Home / ಕವನ / ಕವಿತೆ / ಬಾಲ್ಯದ ಆ ದಿನಗಳು

ಬಾಲ್ಯದ ಆ ದಿನಗಳು

ಅಮ್ಮ ಹೇಳುತ್ತಿದ್ದಳು ನನಗೆ
ಸುಂದರ ಅಪ್ಸರೆಯ ಕಥೆಗಳನ್ನೇ
ನನ್ನ ಅಂಗಳದ ಮಾವಿನಗಿಡವೇ
ನನಗೆ ಜಗತ್ತಿನ ಸುಂದರ ವಸ್ತುವಾಗಿತ್ತು
ಮರಕೋತಿ ಆಟಕ್ಕೆ ಮೈದಾನವಾಗಿತ್ತು
ನಿರಂತರ ನನ್ನ ಭಾರ ಸಹಿಸುತ್ತಿತ್ತು.

ಟೊಂಗೆ ಟೊಂಗೆಯಲಿ ತುಂಬಿದ
ಗೆಳೆಯ-ಗೆಳತಿಯರ ಕಿಲಕಿಲವಿತ್ತು
ಮಿಡಿಗಾಯಿ ಕದ್ದು ತಂದು
ಜೇಬಿಗೆ ಉಪ್ಪು ತುರುಕಿಕೊಂಡದ್ದು
ಅಮ್ಮನಿಗೇನು ಗೊತ್ತು?

ಚಿಗುರು ಚಿಗುರಿಗೆ ಕುಳಿತ
ಗಿಳಿ ಕೋಗಿಲೆಗಳಿಂಚರ
ಹೂ-ಎಲೆ-ಮಿಡಿ ಹೊತ್ತ
ಮರ ಅದೆಷ್ಟು ಚಂದ

ಪಕ್ಕದ ಮನೆಯವರು
ಹಬ್ಬ ಹರಿದಿನಕ್ಕೆಂದು
ಕೀಳುತ್ತಿದ್ದರು ಮರದ ಎಲೆಗಳನ್ನು
ಆದರೂ ಅಂಗಳದಗಲಕ್ಕೂ
ಹಬ್ಬಿತ್ತು ಅದರ ವಿಶಾಲನೆರಳು!

ಇಂದು ಮರ ಬಿಕೋ ಎನ್ನುತ್ತಿದೆ
ಊರಿನ ಓಣಿ, ಗಲ್ಲಿ, ರಸ್ತೆಗಳೂ
ನನ್ನೊಂದಿಗೆ ಮುನಿಸಿಕೊಂಡಿವೆಯಲ್ಲ.
ಗೆಳತಿಯರೂ ಚಾಳಿ ಬಿಟ್ಟಿದ್ದಾರೆ
ಅದೊಂದು ದಿನವಿತ್ತು ಆಗ ನನ್ನೊಂದಿಗೆ
ಎಲ್ಲ ರಸ್ತೆಗಳೂ ಆಡಲು ಬರುತ್ತಿದ್ದವು
ಗಿಳಿ ಕೋಗಿಲೆಗಳೂ ಹಾಡುತ್ತಿದ್ದವು.

ಬಿಟ್ಟ ಕಣ್ಣು ಬಿಟ್ಟುಕೊಂಡು
ಇಂದು ತಾರಸಿ ನೋಡುತ್ತಿರುವೆ.
ಅದೊಂದು ದಿನವಿತ್ತು ಆಗ
ರಾತ್ರಿಯ ರೆಪ್ಪೆಗಳೂ ಭಾರ
ಮಾತಿನಲಿ ನದಿಯೇ ಹರಿಯುತ್ತಿತ್ತು.
ಈಗ ಮಾತಿನಲಿ ತೇವವಿಲ್ಲ
ಗೆಳತಿಯರ ಕಿಲಕಿಲವಿಲ್ಲ.
ನದಿಯು ಉಕ್ಕಿ ಹರಿಯುವುದಿಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...