Home / ಕವನ / ಕವಿತೆ / ಧರ್‍ಮ ಮತ್ತು ಸೇಡು

ಧರ್‍ಮ ಮತ್ತು ಸೇಡು

ಯುಗ ಯುಗಗಳು ಕಳೆದರೂ
ನಾವು ಮಾಡಿದ್ದೇನು?
ನಾವು ಸಾಧಿಸಿದ್ದೇನು?

ಹುಟ್ಟು ಹಾಕಿದ್ದೇವೆ
ಎಲ್ಲೆಂದರಲ್ಲಿ ಭಯೋತ್ಪಾದನೆಯ
ಅಂಥ್ರಾಕ್ಸ್ ಮೃತ್ಯುಮಾರಿ
ಜೈವಿಕ ಬಾಂಬಿನ ಅಟ್ಟಹಾಸದಲಿ
ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ?
ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕಿನಂತೆ
ಚಾಚುತಿದೆ ಕಾಲನ ಕೆನ್ನಾಲಿಗೆ
ಉಗ್ರರ ಅಟ್ಟಹಾಸ ನಿದ್ದೆಗೆಡಿಸಿ
ಬೆಚ್ಚಿ ಬೀಳಿಸುತಿದೆ
ಮಿನುಗುವ ಮುಂಚೆ ಕಮರಿಗೆ
ಹಾಡುವ ಮುನ್ನ ದನಿ ಬತ್ತಿದೆ
ಕವಿತೆ ಬರೆಯುವ ಕೈ ನಿಂತಿದೆ

ಧರ್‍ಮದ ಹೆಸರಿನಲಿ
ನಡೆಸಿದವನೊಬ್ಬ ದುಷ್ಕೃತ್ಯವ
ಇದರ ಸೇಡನು ತೀರಿಸುತಿಹನು
ಸಾಮ್ರಾಜ್ಯ ಶಾಹಿಯೊಬ್ಬ
ಇವರೀರ್‍ವರ
ಯುದ್ಧದ ಮಾರಣ ಹೋಮದಲಿ
ಜಗತ್ತು ಅನುಭವಿಸುತಿದೆ ನರಕಯಾತನೆ
ಬಟ್ಟ ಬಯಲಲಿ ತುತ್ತಿಗಾಗಿ
ಆಸೆಗಣ್ಣುಗಳು ನಿಂತಿವೆ ಕಾಯುತ್ತಾ
ಕನಲಿದ ಮುಗ್ಧ ಮಕ್ಕಳು
ರೋಧಿಸುವ ಹೆಂಗೆಳೆಯರು
ಹಣ್ಣು ಕಣ್ಣುಗಳ ಕಂಡ ಕಲ್ಲೆದೆಯು ಕರಗುತಿದೆ
ಅಲ್ಲಿನ ಜನರ ಪ್ರಾಣ ಸಂಕಟಕೆ
ಸ್ಪಂದಿಸುವವರ್‍ಯಾರು?

ಇದರ ನಡುವೆ ಕೋಮುವಾದ
ಅವರು-ಇವರನು ಅಲ್ಲಲ್ಲ!
ಅವರವರೇ ಕಾದಾಡಲು
ಹಚ್ಚಿಹರು ಕಿಚ್ಚನು

ಪ್ರಾಣ ತೆತ್ತದ್ದು ಗಿಡ ಮರ ಬಳ್ಳಿ
ಧಮನ ಮಾಡುವನೆಂದು ಹೇಳುವರು
ಪುನಃ ಹುಟ್ಟುಹಾಕುವರು
ಧರ್ಮದ ಸೋಗಿನಲಿ ಸೇಡು
ಇದರ ಹಿಂದೆ ಏನು ಅಡಗಿಹುದೋ
ಅಮಾಯಕರಿಗೇನು ತಿಳಿದೀತು
ಆದರೆ!
ನಾವು ಆಗೇವಿ
ಬೆತ್ತಲೆ ಮರದ್ಹಾಂಗ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...