Home / ಲೇಖನ / ಇತರೆ / ವಚನ ವಿಚಾರ – ಇನಿಯನಿಗೆ ತವಕವಿಲ್ಲ

ವಚನ ವಿಚಾರ – ಇನಿಯನಿಗೆ ತವಕವಿಲ್ಲ

ಇನಿಯಂಗೆ ತವಕವಿಲ್ಲ
ಎನಗೆ ಸೈರಣೆಯಿಲ್ಲ
ಮನದಿಚ್ಛೆಯನರಿವ ಸಖಿಯರಿಲ್ಲ
ಇನ್ನೇವೆನವ್ವಾ
ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ
ದಿನ ವೃಥಾ ಹೋಯಿತ್ತಾಗಿ ಯೌವನ ಬೀಸರವಾಗದ ಮುನ್ನ
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ

[ಬೀಸರವಾಗದ ಮುನ್ನ-ವ್ಯರ್ಥವಾಗುವ ಮುನ್ನ]

ಸತ್ಯಕ್ಕನ ವಚನ. ಭಕ್ತಿ ಪ್ರೀತಿಗಳೆರಡೂ ತೀವ್ರವಾಗಿ ಬೆರೆತ ಮಾತು ಇಲ್ಲಿದೆ.
ನನ್ನ ಪ್ರೇಮಿಗೆ ನನ್ನ ಕೂಡಬೇಕೆಂಬ ತವಕ ಇಲ್ಲ, ನನಗೆ ಕಾಯುವ ಸಹನೆ ಇಲ್ಲ, ನನ್ನ ಮನಸ್ಸನ್ನು ತಿಳಿಯುವ ಗೆಳತಿಯರೂ ಇಲ್ಲ. ಏನು ಮಾಡಲಿ, ಸಹಿಸಲಾರೆ, ಅಮ್ಮಾ ನನ್ನ ಮನಸ್ಸು ಮನ್ಮಥವೈರಿಯ ಅನುಭಾವದಲ್ಲಿ ಸಿಕ್ಕಿಕೊಂಡಿದೆ, ನೀನೂ ಕರುಣೆ ಇಲ್ಲದ ತಾಯಿ, ನನ್ನ ದಿನಗಳು ವೃಥಾ ಕಳೆದು ಹೋಗುತ್ತ ನನ್ನ ಯೌವನ ವ್ಯರ್ಥವಾಗುವ ಮೊದಲು ಶಂಭುಜಕ್ಕೇಶ್ವರನೊಡನೆ ನನ್ನನ್ನು ಕೂಡಿಸು.

ಪ್ರೇಮಿಯ ವೈಚಿತ್ರ (ಅವನು ಮನ್ಮಥವೈರಿಯಾದ್ದರಿಂದಲೇ ಅವನಿಗೆ ತವಕವಿಲ್ಲ), ಸಮವಯಸ್ಕ ಗೆಳೆತಿಯರಿಲ್ಲದ ಒಂಟಿತನದ ಭಾರ, ತಾಯಿಯೊಡನೆ ಹೇಳಬಾರದ ಮಾತಾದರೂ ಅವಳಲ್ಲದೆ ಬೇರೆ ಗತಿ ಇಲ್ಲ ಎಂಬ ಅಸಹಾಯಕತೆ, ಶಂಭುಜಕ್ಕೇಶ್ವರನೊಡನೆ ನನ್ನ ಕೂಡಿಸು ಎಂದು ಮಗಳಾಗಿ ಸಂಕೋಚಬಿಟ್ಟು ಕೇಳಲೇಬೇಕೆಂಬ ಭಾವದ ಒತ್ತಡ ಇವೆಲ್ಲ ತೀವ್ರವಾದ ಕಾವ್ಯರೂಪದಲ್ಲಿ ವ್ಯಕ್ತವಾಗಿವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...