ|
ನಿಂಬೆಲಿ ಹಾಂಗ ಮಕ ಬಾಡೇ| ಸೋ ||೩||

ನಿಂಬೀಯ ಎಲೀ ಹಂಗ ಮಗ ಬಾಡಿ ಅವರವ್ವಾ|
ಬಾ ರಂಬಿನಂದು ಕರದಾಳ| ಸೋ ||೪||

ಓದೂವ ಸಾಲ್ಯಾಗ ಮಾವಯ್ಯ ಕುಂತಾನ|
ಸಸಿ ಹೋಗಿ ಕಾಲಾ ಹಿಡದಾಳ| ಸೋ ||೫||

ಸಸಿ ಹೋಗಿ ಕಾಲಾ ಹಿಡಿದು ತಾ ಕೇಳ್ಯಾಳ|
ಗೊಂಬಿಲ್ಲರಿ ನಮ್ಮ ಎಡಽಬಲಽ| ಸೋ ||೬||

ಬಡಗ್ಯಾರ ಕರಸ್ಯಾರ ಹಿಡಿ ಹೊನ್ನ ಕುಡಸ್ಯಾರ|
ಚಂದನದ ಗೊಂಬಿ ಕೆತ್ತಸ್ಯಾರ| ಸೋ ||೭||

ವಡ್ಡ ರನ ಕರಸ್ಯಾರ ಹಿಡಿ ಹೊನ್ನ ಕೊಡಸ್ಯಾರ|
ಅಂಗಳದಾಗ ಭಾಂವಿ ಹೊಡಸ್ಯಾರ| ಸೋ ||೮||

ಅಂಗಳದಾಗಽ ಭಾಂವಿ ಹೊಡಸ್ಯಾರ ತೆಂಗೆವ್ವಾ|
ಇಲ್ಲೇ ಮೆಲಿಯವ್ವ ಹೊಲಿನೀರ| ಸೋ ||೯||

ನೀರ ಮಡಽ ಬಿಟ್ಟು ಹಾಲ ಮಡಕ ಹೋಗಿ|
ಹಸನಾಗಿ ಒಗಿರಿ ಮಡೀಗೋಳಽ| ಸೋ ||೧೦||

ಹಸನಾಗಿ ಒಗಿರಿ ಮಡಿಗೋಳ ಈ ಮನಿಗಿ|
ದಸಿಮಕದಳಿಯ ಬರಽತಾನಽ| ಸೋ ||೧೨||
*****

ಈ ಹಾಡಿನಲ್ಲಿ ಸೊಸೆಯ ಸಲುವಾಗಿ ಮಾವಯ್ಯನು ತೋರಿಸುವ ಅಕ್ಕರತೆಯು ವರ್ಣಿಸಲ್ಪಟ್ಟಿದೆ.

ಛಂದಸ್ಸು:- ತ್ರಿಪದಿ

ಶಬ್ಧ ಪ್ರಯೋಗಗಳು:- ಮಕಬಾಡಿ=ಮುಖವು ಬಾಡಿ. ಬಡಿಗ್ಯಾರು=ಬಡಗಿಗಳು. ಮೆಲಿ=ಮೀ (ಎರಕೊಳ್ಳು). ಮಡಿಗೋಳ=ಮಡಿಗಳನ್ನು. ದಸಿ ಮಕದ=ಒಳ್ಳೇ ದಶೆಯುಳ್ಳ ಮುಖಾಕೃತಿಯ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...