Home / ಬಾಲ ಚಿಲುಮೆ / ಕವಿತೆ / ಟೀಚರ್ ಏನ್ ಹೇಳ್ತಾರೆ

ಟೀಚರ್ ಏನ್ ಹೇಳ್ತಾರೆ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬೇಕಂತೆ ಹಾಡು
ಹಾಡ್ತಾ ಹಾಡ್ತಾ ನಾವು
ಕಟ್ಬೇಕಂತೆ ನಾಡು

ಟೀಚರ್ ಹೇಳ್ತಾರೆ ನಮ್ಗೆ
ಉತ್ಬೇಕಂತೆ ನೆಲ
ಎಷ್ಟೆ ಕಷ್ಟ ಬಂದ್ರೂ
ಬಿಡಬಾರದಂತೆ ಛಲ

ಟೀಚರ್ ಹೇಳ್ತಾರೆ ನಮ್ಗೆ
ರೈತ ದೊಡ್ಡೋನಂತೆ
ಎಲ್ಲಾ ಕಷ್ಟ ಸಹಿಸಿಕೊಂಡು
ಅನ್ನ ನೀಡ್ತಾನಂತೆ

ಟೀಚರ್ ಹೇಳ್ತಾರೆ ನಮ್ಗೆ
ಓದ್ಬೇಕಂತೆ ಪೇಪರ್
ಓದ್ತಾ ಓದ್ತಾ ನಾವು
ಆಗ್ತಿವಂತೆ ಸೂಪರ್

ಟೀಚರ ಹೇಳ್ತಾರೆ ನಮ್ಗೆ
ಮಾಡ್ಬೇಕಂತೆ ಪ್ರೀತಿ
ನೆಲ, ಜಲ, ದೇಶ, ಭಾಷೆ
ನಮ್ಗೆ ತಾಯಿ ರೀತಿ

ಟೀಚರ್ ಹೇಳ್ತಾರೆ ನಮ್ಗೆ
ಕಡಿಬಾರದಂತೆ ಮರ
ಗಾಳಿ, ನೆರಳು ಕೊಡೋ ಅವು
ದೇವರು ಕೊಟ್ಟ ವರ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬಾರ್ದಂತೆ ಚಟ
ಕಲಿತೋರೆಲ್ಲ ಹಾಳಾಗ್ತಾರೆ
ಅನ್ನೋದಂತೂ ದಿಟ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಕಾಪಿ
ಓದ್ದೇ ಪಾಸು ಮಾಡ್ದೋರೆಲ್ಲ
ಆಗ್ತಾರಂತೆ ಪಾಪಿ

ಟೀಚರ್ ಹೇಳ್ತಾರೆ ನಮ್ಗೆ
ಬಿಡಬಾರದಂತೆ ನೀತಿ
ಹಂಚಿ ತಿನ್ನೋ ಮನಸ್ಸಿಗಿಂತ
ದೊಡ್ಡದೇನಲ್ಲ ಜಾತಿ

ಟೀಚರ್ ಹೇಳ್ತಾರೆ ನಮ್ಗೆ
ಇರಬೇಕಂತೆ ಶುಚಿ
ಹಲ್ಲು ನಾಲಗೆ ಉಜ್ಜದೇ ಇದ್ರೆ
ಸಿಗುತ್ತೇನು ರುಚಿ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಸ್ಟ್ರೈಕು
ಬಸ್ಸು, ಕಾರು ಸುಟ್ಟಿದ್ದು
ಇನ್ನಾದ್ರು ಸಾಕೋ, ಸಾಕು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...