Home / ಬಾಲ ಚಿಲುಮೆ / ಕವಿತೆ / ದಶಾವತಾರ ಮತ್ತು ಜೀವ ವಿಕಾಸ

ದಶಾವತಾರ ಮತ್ತು ಜೀವ ವಿಕಾಸ

ದೇವರ ದೇವನು ಮಹಾವಿಷ್ಣುವು
ದಶಾವತಾರವ ತಾಳಿದನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಲೋಕಕಲ್ಯಾಣವ ಮಾಡಿದನು-
ಹಿಂದಿನಿಂದಲೂ ಕೇಳುತಲಿರುವೆವು
ದಶಾವತಾರದ ಕಥೆಯನ್ನು
ಇಂದು ಬೇರೆಯೇ ರೀತಿಯೊಳರಿಯುವ
ಕಥೆಯಲಿ ಅಡಗಿದ ತತ್ವವನು!

ಮೊದಲಿಗೆ ಪ್ರಳಯವು ಘಟಿಸಿದ ಸಮಯದಿ
‘ಮತ್ಸ್ಯಾ’ವತಾರವ ತಾಳಿದ್ದು
ಸಮುದ್ರ ಮಥನವು ನಡೆಯುವ ವೇಳೆ
‘ಕೂರ್ಮಾ’ವತಾರವ ತಳೆದದ್ದು
ರಕ್ಕಸನಿಂದಲಿ ಭೂಮಿಯ ರಕ್ಷಿಸೆ
‘ವರಾಹ’ ರೂಪವ ಹೊಂದಿದ್ದು
ವಿಷ್ಣುಭಕ್ತ ಪ್ರಹ್ಲಾದನ ಉಳಿಸಲು
‘ನರಸಿಂಹ’ನು ತಾನಾಗಿದ್ದು
ಬಲಿಯನು ಪಾತಾಳದ ಕಡೆ ತುಳಿಯಲು
’ವಾಮನ’ ರೂಪವ ಧರಿಸಿದ್ದು

ಕಾರ್ತವೀರ್ಯನ ಮದವನು ಅಡಗಿಸಿ
‘ಪರಶುರಾಮ’ ತಾನೆನಿಸಿದ್ದು
ಪಿತೃವಾಕ್ಯ ಪರಿಪಾಲನೆ ಮಾಡಲು
‘ರಾಮ’ನಾಗಿ ಅವತರಿಸಿದ್ದು
ಕುರುಪಾಂಡವ ಸಂಗ್ರಾಮವ ನಡೆಸಿದ
‘ಕೃಷ್ಣ’ಪರಮಾತ್ಮನಾಗಿದ್ದು
ಆಸೆಯು ದುಃಖಕೆ ಮೂಲವು ಎನ್ನುತ
ತಿಳಿಸಲು ’ಬುದ್ಧ’ನು ಜನಿಸಿದ್ದು
ಅಧರ್ಮ ಅಳಿಸುತ ಧರ್ಮವ ಉಳಿಸಲು
‘ಕಲ್ಕಿ’ಯಾಗಿ ಅವತರಿಸುವುದು

ಹೀಗೆ ಹತ್ತು ಅವತಾರವು ಇರುವುವು
ಪುರಾಣದಲ್ಲಿನ ಕಥೆಗಳಲಿ
ಭಕ್ತಿಯಿಂದ ಮನೆಮಾಡಿಕೊಂಡಿಹವು
ನಂಬಿಕೊಂಡವರ ಎದೆಯಲ್ಲಿ!
ಮತ್ಸ್ಯ ನೀರಿನಲಿ ಮಾತ್ರ ಬದುಕುವುದು
ಮೊದಲ ಜೀವಿ ಈ ಸೃಷ್ಟಿಯಲಿ
ಕೂರ್ಮ ನೀರಿನಲಿ ಮತ್ತು ನೆಲದಲ್ಲಿ
ಬದುಕುವುದೆರಡೂ ಕಡೆಯಲ್ಲಿ
ವರಾಹ ನೆಲದಲಿ ಮಾತ್ರ ಬದುಕುವುದು
ಉಳಿಯಲಾರದದು ನೀರಿನಲಿ
ಅರ್ಧ ಪ್ರಾಣಿ ಇನ್ನರ್ಧ ಮಾನವನ
ರೂಪ ನರಸಿಂಹ ಕಂಭದಲಿ
ವಾಮನನೆಂದರೆ ಕುಬ್ಜ ದೇಹದವ
ಪೂರ್ಣ ಬೆಳೆದಿರದ ಮಾನವನು
ಪರಶುರಾಮನವ ಪೂರ್ಣನಾದರೂ
ರಾಗದ್ವೇಷದಲಿ ಉಳಿದವನು
ಮರ್ಯಾದಾಪುರುಷೋತ್ತಮನೆನಿಸಿದ
ರಾಮ ಪರಿಪೂರ್ಣನಾದವನು
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಕೃಷ್ಣಪರಮಾತ್ಮನೆನಿಸಿದನು
ಮಾನವನಾಸೆಗೆ ದುರಾಸೆ ಮನಸಿಗೆ
ಬುದ್ಧನು ಅಂತ್ಯವ ಹಾಡಿದನು
ಕುದುರೆಯೇರಿ ಖಡ್ಗವ ಝಳಪಿಸುತಲಿ
ಬರುವನೆನ್ನುವರು ಕಲ್ಕಿಯನು!

ಹತ್ತು ಅವತಾರ ಕ್ರಮದಲಿ ನೋಡಲು ಜೀವಿಕಾಸವು ಕಾಣುವುದು
ಜೀವಿ ನೀರಿನಲಿ ಹುಟ್ಟಿದ ನಂತರ ಬೆಳೆದು ಬಂದುದನು ತಿಳಿಸುವುದು
ಮೊದಲಿಗೆ ಜೀವಿಯು ನೀರಲಿ ಹುಟ್ಟಿತು
ನಂತರ ನೆಲದೆಡೆ ಬಂದಿತ್ತು
ಪ್ರಾಣಿ ಹಂತದಿಂದೇರುತ ಬಂದಿತು
ಮಾನವ ರೂಪವ ಹೊಂದಿತ್ತು!
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...