Home / ಕವನ / ಕವಿತೆ / ಶರಣೆಂಬೆವು

ಶರಣೆಂಬೆವು

ಶರಣೆಂಬೆವು ತಾಯಿ ಶರಣೆಂಬೆವು
ಶರಣಾಗತರಾಗಿಹೆವು ರಕ್ಷಿಸೆಮ್ಮನು
ಕರಮುಗಿದು ಬೇಡುವೆವು ವರವೊಂದನು ||

ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ
ಕರುನಾಡ ತಾಯೆ ಕರುಣೆಯ ತೋರು
ಕರಮುಗಿದು ಬೇಡುವೆವು ವರವೊಂದನು ||

ನಿನ್ನ ಕರುಣೆಯೆ ನಮಗೆ ಶ್ರೀ ರಕ್ಷೆ
ನಿನ್ನೆದೆಯ ಭಾವವೆ ಅಭಯ ದೀಕ್ಷೆ
ನಿನ್ನ ಮಮತೆಯೆ ದಯಾದೀನವೂ
ಕರಮುಗಿದು ಬೇಡುವೆವು ವರವೊಂದನು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||

ತಂಬಿಟ್ಟು ಹೋದಾವರೆ ನಿನಗರ್‍ಪಿಸಿ
ಕರ್‍ಪೂರದಾರತಿ ಮಾಡಿ ಮನದಿಂದೆ
ಭಕುತರ ಹರಸಿ ನೀ ಮನದಿಂದೆ
ಕರಮುಗಿದು ಬೇಡುವೆವು ವರವೊಂದನು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||

ಬನಶಂಕರಿ ಮಹಾಮಾಯೆ ಮಾಹೇಶ್ವರಿ
ಜಗಧಾತ್ರೆ ರಕ್ಷಿಸಿ ಕರುಣೆ ತೋರು
ಶರಣಾಗತರಾಗಿಹೆವು ರಕ್ಷಿಸೆಮ್ಮನು ||
ಕಬ್ಬಿನ ಜಲ್ಲೆ ರಸದೌತಣ ನೈವೇದ್ಯ ನಿನಗರ್‍ಪಿಸಿ
ಮಲ್ಲೆ ಹೂಮಾಲೆ ಮುಡಿಪಾಗಿರಿಸಿ
ಜಗದಂಭಾ ಸ್ವರೂಪಿಣಿ ನಿನ್ನ ಲೀಲೆಯಲಿ
ಹೊನ್ನ ಹೂವುಗಳಾಗಿ ನಲಿವೆವು ನಿನ್ನ ಚರಣದಲಿ
ಕರ ಮುಗಿದು ಬೇಡುವೆವು ವರವೊಂದನು
ಶರಣಾಗಿಹೆವು ರಕ್ಷಿಸೆಮ್ಮನು ||

ಏಳೇಳು ಜನ್ಮಕೂ ನಿನ್ನ ಸೇವೆಯಲಿ
ಮುಡುಪಾಗಿರಿಸು ಎಮ್ಮನು ನಿನ್ನ ಮಣ್ಣಲಿ
ಚೈತನ್ಯವಾಗಿರಿಸಿ ಹರಸು ತಾಯೆ ಮಡಿಲ ಮಕ್ಕಳ
ಕರ ಮುಗಿದು ಬೇಡುವೆವು ಕರುಣೆಯಿಂದಲಿ
ನೀಡು ವರವೊಂದನು ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...