Home / ಬಾಲ ಚಿಲುಮೆ / ಕವಿತೆ / ಪುಟ್ಟನ ಹಳ್ಳಿ

ಪುಟ್ಟನ ಹಳ್ಳಿ

ನಮ್ಮಯ ಹಳ್ಳಿ ಚಿಕ್ಕದು
ದೇಶಕೆ ಅನ್ನ ಇಕ್ಕುವುದು

ಊರ ಸುತ್ತ ಬೆಟ್ಟ
ಹಾಕಿದಂತೆ ಅಟ್ಟ
ಕಾರಿ ಟೆಂಗು ಕವಳೆ
ಸೀತಾಫಲ ನೇರಳೆ

ಅಗಸಿ ಊರ ಮುಂದೆ
ಆಲದ ಕಟ್ಟೆ ಹಿಂದೆ
ಸುಂದರ ದೇವಸ್ಥಾನ
ನೋಡು ರಥದ ಚಂದಾನ

ಊರ ಹೊರಗೆ ಶಾಲೆ
ನಮ್ಮ ಓದು ಅಲ್ಲೆ
ಬೇವಿನ ಮರಗಳೆರಡು
ಆಗಿವೆ ಗಂಧದ ಕೊರಡು

ಊರ ಹಿಂದೆ ಹಳ್ಳ
ಆಗಿದೆ ಅದು ಕೊಳ್ಳ
ಮಳೆಗಾಲದಲ್ಲಿ ಉಕ್ಕಿ
ಅಲ್ಲಿ ಉಲಿವವು ಹಕ್ಕಿ

ಬಟ್ಟೆ ಒಗೆಯುವ ತಾಣ
ಬದಿಗೆ ಕಬ್ಬಿನ ಗಾಣ
ಬನ್ನಿ ಹಾಲು ಕುಡಿಯೋಣ
ಅದರ ರುಚಿಯ ಸವಿಯೋಣ

ಸಣ್ಣ ಪುಟ್ಟ ಓಣಿ
ಅಲ್ಲೇ ಒಂದು ಗಿರಣಿ
ಸಂಜೆಗೆ ಜೋಳ ತಂದು
ಹಿಟ್ಟು ಮಾಡಿಸಿಕೊಂಡು

ಜೋಳದ ಬಿಸಿ ರೊಟ್ಟಿ
ತಿಂದರೆ ಹ್ಯಾಂಗ ಗಟ್ಟಿ
ಮೇಲೆ ಹಾಲು ಮಜ್ಜಿಗೆ
ಎಂಥ ಔಷಧಿ ನಿದ್ದೆಗೆ

ಎಲ್ಲರ ಮನೆಗಳ ಎತ್ತು
ಹಳ್ಳಿ ಬಾಳಿನ ಮುತ್ತು
ನಿತ್ಯ ಉತ್ತು ಬಿತ್ತಿ
ರೈತರ ಬಾಳ ಸಾಥಿ

ರಾಗಿ ಜೋಳ ಸೆಜ್ಜೆ
ಹುರುಳಿ ಸೇಂಗಾ ಗೆಜ್ಜೆ
ಹಲಸು ಮಾವು ತೋಪು
ಶುದ್ಧಗಾಳಿ ತಂಪು

ಮೂರು ಹೊತ್ತು ರೈತ
ಇರುವ ಹೊಲದಿ ಗೇಯುತ
ಗಡಿಯಲ್ಲಿ ಜೈ ಜವಾನ್
ಹಳ್ಳಿಯಲಿ ಜೈಕಿಸಾನ್

ಸಂತೆ ವಾರಕ್ಕೊಮ್ಮೆ
ಜಾತ್ರೆ ವರ್ಷಕ್ಕೊಮ್ಮೆ
ನೆಂಟರಿಷ್ಟರು ಬಂದು
ನಲಿದಾಡುವರು ಅಂದು

ಊರಿಗೆ ಯಾರೇ ಬರಲಿ
ನಮ್ಮ ಅತಿಥಿಯಾಗಲಿ
ಇದು ನಮ್ಮಯ ಹಂಬಲ
ನಿಮಗಿದೋ ತಾಂಬೂಲ.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...