Home / ಕವನ / ಕವಿತೆ / ಬಿಡುವು

ಬಿಡುವು

ಜೀವನದಲ್ಲೇನಿದೆ ಎಲ್ಲಾ ಇದ್ದೂ
ಒಂದು ಕ್ಷಣ ಮೈಮರೆತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ
ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ?

ಹಸಿರು ಹೊದ್ದ ಮರದ ನೆರಳಲಿ ನಿಂತು
ದನಕರು, ಕುರಿಮಂದೆ ಮೇಯುತ್ತಿರುವಷ್ಟು
ದೂರದವರೆಗೆ ಕಣ್ಣು ಹಿಗ್ಗಿಸಿ
ನೋಡಲು ಬಿಡುವಿಲ್ಲದ ಮೇಲೆ?

ದಟ್ಟಡವಿಯಲಿ ಹಾದು ಹೋಗುವಾಗ
ಹಣ್ಣಾಗಿ ಉದುರಿದ್ದ ಬೀಜಗಳ ಹೆಕ್ಕಿ ಹುಲ್ಲಿನ ಪೊದೆಗಳಲ್ಲಿ
ಅಡಗಿಸಿಡುವ ಅಳಿಲಿನ ತುಂಟಾಟವ ನೋಡಿ
ನಗಲು ಬಿಡುವಿಲ್ಲದ ಮೇಲೆ?

ನಕ್ಷತ್ರಗಳು ಫಳಫಳಿಸುವ ರಾತ್ರಿಯಾಕಾಶವನ್ನು ನೆನಪಿಸುವಂತೆ
ಜುಳು ಜುಳು ಹರಿವ ನೀರಲ್ಲಿ ರವಿಕಿರಣ ಪ್ರತಿಫಲಿಸಿ
ಮಟಮಟ ಮಧ್ಯಾಹ್ನದಲಿ ನಕ್ಷತ್ರಗಳ ಹಿಂಡನ್ನೇ ಸೃಷ್ಟಿಸಿರುವ
ಅಂದವ ನೋಡಿ ಆನಂದಿಸಲು ಬಿಡುವಿಲ್ಲದ ಮೇಲೆ?

ಬಿಡುವಿಲ್ಲ, ನಮಗೆ ಯಾವುದಕ್ಕೂ ಬಿಡುವಿಲ್ಲ
ಪ್ರಕೃತಿ ದೇವಿ ಸೌಂದರ್‍ಯ ಸ್ಪರ್ಧೆಯಲ್ಲಿ ಪಂಥ ಕಟ್ಟಿ
ನಲಿಯುವುದ ನೋಡಲು, ಅವಳ ಕಣ್ಣಲ್ಲಿ ಮಿಂಚಿದ ನಗು
ಹೂವಾಗಿ ಗಿಡಗಳಲ್ಲಿ ಬಿರಿಯುವುದ ನೋಡಲು ಬಿಡುವಿಲ್ಲ

ಎಲ್ಲಾ ಇದ್ದರೂ ಒಂದು ಕ್ಷಣ ಮೈಮೆರತು ನಿಂತು
ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿಹಾಯಿಸಲು ನಮಗೆ ಬಿಡುವಿಲ್ಲ.
ಯಾವುದಕ್ಕೂ ಬಿಡುವಿಲ್ಲದ ಜೀವನಕ್ಕೇನರ್‍ಥ?
ಅದು ಏನೂ ಇಲ್ಲದ ಬರಡು ಬಂಜರುಭೂಮಿ!
*****
(ಸರ್ ವಿಲಿಯಂ ಹೆನ್ರಿ ಡೇವಿಸ್‌ರವರ ‘ಲೀಜರ್’ ಕವನದಿಂದ ಪ್ರೇರಿತ)

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...