Home / ಲೇಖನ / ವಿಜ್ಞಾನ / ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್ಟು ಇದ್ದರೂ ಕೇವಾ ಸಮೃದ್ಧಿ ಮತ್ತು ಪ್ರತಿಷ್ಟೆಯಿಂದಾಗಿ ಬಹುರಾಷ್ಟ್ರೀಯ ಕಂಪನಿಗಳಿಂದ ತಯಾರಾದ ನಿಧಾನ ವಿಷಯುಕ್ತ ಔಷಧಿಯನ್ನು ಬಳೆಸುವುದರಲ್ಲಿ ಇತ್ತೀಚೆಗೆ ನಮ್ಮ ರೈತರು ದಾಪುಗಾಲು ಹಾಕುತ್ತಿದ್ದಾರೆ. ಕೇವಲ ಫಸಲನ್ನು ಹೆಚ್ಚು ಪಡಿಯುದರಲ್ಲಿ ಗಮನ ಹರಿಸಿದ್ದು ಭವಿಷ್ಯತ್ತಿನಲ್ಲಿ ಬೆಳೆ ಬೆಳೆಯುವ ಭೂಮಿಯೇ ಬಂಜರು ಆಗುತ್ತದೆಂಬ ಕಲ್ಪನೆ ಕೂಡ ಇರುವುದಿಲ್ಲ. ಶತಮಾನಗಳ ಅನುಭವ ಮತ್ತು ಜ್ಞಾನಗಳಿಂದ ರೂಪಿತಗೊಂಡ ಸಾಂಪ್ರದಾಯಿಕ ಸ್ವಾಭಾವಿಕ ಬೇಸಾಯ ಪದ್ಧತಿಗಳಿಂದ ಬಹುಮುಂದೆ ಓಡುತ್ತಿದ್ದಾನೆ ರೈತ ಪರಂಪರೆಗಳ ಮೌಲ್ಯಗಳಿಗೆ ತಿಲಾಂಜಲಿ ಇಕ್ಕಿದಾನೆ.

ಅತಿಬೇಗನೆ ಪರಿಣಾಮ ಬೀರುವ ರಾಸಾಯನಿಕ ಗೊಬ್ಬರಗಳು, ಔಷಧಗಳು ಅಸ್ವಾಭಾವಿಕ ತಳಿಗಳಿಂದಾಗಿ ತಲೆಮಾರುಗಳಿಂದ ಪರಿಪೂರ್ಣತೆ ಸಾಧಿಸಿದ ಕೃಷಿಪದ್ದತಿಗಳು, ತಳಿ ವೈವಿಧ್ಯತೆಗಳು ಇಂದು ಕಾಣದಂತಾಗಿವೆ. ಅತಿಯಾದ ರಸಗೊಬ್ಬರಗಳನ್ನು ಸಿಂಪಡಿಸುವುದರಿಂದ ಫಲಪ್ರದವಾದ ಭೂಮಿ ಪ್ರದೇಶವೆಲ್ಲ ಜಾಳು, ಕ್ಷಾರಗಳಿಲ್ಲದೇ ಹುಳಿ ಮಣ್ಣಾಗಿ ಪರಿವರ್ತನೆಗೊಂಡು ಕೃಷಿಗೆ ಅನುಕೂಲವಾದ ನೆಲ ಬರಡಾಗುತ್ತದೆ. ಬಂಜರವಾಗುತ್ತದೆ. ವರ್ಷಾನುಗಳಿಂದ ಸತತವಾಗಿ ಕೇವಲ ಪ್ರಧಾನ ಪೋಷಕಗಳ ಬಳಕೆಯಿಂದಾಗಿ ಭೂಮಿಯ ಸತ್ವವೆಲ್ಲ ಖಾಲಿಯಾಗಿ ಹೋಗಿದೆ. ಅಸಮತೋಲನ ರಾಸಾಯನಿಕಗಳ ಬಳಕೆಯಿಂದಾಗಿ ಬೆಳೆಯ ಪ್ರತಿರೋಧಕತೆ ಬಲಹೀನಗೊಂಡು ಆಹಾರದ ಪ್ರಮಾಣ ಮತ್ತು ಗುಣಮಟ್ಟದ ನಷ್ಟದಲ್ಲಿ ರೈತ ಇಂದು ಬಳಲುತ್ತಿದ್ದಾನೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಊಹಿಸಲಾರದಷ್ಟು ಬದಲಾಗಿದ್ದು ನೈಸರ್ಗಿಕ ಸಾರಜನಕ ಸ್ಥೀರಿಕರಣ ಕ್ರಿಯೆ ಚಿಂದಿಯಾಗಿದೆ. ಪರಿಸರದ ಹಲವು ಸ್ವಾಭಾವಿಕ ಚಕ್ರಗಳು ಸಮರಸಗೊಳ್ಳುವಲ್ಲಿ ವಿಫಲವಾಗಿವೆ. ಕೃಷಿಯಲ್ಲಿನ ಜೀವ ವೈವಿಧ್ಯ ನಶಿಸಿ ಹೋಗಿದೆ. ಈ ರಸಗೊಬ್ಬರಗಳ ಪ್ರಭಾವದಿಂದಾಗಿ ಮಣ್ಣಿನ ಸಾವಯವ ವಸ್ತುಗಳು ಕ್ಷೀಣಿಸುವುದರ ಜತೆಗೆ ಜೈವಿಕ ಗುಣಗಳು ನಾಶಗೊಳ್ಳುತ್ತಿವೆ. ಆಮ್ಲಜನಕ ಮತ್ತು ತೇವಾಂಶ ಧಾರಣಶಕ್ತಿ ಕುಂದುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಹಲವು ರಾಸಾಯನಿಕಗಳು ಬೆಳೆಯಿಂದ ಕೆಳಗೆ ಬಿದ್ದು ಹೆಚ್ಚಾಗಿ ಮಣ್ಣನ್ನು ಸೇರುವ ಸಂಭವವಿರುತ್ತದೆ. ಇವು ಮಣ್ಣಿನೊಳಗೆ ಇದ್ದು ಕೆಲವೊಮ್ಮೆ ಆಹಾರ ಸರಪಳಿಗೆ ಸೇರಿದ ಉದಾಹರಣೆಗಳು ಇಲ್ಲದಿಲ್ಲ. ಸಂಪೂರ್ಣ ಬೆಳೆಯ ರೋಗಗಳಿಗೆ ಬೀಳದೆ ಇರುವ D.D.T. ಯು ತಾಯಿಯ ಎದೆಹಾಲಿನಲ್ಲೂ ಕಾಣಿಸಿಕೊಳ್ಳಬಹುದು. ಶಿಶು ಮತ್ತು ಪಶು ಆರೋಗ್ಯದ ಮೇಲೆ ನೀರಿನಲ್ಲಿ ಬೆರೆತ ನೈಟ್ರೈಟ್, ವಿಷಯುಕ್ತತೆಗಳ ಪರಿಣಾಮಗಳ ಹಲವಾರು ಪ್ರದೇಶಗಳಿಂದ ದಾಖಲಾಗಿವೆ. ಮಾನವ, ಭೂಮಿ ಪರಿಸರದ ನಡುವೆ ಇರುವ ಸರಪಳಿಯ ಬಿಚ್ಚುವ ಕಾಲದೂರವಿಲ್ಲ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...