Home / ಕವನ / ಕವಿತೆ / ಧರ್‍ಮ ಮತ್ತು ಸೇಡು

ಧರ್‍ಮ ಮತ್ತು ಸೇಡು

ಯುಗ ಯುಗಗಳು ಕಳೆದರೂ
ನಾವು ಮಾಡಿದ್ದೇನು?
ನಾವು ಸಾಧಿಸಿದ್ದೇನು?

ಹುಟ್ಟು ಹಾಕಿದ್ದೇವೆ
ಎಲ್ಲೆಂದರಲ್ಲಿ ಭಯೋತ್ಪಾದನೆಯ
ಅಂಥ್ರಾಕ್ಸ್ ಮೃತ್ಯುಮಾರಿ
ಜೈವಿಕ ಬಾಂಬಿನ ಅಟ್ಟಹಾಸದಲಿ
ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ?
ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕಿನಂತೆ
ಚಾಚುತಿದೆ ಕಾಲನ ಕೆನ್ನಾಲಿಗೆ
ಉಗ್ರರ ಅಟ್ಟಹಾಸ ನಿದ್ದೆಗೆಡಿಸಿ
ಬೆಚ್ಚಿ ಬೀಳಿಸುತಿದೆ
ಮಿನುಗುವ ಮುಂಚೆ ಕಮರಿಗೆ
ಹಾಡುವ ಮುನ್ನ ದನಿ ಬತ್ತಿದೆ
ಕವಿತೆ ಬರೆಯುವ ಕೈ ನಿಂತಿದೆ

ಧರ್‍ಮದ ಹೆಸರಿನಲಿ
ನಡೆಸಿದವನೊಬ್ಬ ದುಷ್ಕೃತ್ಯವ
ಇದರ ಸೇಡನು ತೀರಿಸುತಿಹನು
ಸಾಮ್ರಾಜ್ಯ ಶಾಹಿಯೊಬ್ಬ
ಇವರೀರ್‍ವರ
ಯುದ್ಧದ ಮಾರಣ ಹೋಮದಲಿ
ಜಗತ್ತು ಅನುಭವಿಸುತಿದೆ ನರಕಯಾತನೆ
ಬಟ್ಟ ಬಯಲಲಿ ತುತ್ತಿಗಾಗಿ
ಆಸೆಗಣ್ಣುಗಳು ನಿಂತಿವೆ ಕಾಯುತ್ತಾ
ಕನಲಿದ ಮುಗ್ಧ ಮಕ್ಕಳು
ರೋಧಿಸುವ ಹೆಂಗೆಳೆಯರು
ಹಣ್ಣು ಕಣ್ಣುಗಳ ಕಂಡ ಕಲ್ಲೆದೆಯು ಕರಗುತಿದೆ
ಅಲ್ಲಿನ ಜನರ ಪ್ರಾಣ ಸಂಕಟಕೆ
ಸ್ಪಂದಿಸುವವರ್‍ಯಾರು?

ಇದರ ನಡುವೆ ಕೋಮುವಾದ
ಅವರು-ಇವರನು ಅಲ್ಲಲ್ಲ!
ಅವರವರೇ ಕಾದಾಡಲು
ಹಚ್ಚಿಹರು ಕಿಚ್ಚನು

ಪ್ರಾಣ ತೆತ್ತದ್ದು ಗಿಡ ಮರ ಬಳ್ಳಿ
ಧಮನ ಮಾಡುವನೆಂದು ಹೇಳುವರು
ಪುನಃ ಹುಟ್ಟುಹಾಕುವರು
ಧರ್ಮದ ಸೋಗಿನಲಿ ಸೇಡು
ಇದರ ಹಿಂದೆ ಏನು ಅಡಗಿಹುದೋ
ಅಮಾಯಕರಿಗೇನು ತಿಳಿದೀತು
ಆದರೆ!
ನಾವು ಆಗೇವಿ
ಬೆತ್ತಲೆ ಮರದ್ಹಾಂಗ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ