Home / ಕವನ / ಕವಿತೆ / ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ ಗಂಧದ ಗೀರಾ
ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ
ಜಾತ ಮಲ್ಲಿಗಿ ಜಾಳಿಗಿ ದಂಡಿ
ವಾನ್ಯಾಡು ತುರುಬ ಒನಪಿಲಿ ಕಟ್ಟಿ
ಖನ್ನಿ ಕೋಮಽಲಿ ಹಸೀಗೇಳಽ ಸೋ ||೧||

ನೀರೆಯ ಬಾವುಲಿ ಲಿಗಿಲಿಗಿನಾಡುತ
ಕಾಲುಂಗ್ರ ಪಿಲ್ಲ್ಯಾ ಝಗಝಗ ಹೊಳೆವುತ
ಹೊನ್ನಾ-ಭರಣಾ ಹರಡಿಗಿ ಮಲಕಽ
ಹೊನ್ನ ಪುತ್ತಳಿ ರುಳಿ ಸರಿಗಿಟಗೊಂಡು
ಕೋಗಿಲ ಮದ್ದಾಽನೇ ಹೆಸಿಗೇಳಽ ಸೋ ||೨||

ಇದುರಿನ ಮನಿಯೆ ಬಿದರೊಂಕೆವರ
ಮನ್ನುಸಿದಾರ ಮನಿ ಹೊಕ್ಕವರ
ಹತ್ತು ಮಂದಿಲಿ ಪಂತಿಲಿ ಕುಂಡ್ರೋ
ಚಿತ್ತಬಲ್ಲಬೋ ಶಿವಶಂಕರಗ
ಚಿತ್ರಾಂಗದರಸಾ ಹಸೀಗೇಳೋ ಸೋ ||೩||

ನಿಲಗುದರೆಂಬೋ ತೇಜಿಯನೇರಿ
ಮದನಾರಿ ಬಂದು ಬಾಗಿಲ್ಗಿ ನಿಂತಽ
ವಾರಿಗಿ ಗೆಳೆದ್ಯಾರು ಒಡಗೊಂಡು ಕರದರ
ಬಾ ಎನ್ನ ಮಡಽದೀ ಹಸಿಗೇಳಽ ಸೋ ||೪||

ಇಂಜನ ಮಳಿಯ ಗಂಧದ ಗೀರ
ಇಂದ್ನಮ ತಂಗೆಮನ ಗಂಡನ ಸದರಽ
ಇಂದ್ರನ ಖಳಿಯುಳ ಚಂದ್ರನ ಮಗಳ
ಇಂದ ಮನ್ನ ಸರೇ ಶುಬಽದಿಂದ ಸೋ ||೫||
*****

ಈ ಹಾಡಿನಲ್ಲಿ ಮೊದಲಿನ ಎರಡು ನುಡಿಗಳಲ್ಲಿ ಕನ್ನೆಯ ಅಲಂಕಾರ ವರ್ಣನೆಯಿದೆ. ಮೂರನೆಯ ನುಡಿಯಲ್ಲಿ ವರನ ಘನವಂತಿಕೆಯನ್ನು ಹೇಳಿದೆ. ನಾಲ್ಕನೆಯ ಮತ್ತು ಐದನೆಯ ನುಡಿಗಳಲ್ಲಿ ಕನ್ನೆಯನ್ನು ಗೆಳತಿಯರು ಮನ್ನಿಸುತ್ತಾರೆ.

ಛಂದಸ್ಸು:- ಮಂದಾನಿಲ ರಗಳೆ.

ಶಬ್ದಪ್ರಯೋಗಗಳು:- ಗಿರಾಕಿ=ಹರದಿ (ಸುಂದರಿ). ವಾನ್ಯಾಡು ತುರಬ=ಅಲೆದಾಡುವ ಮುಡಿ. ವನಪಿಲೆ=ಒಯ್ಯಾರದಿಂದ. ಖನ್ನಿ=ಕನ್ನೆ. ಚಿತ್ತ ಒಲ್ಲಬೊ=ಚಿತ್ತವಲ್ಲಭ (ಪ್ರೀಯ). ನಿಲಗುದರಿ=ನಿಲುವಿಕೆಯುಳ್ಳೆ ಕುದುರೆ. ಮದನಾರಿ=ಯೌವನೆ. ಸದರ=ಸರಿಗದ್ದುಗೆ. ಇಂಜನ ಮಳಿಯ ಗಂಧದ ಗೀರ=ಭೋರಮಳೆಯ ಹಸಿಯ ಧಾರೆಗಳಂತೆ ಒಪ್ಪುವ ಗಂಧದ ಗೀರುಗಳು (ಕೈಗೆ).

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...