Home / ಲೇಖನ / ವ್ಯಕ್ತಿ / ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್

ರಾಘವೇಂದ್ರ ಗದಗ್‌ಕರ್ ಅವರು ಬೆಂಗಳೂರಿನಲ್ಲಿ ಹುಟ್ಟಿದವರು ಅಪ್ಪಟ ಕನ್ನಡಿಗರೆಂಬ ಅಭಿಮಾನ.

ಇವರೊಬ್ಬ ವಿಜ್ಞಾನಿ. ರಾಷ್ಟ್ರೀಯ ಅಂತರರಾಷ್ಟ್ರೀಯ ವಿಜ್ಞಾನಿ.

ಭವ್ಯ ಭಾರತದ ಸಮಾಜ ಜೀವ ವಿಜ್ಞಾನಿಯೆಂದೇ ಖ್ಯಾತನಾಮರು.

ಇವರು- ಈಗ ಸದಸ್ಯ ಸೆಂಟರ್‌ ಫಾರ್‌ ಇಕೊಲಾಜಿಕಲ್ ಸೈನ್ಸಸ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಪ್ರೊಫೆಸರ್ ಎಂದು ಕಾರ್‍ಯ ನಿರ್ವಹಿಸುತ್ತಿರುವರು.

ಇತ್ತೀಚೆಗೆ ಇವರಿಗೆ ಜರ್ಮನಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ “ದಿ ಕ್ರಾಸ್ ಆಫ್ ಆರ್ಡರ್ ಆಫ್ ಮೆರಿಟ್” ಅನ್ನು ಗಳಿಸಿದ್ದಾರೆ. ಇದು ಇವರ ಜ್ಞಾನ ವಿಜ್ಞಾನಕ್ಕೆ ಸಂದ ಪ್ರಶಸ್ತಿ ಪುರಸ್ಕಾರವಾಗಿದೆ!

ಇತ್ತೀಚೆಗೆ ಆಗಸ್ಟ್ ೨೦೧೫ ರಲ್ಲಿ ಇವರಿಗೆ ಬೆಂಗಳೂರಿನಲ್ಲಿರುವ ಜರ್ಮನ್ ಕಾನ್ಸುಲೇಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಇಡೀ ಕನ್ನಡ ನಾಡಿಗೇ ಸಂದ ಸ್ಥಾನಮಾನವಾಗಿದೆ.

ರಾಘವೇಂದ್ರ ಗದಗ್ ಕರ್‌ ಅವರು ವರ್ತನಾ ಪರಿಸರ ಹಾಗೂ ಸಾಮಾಜಿಕ ಜೀವಶಾಸ್ತ್ರಕ್ಕೆ ನೀಡಿರುವ ಅಮೋಘ ಅಮೂಲ್ಯ ಕೊಡುಗೆಗೆ ಹಾಗೂ ಭವ್ಯ ಭಾರತ ಜರ್ಮನಿಯ ನಡುವೆ ಸಂಶೋಧನಾ ಸಹಕಾರವನ್ನು ಇವರು ಇನ್ನಷ್ಟು ಬಲಪಡಿಸಿರುವುದನ್ನು ಗುರುತರವಾಗಿ ಪರಿಗಣಿಸಿ ಈ ಪ್ರಶಸ್ತಿ ಪುರಸ್ಕಾರವನ್ನು ಕೊಡಮಾಡಿರುವರು.

ಶ್ರೀಯುತರು ಕೀಟ ಸಮಾಜ ವಿಜ್ಞಾನದಲ್ಲೂ ತಜ್ಞರಾಗಿರುವ ಗದಗ್‌ಕರ್ ಅವರು ನ್ಯಾಷನಲ್ ಸೈನ್ಸ್ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಿವರು.

ಇವರ “ಸರ್‍ವೈವಲ್ ಸ್ಟ್ರಾಟಜೀಸ್”- ಪುಸ್ತಕ ಇಂಗ್ಲೀಷ್‌ನಿಂದ ಚೀನಿ ಹಾಗೂ ಕೊರಿಯನ್ ಭಾಷೆಗಳಿಗೆ ಅನುವಾದಗೊಂಡಿರುವುದು.

ಇವರು ಪ್ರತಿನಿತ್ಯ ನಿರಂತರವಾಗಿ ತಮ್ಮ ಕೆಲಸ ಕಾವ್ಯಗಳ ಮಧ್ಯೆ ವಿದ್ಯಾರ್ಥಿಗಳಿಗೆ ಹಾಗೂ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ಮಾಡುತ್ತಾ ವಿಜ್ಞಾನದಲ್ಲಿ ಸುಜ್ಞಾನವನ್ನು ಕಾಣುತ್ತಿರುವರು.

ಮುದ್ದು ಮಕ್ಕಳೆ… ರಾಘವೇಂದ್ರ ಗದಗ್‌ಕರ್‌ ಅವರು ನಿಮಗೆಲ್ಲ ಸ್ಫೂರ್ತಿದಾಯಕ ಚೈತನ್ಯದಾಯಕವಾಗಲಿ ಎಂದು ಈ ಪುಟ್ಟ ಬರಹವಾಗಿದೆ. ನೀವೂ ಈ ನಿಟ್ಟಿನಲ್ಲಿ ಸಾಗಲು ಸಲಹೆ ಮಾಡುವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...