ಸಹಕರಿಸಿ ಪ್ಲೀಜ್

ಕಾತರದಿ ಪುಸ್ತಕ ಹಿಡಿದ ಮಗು
ಸ್ಪಷ್ಟಿಕರಣಕೆ ಬಂದು ತಂತು ನಗು
ಕೇಳಿತು ಅಪ್ಪ ಇದರರ್ಥ ಹೇಳು
ಸಿಡುಕಿ ಹೇಳಿದ ನಿಂದೇನೋ ಗೋಳು?

ಆ ಮಗು ಅಮ್ಮನ ಬಳಿ ಸಾರಿತು
ಬಾಯಿ ತೆರೆವ ಮೊದಲೇ ಸಿಟ್ಟಿನಲಿ
ಅವನತ್ತ ನೋಡದೆ ಗುಡುಗಿದಳಾಕೆ
ನನಗೆ ಒಟ್ಟಿದೆ ಕೆಲಸ ಎಂದು ದೂಕಿದಳು

ಅಣ್ಣ ಅಕ್ಕರ ಬಳಿಗೆ ಹೋದನು ಸಮಸ್ಯೆ ಹೊತ್ತು
ನಮದೇ ಸಾಕಾಗಿದೆ ಬಂದ ಇವನೊಬ್ಬ ಕತ್ತೆ
ಎಂದು ಛೇಡಿಸಿ ಹೊರಗಟ್ಟಿದರು
ತಮ್ಮಯ ಕೆಲಸದಲಿ ಮುಳುಗಿದರು

ಅಜ್ಜ ಅಜ್ಜಿಯ ಹತ್ತಿರ ಹೋದರೆ
ಎಂದರು ಕೊಡಬೇಡಪ ನಮಗೆ ತೊಂದರೆ
ಆರಾಮ ಇಲ್ಲ ಕಣ್ಣು ಕಾಣಲ್ಲ
ನಿನ್ನ ಉಸಾಬರಿ ನಮಗೆ ಬೇಕಿಲ್ಲ

ಇಂಥ ಅಸಹಕಾರ ಕುಟುಂಬದೊಂದಿಗೆ
ಹೇಳಿ ಮಗು ಏಗುವುದು ಹೇಗೆ?
ಮಾಡುವ ಕೆಲಸವ ಕ್ಷಣ ಬದಿಗಿಟ್ಟು
ಬಗೆಹರಿಸಿ ಸಮಸ್ಯೆ ಮನಸುಗೊಟ್ಟು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟನ ತೋಟ
Next post ‘ಮೋಹ ಮತ್ತು ಸಾವು’ ಇವುಗಳ ಪ್ರತಿಬಿಂಬ-ಟಾಲ್ ಸ್ಟಾಯ್‌ರ `Anna Karenina’

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…