Home / ಬಾಲ ಚಿಲುಮೆ / ಕವಿತೆ / ಪುಟ್ಟನ ಹಳ್ಳಿ

ಪುಟ್ಟನ ಹಳ್ಳಿ

ನಮ್ಮಯ ಹಳ್ಳಿ ಚಿಕ್ಕದು
ದೇಶಕೆ ಅನ್ನ ಇಕ್ಕುವುದು

ಊರ ಸುತ್ತ ಬೆಟ್ಟ
ಹಾಕಿದಂತೆ ಅಟ್ಟ
ಕಾರಿ ಟೆಂಗು ಕವಳೆ
ಸೀತಾಫಲ ನೇರಳೆ

ಅಗಸಿ ಊರ ಮುಂದೆ
ಆಲದ ಕಟ್ಟೆ ಹಿಂದೆ
ಸುಂದರ ದೇವಸ್ಥಾನ
ನೋಡು ರಥದ ಚಂದಾನ

ಊರ ಹೊರಗೆ ಶಾಲೆ
ನಮ್ಮ ಓದು ಅಲ್ಲೆ
ಬೇವಿನ ಮರಗಳೆರಡು
ಆಗಿವೆ ಗಂಧದ ಕೊರಡು

ಊರ ಹಿಂದೆ ಹಳ್ಳ
ಆಗಿದೆ ಅದು ಕೊಳ್ಳ
ಮಳೆಗಾಲದಲ್ಲಿ ಉಕ್ಕಿ
ಅಲ್ಲಿ ಉಲಿವವು ಹಕ್ಕಿ

ಬಟ್ಟೆ ಒಗೆಯುವ ತಾಣ
ಬದಿಗೆ ಕಬ್ಬಿನ ಗಾಣ
ಬನ್ನಿ ಹಾಲು ಕುಡಿಯೋಣ
ಅದರ ರುಚಿಯ ಸವಿಯೋಣ

ಸಣ್ಣ ಪುಟ್ಟ ಓಣಿ
ಅಲ್ಲೇ ಒಂದು ಗಿರಣಿ
ಸಂಜೆಗೆ ಜೋಳ ತಂದು
ಹಿಟ್ಟು ಮಾಡಿಸಿಕೊಂಡು

ಜೋಳದ ಬಿಸಿ ರೊಟ್ಟಿ
ತಿಂದರೆ ಹ್ಯಾಂಗ ಗಟ್ಟಿ
ಮೇಲೆ ಹಾಲು ಮಜ್ಜಿಗೆ
ಎಂಥ ಔಷಧಿ ನಿದ್ದೆಗೆ

ಎಲ್ಲರ ಮನೆಗಳ ಎತ್ತು
ಹಳ್ಳಿ ಬಾಳಿನ ಮುತ್ತು
ನಿತ್ಯ ಉತ್ತು ಬಿತ್ತಿ
ರೈತರ ಬಾಳ ಸಾಥಿ

ರಾಗಿ ಜೋಳ ಸೆಜ್ಜೆ
ಹುರುಳಿ ಸೇಂಗಾ ಗೆಜ್ಜೆ
ಹಲಸು ಮಾವು ತೋಪು
ಶುದ್ಧಗಾಳಿ ತಂಪು

ಮೂರು ಹೊತ್ತು ರೈತ
ಇರುವ ಹೊಲದಿ ಗೇಯುತ
ಗಡಿಯಲ್ಲಿ ಜೈ ಜವಾನ್
ಹಳ್ಳಿಯಲಿ ಜೈಕಿಸಾನ್

ಸಂತೆ ವಾರಕ್ಕೊಮ್ಮೆ
ಜಾತ್ರೆ ವರ್ಷಕ್ಕೊಮ್ಮೆ
ನೆಂಟರಿಷ್ಟರು ಬಂದು
ನಲಿದಾಡುವರು ಅಂದು

ಊರಿಗೆ ಯಾರೇ ಬರಲಿ
ನಮ್ಮ ಅತಿಥಿಯಾಗಲಿ
ಇದು ನಮ್ಮಯ ಹಂಬಲ
ನಿಮಗಿದೋ ತಾಂಬೂಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...