Home / ಕವನ / ಕವಿತೆ / ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ ಗಂಧದ ಗೀರಾ
ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ
ಜಾತ ಮಲ್ಲಿಗಿ ಜಾಳಿಗಿ ದಂಡಿ
ವಾನ್ಯಾಡು ತುರುಬ ಒನಪಿಲಿ ಕಟ್ಟಿ
ಖನ್ನಿ ಕೋಮಽಲಿ ಹಸೀಗೇಳಽ ಸೋ ||೧||

ನೀರೆಯ ಬಾವುಲಿ ಲಿಗಿಲಿಗಿನಾಡುತ
ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ
ಹೊನ್ನಾ-ಭರಣಾ ಹರಡಿಗಿ ಮಲಕಽ
ಹೊನ್ನ ಪುತ್ತಳಿ ರುಳಿ ಸರಿಗಿಟಗೊಂಡು
ಕೋಗಿಲ ಮದ್ದಾಽನೇ ಹೆಸಿಗೇಳಽ ಸೋ ||೨||

ಇದುರಿನ ಮನಿಯೆ ಬಿದರೊಂಕೆವರ
ಮನ್ನುಸಿದಾರ ಮನಿ ಹೊಕ್ಕವರ
ಹತ್ತು ಮಂದಿಲಿ ಪಂತಿಲಿ ಕುಂಡ್ರೋ
ಚಿತ್ತಬಲ್ಲಬೋ ಶಿವಶಂಕರಗ
ಚಿತ್ರಾಂಗದರಸಾ ಹಸೀಗೇಳೋ ಸೋ ||೩||

ನಿಲಗುದರೆಂಬೋ ತೇಜಿಯನೇರಿ
ಮದನಾರಿ ಬಂದು ಬಾಗಿಲ್ಗಿ ನಿಂತಽ
ವಾರಿಗಿ ಗೆಳೆದ್ಯಾರು ಒಡಗೊಂಡು ಕರದರ
ಬಾ ಎನ್ನ ಮಡಽದೀ ಹಸಿಗೇಳಽ ಸೋ ||೪||

ಇಂಜನ ಮಳಿಯ ಗಂಧದ ಗೀರ
ಇಂದ್ನಮ ತಂಗೆಮನ ಗಂಡನ ಸದರಽ
ಇಂದ್ರನ ಖಳಿಯುಳ ಚಂದ್ರನ ಮಗಳ
ಇಂದ ಮನ್ನ ಸರೇ ಶುಬಽದಿಂದ ಸೋ ||೫||
*****

ಈ ಹಾಡಿನಲ್ಲಿ ಮೊದಲಿನ ಎರಡು ನುಡಿಗಳಲ್ಲಿ ಕನ್ನೆಯ ಅಲಂಕಾರ ವರ್ಣನೆಯಿದೆ. ಮೂರನೆಯ ನುಡಿಯಲ್ಲಿ ವರನ ಘನವಂತಿಕೆಯನ್ನು ಹೇಳಿದೆ. ನಾಲ್ಕನೆಯ ಮತ್ತು ಐದನೆಯ ನುಡಿಗಳಲ್ಲಿ ಕನ್ನೆಯನ್ನು ಗೆಳತಿಯರು ಮನ್ನಿಸುತ್ತಾರೆ.

ಛಂದಸ್ಸು:- ಮಂದಾನಿಲ ರಗಳೆ.

ಶಬ್ದಪ್ರಯೋಗಗಳು:- ಗಿರಾಕಿ=ಹರದಿ (ಸುಂದರಿ). ವಾನ್ಯಾಡು ತುರಬ=ಅಲೆದಾಡುವ ಮುಡಿ. ವನಪಿಲೆ=ಒಯ್ಯಾರದಿಂದ. ಖನ್ನಿ=ಕನ್ನೆ. ಚಿತ್ತ ಒಲ್ಲಬೊ=ಚಿತ್ತವಲ್ಲಭ (ಪ್ರೀಯ). ನಿಲಗುದರಿ=ನಿಲುವಿಕೆಯುಳ್ಳೆ ಕುದುರೆ. ಮದನಾರಿ=ಯೌವನೆ. ಸದರ=ಸರಿಗದ್ದುಗೆ. ಇಂಜನ ಮಳಿಯ ಗಂಧದ ಗೀರ=ಭೋರಮಳೆಯ ಹಸಿಯ ಧಾರೆಗಳಂತೆ ಒಪ್ಪುವ ಗಂಧದ ಗೀರುಗಳು (ಕೈಗೆ).

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...