Home / ಕವನ / ಕವಿತೆ / ಧರ್‍ಮ ಮತ್ತು ಸೇಡು

ಧರ್‍ಮ ಮತ್ತು ಸೇಡು

ಯುಗ ಯುಗಗಳು ಕಳೆದರೂ
ನಾವು ಮಾಡಿದ್ದೇನು?
ನಾವು ಸಾಧಿಸಿದ್ದೇನು?

ಹುಟ್ಟು ಹಾಕಿದ್ದೇವೆ
ಎಲ್ಲೆಂದರಲ್ಲಿ ಭಯೋತ್ಪಾದನೆಯ
ಅಂಥ್ರಾಕ್ಸ್ ಮೃತ್ಯುಮಾರಿ
ಜೈವಿಕ ಬಾಂಬಿನ ಅಟ್ಟಹಾಸದಲಿ
ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ?
ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕಿನಂತೆ
ಚಾಚುತಿದೆ ಕಾಲನ ಕೆನ್ನಾಲಿಗೆ
ಉಗ್ರರ ಅಟ್ಟಹಾಸ ನಿದ್ದೆಗೆಡಿಸಿ
ಬೆಚ್ಚಿ ಬೀಳಿಸುತಿದೆ
ಮಿನುಗುವ ಮುಂಚೆ ಕಮರಿಗೆ
ಹಾಡುವ ಮುನ್ನ ದನಿ ಬತ್ತಿದೆ
ಕವಿತೆ ಬರೆಯುವ ಕೈ ನಿಂತಿದೆ

ಧರ್‍ಮದ ಹೆಸರಿನಲಿ
ನಡೆಸಿದವನೊಬ್ಬ ದುಷ್ಕೃತ್ಯವ
ಇದರ ಸೇಡನು ತೀರಿಸುತಿಹನು
ಸಾಮ್ರಾಜ್ಯ ಶಾಹಿಯೊಬ್ಬ
ಇವರೀರ್‍ವರ
ಯುದ್ಧದ ಮಾರಣ ಹೋಮದಲಿ
ಜಗತ್ತು ಅನುಭವಿಸುತಿದೆ ನರಕಯಾತನೆ
ಬಟ್ಟ ಬಯಲಲಿ ತುತ್ತಿಗಾಗಿ
ಆಸೆಗಣ್ಣುಗಳು ನಿಂತಿವೆ ಕಾಯುತ್ತಾ
ಕನಲಿದ ಮುಗ್ಧ ಮಕ್ಕಳು
ರೋಧಿಸುವ ಹೆಂಗೆಳೆಯರು
ಹಣ್ಣು ಕಣ್ಣುಗಳ ಕಂಡ ಕಲ್ಲೆದೆಯು ಕರಗುತಿದೆ
ಅಲ್ಲಿನ ಜನರ ಪ್ರಾಣ ಸಂಕಟಕೆ
ಸ್ಪಂದಿಸುವವರ್‍ಯಾರು?

ಇದರ ನಡುವೆ ಕೋಮುವಾದ
ಅವರು-ಇವರನು ಅಲ್ಲಲ್ಲ!
ಅವರವರೇ ಕಾದಾಡಲು
ಹಚ್ಚಿಹರು ಕಿಚ್ಚನು

ಪ್ರಾಣ ತೆತ್ತದ್ದು ಗಿಡ ಮರ ಬಳ್ಳಿ
ಧಮನ ಮಾಡುವನೆಂದು ಹೇಳುವರು
ಪುನಃ ಹುಟ್ಟುಹಾಕುವರು
ಧರ್ಮದ ಸೋಗಿನಲಿ ಸೇಡು
ಇದರ ಹಿಂದೆ ಏನು ಅಡಗಿಹುದೋ
ಅಮಾಯಕರಿಗೇನು ತಿಳಿದೀತು
ಆದರೆ!
ನಾವು ಆಗೇವಿ
ಬೆತ್ತಲೆ ಮರದ್ಹಾಂಗ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...