Home / ಲೇಖನ / ಇತರೆ / ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ
ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ
ಅಯ್ಯಾ
ಆರೈವವರಿಲ್ಲ
ಅಕಟಕಟಾ ಪಶುವೆಂದೆನ್ನ
ಕೂಡಲ ಸಂಗಮದೇವ
ಕೊಂಬ ಹಿಡಿದೆತ್ತುವನ್ನಕ್ಕ

[ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ]

ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು ಹೇಳುತ್ತಾ ಸುಜನಾ ಅವರು ಆಡಿದ ಮಾತುಗಳನ್ನು ಮರೆಯಲು ಆಗಿಲ್ಲ.

ಬಸವಣ್ಣ ಇಲ್ಲಿ ತನ್ನನ್ನು ಕೆಸರಿನಲ್ಲಿ ಸಿಕ್ಕಿಕೊಂಡ ಹಸುವಿಗೆ ಹೋಲಿಸಿಕೊಂಡಿದ್ದಾನೆ. ಅಸಹಾಯಕನಾಗಿ, ನನ್ನನ್ನು ಯಾರೂ ಆರೈಕೆ ಮಾಡುವವರಿಲ್ಲ, ವಿಚಾರಿಸುವವರಿಲ್ಲ, ಕೂಡಲಸಂಗಮನೇ ಬಂದು ಕೊಂಬ ಹಿಡಿದು ಎತ್ತಬೇಕು ಅನ್ನುತ್ತಾನೆ. ಸರಿ. ಆದರೆ ಗಮನಿಸಿ ನೋಡಿ. ಸಾಮಾನ್ಯ ಕವಿಯಾಗಿದ್ದರೆ ಕೊನೆಯ ಸಾಲಿಗೆ ಬರುವವೇಳೆಗೆ `ನನ್ನ ಕೈ ಹಿಡಿದು ಎತ್ತುವವರೆಗೆ’ ಅನ್ನಬಹುದಿತ್ತು. ಆದರೆ ಬಸವಣ್ಣ ಇಲ್ಲಿ ಕೇವಲ ಹಸುವಿನ ಹೋಲಿಕೆಯನ್ನು ಬಳಸುತ್ತಿಲ್ಲ, ರೂಪಕವನ್ನು ಬಳಸುತ್ತಿದ್ದಾನೆ. ಅಲ್ಲ, ತಾನೇ ಕೆಸರಿನಲ್ಲಿ ಸಿಕ್ಕಿಬಿದ್ದ ಹಸುವಾಗಿದ್ದಾನೆ. ಅಷ್ಟು ತನ್ಮಯತೆ ಇರುವುದರಿಂದಲೇ ಕೊನೆಯ ಸಾಲಿನಲ್ಲಿ ಕೊಂಬ ಹಿಡಿದೆತ್ತು ಎಂದಿದ್ದಾನೆ. ಇದು ಸುಜನಾ ಅವರು ಕೊಟ್ಟ ವಿವರಣೆ.

ಮಾತಿನಲ್ಲಿ ತನ್ನನ್ನು ಹಸುವಿಗೆ ಹೋಲಿಸಿಕೊಂಡವನು ತಲ್ಲೀನನಾಗಿ ತಾನೇ ಹಸು ಎಂದು ಭಾವಿಸುವಷ್ಟು ತಾದಾತ್ಮ್ಯ ಹೊಂದುವುದು ಇದೆಯಲ್ಲ ಅದು ಅಪರೂಪ. ಕವಿಗೆ ಮತ್ತು ಭಕ್ತನಿಗೆ ಇಬ್ಬರಿಗೂ ಇಂಥ ತಾದಾತ್ಮ್ಯ ಬೇಕು. ಆಗ ಮಾತ್ರ ಮಾತು ಬರಿಯ ಮಾತಾಗಿ ಉಳಿಯದೆ ಶಕ್ತಿಯಾಗುತ್ತದೆ. ಇಂಥ ತಾಕತ್ತು ಇರುವ ವ್ಯಕ್ತಿ ಮಾತ್ರ ನುಡಿದಂತೆ ನಡೆಯುವ ಮಾತು ಆಡಬಲ್ಲ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...