Home / ಕವನ / ಕವಿತೆ / ಅಗ್ನಿರಾಜ

ಅಗ್ನಿರಾಜ

ಅಗ್ನಿರಾಜ:
ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ
ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ?
ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು.
ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು.

ಮನುಕುಲ ದೂತ:
ಮಾನವ್ಯಕುಲದ ಹರಿಕಾರ ನಾನು, ಆಂತರ್‍ಯದಾತ್ಮಸಾನು;
ಇರುಳನ್ನು ಕೊಡಹಿ ಸಾವನ್ನೆ ತಡೆದ ಪ್ರಪ್ರಥಮ ಪ್ರಮಥ ನಾನು;
ಅಮೃತಬಿಂಬ ಪ್ರತಿಬಿಂಬಿಸಿರುವ ಸೌಂದರ್‍ಯಲಕ್ಷ್ಮಿಸೂನು.
ಅಮರ ಜ್ಯೋತಿ ಮೃಗವೇಧಕಾಗಿ ಬಂದಂಥ ವ್ಯಾಧಶಿವನು.

ಅಗ್ನಿ ರಾಜ:
ತನ್ನ ಶಕ್ತಿಯಲಿ ನಿನ್ನ ಸುತ್ತಿರುವುದಾವ ಬೆಂಕಿ ಉರಿಯು?
ಪಾಲಿಸುತ್ತಿರೆಯು ಬರ್‍ಚಿ ನಾಲಗೆಯ ಚಾಚಿ ಕಾಯುತಿರೆಯು
ಸನಾತನದ ಸತ್ಕಾಲದಲ್ಲಿ ಸಂಚರಿಸುತ್ತಿಲ್ಲಿ ಬಂದೆ
ಕಲ್ಪನಾತೀತವಾದ ನವಕಿರಣದೊಂದು ಅಂಶವೆಂದೆ?

ಮನುಕುಲ ದೂತ:
ನವೋನವದ ಜಾಗೃತಿಯಲೆದ್ದ ಜೀವಾಗ್ನಿ ತೋಚುತಿಹುದು;
ಮರಣ ಸೀಳಿ ಉದ್ಭವಿಸಿ ಮೇಲೆ ಶಾಶ್ವತಕೆ ಚಾಚುತಿಹುದು;
ಯಜ್ಞ ಪಕ್ಷಿ ಗುರಿಯತ್ತ ಹಾರಿ ಶಿಖೆ ಏರಿ ಹರಿಯುತಿಹುದು;
ಮಾನವ್ಯದಲ್ಲಿ ಮಲಗಿದ್ದು ಎದ್ದ ದೇವತ್ವ ಉರಿಯುತಿಹುದು.

ಅಗ್ನಿರಾಜ:
ಭಂಗುರದ ಹಂಗು ಹರಕೊಂಡು ಬಂದೆ, ಓ ಮಗುವೆ ಏನೋ ಬೇಕೊ?
ಮುಕ್ತನಾಗಿ ಸಾವಿರದ ಸಯ್ತಿನಲಿ ಗುಮ್ಮನಿಹುದೆ? ಸಾಕೋ.
ಏನು ಬ್ರಹ್ಮ ಸಂಮುಖಕೆ ಸಾಕ್ಷಿಯಾಗಿರುವೆ ಎನುವೆ ನೀನು
ಅಸ್ಪರ್‍ಶ ಯೋಗ ನಿರ್‍ವಾಣದಲ್ಲಿ ಲಯವಾಗಬೇಕು ಏನು?

ಮನುಕುಲ ದೂತ:
ಪಾತಾಳಖಾತದಜ್ಞಾನದಲ್ಲು ಹೊತ್ತಿರಲಿ ದಿವ್ಯದೀಪ್ತಿ.
ನರಕಯಾತನೆಯ ಜೀವದಲ್ಲಿ ತಾನಿರಲಿ ದೇವಶಕ್ತಿ.
ಮೂರುಕಾಲಕೂ ಮೀರಿ ದುಃಖಿಸದ ಸುಖವು ಭೂಮಿಗೆಂದೆ
ಅಕ್ಷುಬ್ಧವಾದ ಹದಗೆಡದ ಶಾಂತಿ ಮಾನವಗೆ ಬೇಡಬಂದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...