Home / ಲೇಖನ / ವಿಜ್ಞಾನ / ‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. ಆದ್ದರಿಂದ ವೈದ್ಯರೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು ಎಂದು ಸಲಹೆ ಮಾಡುತ್ತಾರೆ. ಹೀಗಾಗಿ ಸ್ವಿಮೀಂಗು, ಜಿಮ್ಮು, ವ್ಯಾಯಾಮ ಮಾಡುವುದು, ಉಪವಾಸ ಇರುವುದನ್ನು ಮಾಡುತ್ತಾರೆ. ಆದರೆ ಕೊಲೆಸ್ಟ್ರಾಲ್ ರಕ್ತದಲ್ಲಿ ಕಡಿಮೆಯಾದರೆ ಆತ್ಮಹತ್ಯೆಯಂತಹ ಪ್ರಕರಣಗಳು ಜರುಗತ್ತವೆ ಎಂದು ೩ ವರ್ಷಗಳ ಅಧ್ಯಯನದಿಂದ (೧೯೫೫) ಅಮೇರಿಕೆಯ ವಿಜ್ಞಾನಿ ‘ಗಾಲಿಯರ್’ ಎಂಬುವವರು ಹೇಳುತ್ತಾರೆ. ಕೊಲೆಸ್ಟ್ರಾರಾಲ್ ಕುರಿತು ಇವರು ಸಾಕಷ್ಟು ಅಧ್ಯಯನ ಮಾಡಿದ ಫಲಶೃತಿ ಇದು. ಇದಕ್ಕೆ ಕಾರಣಗಳೂ ಕುತೂಲಹಕಾರಿಯಾಗಿವೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದಾಗ ಮಿದುಳಿನ ಸೆರೆಟೋನಿನ್ ಪ್ರಮಾಣದಲ್ಲಿ ಇಳಿತ ಕಂಡುಬರುತ್ತದೆ. ಈ ಪ್ರಮಾಣ ಕಡಿಮೆಯಾದರೆ ಮಿದುಳು ವಕ್ರೀಭವಗೊಂಡು ಆತ್ಮಹತ್ಯೆಯ ಮನೋಭಾವ ಹೆಚ್ಚಾಗುತ್ತದೆಂದು ಹೇಳುತ್ತಾರೆ. ಆಕ್ರಮಣ ಶೀಲ ಭಾವನೆಗಳನ್ನು ತೊಡೆದು ಹಾಕುವ ಸಾಮರ್ಥ್ಯ ಕುಂದಿ ಹೋಗುತ್ತದೆ. ಮಿದುಳಿನಲ್ಲಿ ಸೆರೆಟೋನಿನ್ ಪ್ರಮಾಣ ಕಡಿಮೆಯಾದಾಗ ಚಿತ್ತವಿಕಾರಗಳಾವುದು ಸಹಜ. ಇಂಥವರು ಯಾವುದೇ ಸಣ್ಣಪುಟ್ಟ ಕಾರಣಗಳು ಸಿಕ್ಕರೂ ಆತ್ಮಹತ್ಯೆ ಭಾವನೆ ತಾಳುತ್ತಾರೆ ಅಥವಾ ಅಪಘಾತಕ್ಕೆ ಕಾರಣರಾಗುತ್ತಾರೆ. ರಕ್ತದಲ್ಲಿ ಕೊಲಸ್ಟ್ರಾಲ್ ಪ್ಪಮಾಣವನ್ನು ಇಳಿಸುವ ಉದ್ದೇಶದಿಂದ ಔಷಧಿಗಳನ್ನು ಉಪಯೋಗಿಸುವ ರೋಗಿಗಳಲ್ಲಿ ಆತ್ಮಹತ್ಯೆಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ಯಾರ ದೇಹದಲ್ಲಿ ಕೊಲೆಸಸ್ಟ್ರಾಲ್ ಪ್ರಮಾಣ ತೀರ ಕಡಿಮೆಯಾಗಿದೆಯೋ ಅವರಲ್ಲೂ ಸಹ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗಬಹುದೆಂದು ವಿಜ್ಞಾನಿಗಳು ತಿಳಿಸುತ್ತಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...