Home / ಕವನ / ಕವಿತೆ / ಕಾಮನಬಿಲ್ಲು

ಕಾಮನಬಿಲ್ಲು

ಮಳೆ ಬಿಡುವು ಕೊಟ್ಟಿದೆ
ಬಿಸಿಲು ಬಿದ್ದಿದೆ ನೆಲ ಆರಿದೆ
ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ
ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ

ಮೋಡದ ತೆರೆ ಸರಿಯಿತು ಗಾಳಿಗೆ
ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು
ಏಳು ವರ್ಣಗಳ ಕಸೂತಿ ಬಾಗಿದ
ಬಿಂಕದ ನೋಟ ಬಲು ಸುಂದರ

ಆಯಿತು ಆಗಸಕ ತೋರಣ
ಎಷ್ಟೊಂದು ಆಕರ್ಷಣೆ ಈ ಕಂಕಣ
ಎಳೆಯರೆಲ್ಲ ಕಂಡರು ಹಿಗ್ಗಿನಲಿ
ವಿಸ್ಮಯಕೆ ನಿಂದರು ಬೆರಗಾಗುತಲಿ

ಮನದಲಿ ಕಾಡಿದವು ತಲ್ಲಣಗಳು ನೂರೆಂಟು
ಗೆಳೆಯರೆಲ್ಲ ಕೂಡಿ ನಲಿದರೇನುಂಟು
ಗುರುಗಳ ಬಳಿ ಓಡಿದರು ಅರ್‍ತಿಯಲಿ
ಪ್ರಶ್ನೆಗಳ ಕೇಳಿದರು ಕೌತುಕದಲಿ

ತುಂತುರು ಹನಿಗಳ ಸೀಳಿದ ಚಿತ್ತಾರ
ಬೆಳಕಿನ ವಿಕಿರಣಗಳ ಚಮತ್ಕಾರ
ಎಂಥ ಅದ್ಭುತ ಸೃಷ್ಟಿ ಎನಲು
ಬಿಟ್ಟರು ಕಣ್ಘಳ ಅಚ್ಚರಿಯಲಿ

ಮೂಡುವುದು ಬಿನ್ನಾಣ ಕಲ್ಯಾಣ
ಸೂರ್‍ಯನ ಎದುರು ದಿಕ್ಕಿನಲಿ
ಆಗಸದ ಕುಸುರಿಗೆ ಕಾರಣವು
ಬೆಳಕಿನ ವರ್‍ಣ ವಿಭಜನೆಯು

ಪ್ರಕೃತಿ ನಿಘಂಟಿನಲಿ
ಏನೆಲ್ಲ ವೈಚಿತ್ರ್ಯಗಳುಂಟು ಎನಲು
ಹೊಳೆಯಿತು ಮಿಂಚು ಎಲ್ಲರ ಕಣ್ಣಿನಲು
ತೇಲಿತು ನಗೆಯೊಂದು ಮಂದಹಾಸದಲಿ
*****
೧೧ ಮಾರ್ಚ್ ೨೦೧೦ ರ ಸುಧಾ ವಾರಪತ್ರಿಕೆಯ ಎಳೆಯರ ಅಂಗಳದಲ್ಲಿ ಪ್ರಕಟ.
೨-೫-೨೦೧೦ ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...