Home / ಕವನ / ಕವಿತೆ / ಅಗ್ನಿರಾಜ

ಅಗ್ನಿರಾಜ

ಅಗ್ನಿರಾಜ:
ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ
ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ?
ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು.
ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು.

ಮನುಕುಲ ದೂತ:
ಮಾನವ್ಯಕುಲದ ಹರಿಕಾರ ನಾನು, ಆಂತರ್‍ಯದಾತ್ಮಸಾನು;
ಇರುಳನ್ನು ಕೊಡಹಿ ಸಾವನ್ನೆ ತಡೆದ ಪ್ರಪ್ರಥಮ ಪ್ರಮಥ ನಾನು;
ಅಮೃತಬಿಂಬ ಪ್ರತಿಬಿಂಬಿಸಿರುವ ಸೌಂದರ್‍ಯಲಕ್ಷ್ಮಿಸೂನು.
ಅಮರ ಜ್ಯೋತಿ ಮೃಗವೇಧಕಾಗಿ ಬಂದಂಥ ವ್ಯಾಧಶಿವನು.

ಅಗ್ನಿ ರಾಜ:
ತನ್ನ ಶಕ್ತಿಯಲಿ ನಿನ್ನ ಸುತ್ತಿರುವುದಾವ ಬೆಂಕಿ ಉರಿಯು?
ಪಾಲಿಸುತ್ತಿರೆಯು ಬರ್‍ಚಿ ನಾಲಗೆಯ ಚಾಚಿ ಕಾಯುತಿರೆಯು
ಸನಾತನದ ಸತ್ಕಾಲದಲ್ಲಿ ಸಂಚರಿಸುತ್ತಿಲ್ಲಿ ಬಂದೆ
ಕಲ್ಪನಾತೀತವಾದ ನವಕಿರಣದೊಂದು ಅಂಶವೆಂದೆ?

ಮನುಕುಲ ದೂತ:
ನವೋನವದ ಜಾಗೃತಿಯಲೆದ್ದ ಜೀವಾಗ್ನಿ ತೋಚುತಿಹುದು;
ಮರಣ ಸೀಳಿ ಉದ್ಭವಿಸಿ ಮೇಲೆ ಶಾಶ್ವತಕೆ ಚಾಚುತಿಹುದು;
ಯಜ್ಞ ಪಕ್ಷಿ ಗುರಿಯತ್ತ ಹಾರಿ ಶಿಖೆ ಏರಿ ಹರಿಯುತಿಹುದು;
ಮಾನವ್ಯದಲ್ಲಿ ಮಲಗಿದ್ದು ಎದ್ದ ದೇವತ್ವ ಉರಿಯುತಿಹುದು.

ಅಗ್ನಿರಾಜ:
ಭಂಗುರದ ಹಂಗು ಹರಕೊಂಡು ಬಂದೆ, ಓ ಮಗುವೆ ಏನೋ ಬೇಕೊ?
ಮುಕ್ತನಾಗಿ ಸಾವಿರದ ಸಯ್ತಿನಲಿ ಗುಮ್ಮನಿಹುದೆ? ಸಾಕೋ.
ಏನು ಬ್ರಹ್ಮ ಸಂಮುಖಕೆ ಸಾಕ್ಷಿಯಾಗಿರುವೆ ಎನುವೆ ನೀನು
ಅಸ್ಪರ್‍ಶ ಯೋಗ ನಿರ್‍ವಾಣದಲ್ಲಿ ಲಯವಾಗಬೇಕು ಏನು?

ಮನುಕುಲ ದೂತ:
ಪಾತಾಳಖಾತದಜ್ಞಾನದಲ್ಲು ಹೊತ್ತಿರಲಿ ದಿವ್ಯದೀಪ್ತಿ.
ನರಕಯಾತನೆಯ ಜೀವದಲ್ಲಿ ತಾನಿರಲಿ ದೇವಶಕ್ತಿ.
ಮೂರುಕಾಲಕೂ ಮೀರಿ ದುಃಖಿಸದ ಸುಖವು ಭೂಮಿಗೆಂದೆ
ಅಕ್ಷುಬ್ಧವಾದ ಹದಗೆಡದ ಶಾಂತಿ ಮಾನವಗೆ ಬೇಡಬಂದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...