Home / ಕವನ / ಕವಿತೆ / ಬೆಳೆಯಗೊಡಲಿಲ್ಲವೇನಮ್ಮ?

ಬೆಳೆಯಗೊಡಲಿಲ್ಲವೇನಮ್ಮ?

ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ?
ಬೆಳೆಯ ಗೊಡಲಿಲ್ಲವೇ ಅವರು ನಮ್ಮ-
ನಾವಿಂದು ಇರುವ ಹಾಗೆ?

ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು
ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳಯಲಿಲ್ಲವೇ ಅವಳು ಕಟ್ಟಿಕೊಂಡವನ ಬಿಟ್ಟು
ಉಳ್ಳಾಲದ ಉಕ್ಕಿನ ರಾಣಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಮಹಾದೇವಿ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಕಟ್ಟಿಕೊಂಡವನ ತೊರೆದು
ಅಕ್ಕ ಮಹಾದೇವಿಯಾಗಿ
ನಮಗಿಂತ ಭಿನ್ನವಾಗಿ?

ಇರಲಿಲ್ಲವೇ ಇಂದಿರಾ ನಮ್ಮ ನಿಮ್ಮ ಹಾಗೆ
ಬೆಳೆಯಲಿಲ್ಲವೇ ಅವಳು ಗಂಡಸರಲ್ಲಿ ಗಂಡಸಾಗಿ
ಯುಗಕ್ಕೊಬ್ಬಳೇ ರಾಜಕಾರಣಿಯಾಗಿ
ನಮಗಿಂತ ಭಿನ್ನವಾಗಿ?

ಬೆಳೆಯಲಿಲ್ಲವೇ ಇವರೆಲ್ಲ
ನಮ್ಮ ಹಾಗಿದ್ದೂ ನಮಗಿಂತ ಭಿನ್ನವಾಗಿ
ಹೆಣ್ಣಾಗಿದ್ದೂ ಗಂಡಿನಂತಾಗಿ
ಚರಿತ್ರೆಯ ಪುಟಗಳಲ್ಲಿ ದಾಖಲಾಗಿ?

ಮತ್ತೇಕೆ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ,
ಬೆಳೆಯ ಗೊಡಲಿಲ್ಲವೇ ಅವರು, ನಮ್
ನಾವಿಂದು ಇರುವಹಾಗೆ?

ಗರ್ಭದೊಳಗೆ ಆಗ ತಾನೇ ಮೊಳಕೆಯೊಡೆದ
ಕುಡಿ ಹೆಣ್ಣೆಂದು ಭ್ರೂಣ ಹತ್ಯೆಗೆ ಒಪ್ಪುವವರು ನಾವು;
ಹೆತ್ತ ಮಗು ಹೆಣ್ಣೆಂದು ಜರಿಯುವವರು ನಾವು;
ಬಂದ ಹೆಣ್ಣು ವರದಕ್ಷಿಣೆ ತರಲಿಲ್ಲವೆಂದು
ಸುಟ್ಟು ಹಾಕಲು ಸಹಕರಿಸುವವರು ನಾವು;
ಒಂಟಿ ಹೆಣ್ಣು ತನಗಾಗಿ ಬದುಕುತ್ತಿರುವಾಗ
ಅವಳ ಚಾರಿತ್ರ್ಯ ವಧೆ ಮಾಡುವವರು ನಾವು;
ಜಾಹೀರಾತಿಗೆಂದು ಮೈ ಚಳಿ ಬಿಟ್ಟು
ಎಲ್ಲ ತೆರೆದು ಬರಿದಾಗಿ ನಿಲ್ಲುವವರು ನಾವು;
ಬೆಳೆಯ ಗೊಡಲಿಲ್ಲವೇ ಅವರು, ನಮ್ಮ
ನಮಗೆ ಬೇಕೆನಿಸಿದ ಹಾಗೆ?

ಈಗ ಯಾಕಮ್ಮ ಈ ಕೋಪ, ಈ ರೋಷ,
ಇಷ್ಟೊಂದು ಆವೇಶ ಅವರ ಮೇಲೆ
ಬೆಳೆಯಗೊಡಲಿಲ್ಲವೇ ಅವರು, ನಮ್ಮ-
ನಾವಿಂದು ಇರುವ ಹಾಗೆ?

ನಾವೇಕೆ ನಮ್ಮತನವ ಕಾಯ್ದು ಕೊಳ್ಳಲಿಲ್ಲ?
ನಾವೇಕೆ ನಮ್ಮ ಶೋಷಿಸುವವರ ಪ್ರತಿಭಟಿಸಲಿಲ್ಲ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...