Home / ಲೇಖನ / ವಿಜ್ಞಾನ / ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಕ್ರಿಮಿನಾಶಕಗಳು ನೆಲವನ್ನು ಜನವನ್ನು ಕೊಲ್ಲುತ್ತವೆ

ಇತ್ತೀಚಿನ ದಿನಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಏನೆಲ್ಲ ಜಾಡ್ಯಗಳು ತಗುಲಿಕೊಂಡು ಪೈರನ್ನು ನಾಶಪಡಿಸುತ್ತಿರುವುದು ಸರ್ವ ವೇದ್ಯ. ಈ ಬೆಳೆಗಳಿಗೆ ತಗುಲವ ಕೀಟಗಳ ಭಾದೆಗಳಿಂದ ಬೆಳೆಗಳನ್ನು ರಕ್ಷಿಸಲು ನಮ್ಮದೇಶಿ ಔಷಧಿಗಳು ಬೇಕಾದಷ್ಟು ಇದ್ದರೂ ಕೇವಾ ಸಮೃದ್ಧಿ ಮತ್ತು ಪ್ರತಿಷ್ಟೆಯಿಂದಾಗಿ ಬಹುರಾಷ್ಟ್ರೀಯ ಕಂಪನಿಗಳಿಂದ ತಯಾರಾದ ನಿಧಾನ ವಿಷಯುಕ್ತ ಔಷಧಿಯನ್ನು ಬಳೆಸುವುದರಲ್ಲಿ ಇತ್ತೀಚೆಗೆ ನಮ್ಮ ರೈತರು ದಾಪುಗಾಲು ಹಾಕುತ್ತಿದ್ದಾರೆ. ಕೇವಲ ಫಸಲನ್ನು ಹೆಚ್ಚು ಪಡಿಯುದರಲ್ಲಿ ಗಮನ ಹರಿಸಿದ್ದು ಭವಿಷ್ಯತ್ತಿನಲ್ಲಿ ಬೆಳೆ ಬೆಳೆಯುವ ಭೂಮಿಯೇ ಬಂಜರು ಆಗುತ್ತದೆಂಬ ಕಲ್ಪನೆ ಕೂಡ ಇರುವುದಿಲ್ಲ. ಶತಮಾನಗಳ ಅನುಭವ ಮತ್ತು ಜ್ಞಾನಗಳಿಂದ ರೂಪಿತಗೊಂಡ ಸಾಂಪ್ರದಾಯಿಕ ಸ್ವಾಭಾವಿಕ ಬೇಸಾಯ ಪದ್ಧತಿಗಳಿಂದ ಬಹುಮುಂದೆ ಓಡುತ್ತಿದ್ದಾನೆ ರೈತ ಪರಂಪರೆಗಳ ಮೌಲ್ಯಗಳಿಗೆ ತಿಲಾಂಜಲಿ ಇಕ್ಕಿದಾನೆ.

ಅತಿಬೇಗನೆ ಪರಿಣಾಮ ಬೀರುವ ರಾಸಾಯನಿಕ ಗೊಬ್ಬರಗಳು, ಔಷಧಗಳು ಅಸ್ವಾಭಾವಿಕ ತಳಿಗಳಿಂದಾಗಿ ತಲೆಮಾರುಗಳಿಂದ ಪರಿಪೂರ್ಣತೆ ಸಾಧಿಸಿದ ಕೃಷಿಪದ್ದತಿಗಳು, ತಳಿ ವೈವಿಧ್ಯತೆಗಳು ಇಂದು ಕಾಣದಂತಾಗಿವೆ. ಅತಿಯಾದ ರಸಗೊಬ್ಬರಗಳನ್ನು ಸಿಂಪಡಿಸುವುದರಿಂದ ಫಲಪ್ರದವಾದ ಭೂಮಿ ಪ್ರದೇಶವೆಲ್ಲ ಜಾಳು, ಕ್ಷಾರಗಳಿಲ್ಲದೇ ಹುಳಿ ಮಣ್ಣಾಗಿ ಪರಿವರ್ತನೆಗೊಂಡು ಕೃಷಿಗೆ ಅನುಕೂಲವಾದ ನೆಲ ಬರಡಾಗುತ್ತದೆ. ಬಂಜರವಾಗುತ್ತದೆ. ವರ್ಷಾನುಗಳಿಂದ ಸತತವಾಗಿ ಕೇವಲ ಪ್ರಧಾನ ಪೋಷಕಗಳ ಬಳಕೆಯಿಂದಾಗಿ ಭೂಮಿಯ ಸತ್ವವೆಲ್ಲ ಖಾಲಿಯಾಗಿ ಹೋಗಿದೆ. ಅಸಮತೋಲನ ರಾಸಾಯನಿಕಗಳ ಬಳಕೆಯಿಂದಾಗಿ ಬೆಳೆಯ ಪ್ರತಿರೋಧಕತೆ ಬಲಹೀನಗೊಂಡು ಆಹಾರದ ಪ್ರಮಾಣ ಮತ್ತು ಗುಣಮಟ್ಟದ ನಷ್ಟದಲ್ಲಿ ರೈತ ಇಂದು ಬಳಲುತ್ತಿದ್ದಾನೆ. ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಊಹಿಸಲಾರದಷ್ಟು ಬದಲಾಗಿದ್ದು ನೈಸರ್ಗಿಕ ಸಾರಜನಕ ಸ್ಥೀರಿಕರಣ ಕ್ರಿಯೆ ಚಿಂದಿಯಾಗಿದೆ. ಪರಿಸರದ ಹಲವು ಸ್ವಾಭಾವಿಕ ಚಕ್ರಗಳು ಸಮರಸಗೊಳ್ಳುವಲ್ಲಿ ವಿಫಲವಾಗಿವೆ. ಕೃಷಿಯಲ್ಲಿನ ಜೀವ ವೈವಿಧ್ಯ ನಶಿಸಿ ಹೋಗಿದೆ. ಈ ರಸಗೊಬ್ಬರಗಳ ಪ್ರಭಾವದಿಂದಾಗಿ ಮಣ್ಣಿನ ಸಾವಯವ ವಸ್ತುಗಳು ಕ್ಷೀಣಿಸುವುದರ ಜತೆಗೆ ಜೈವಿಕ ಗುಣಗಳು ನಾಶಗೊಳ್ಳುತ್ತಿವೆ. ಆಮ್ಲಜನಕ ಮತ್ತು ತೇವಾಂಶ ಧಾರಣಶಕ್ತಿ ಕುಂದುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಹಲವು ರಾಸಾಯನಿಕಗಳು ಬೆಳೆಯಿಂದ ಕೆಳಗೆ ಬಿದ್ದು ಹೆಚ್ಚಾಗಿ ಮಣ್ಣನ್ನು ಸೇರುವ ಸಂಭವವಿರುತ್ತದೆ. ಇವು ಮಣ್ಣಿನೊಳಗೆ ಇದ್ದು ಕೆಲವೊಮ್ಮೆ ಆಹಾರ ಸರಪಳಿಗೆ ಸೇರಿದ ಉದಾಹರಣೆಗಳು ಇಲ್ಲದಿಲ್ಲ. ಸಂಪೂರ್ಣ ಬೆಳೆಯ ರೋಗಗಳಿಗೆ ಬೀಳದೆ ಇರುವ D.D.T. ಯು ತಾಯಿಯ ಎದೆಹಾಲಿನಲ್ಲೂ ಕಾಣಿಸಿಕೊಳ್ಳಬಹುದು. ಶಿಶು ಮತ್ತು ಪಶು ಆರೋಗ್ಯದ ಮೇಲೆ ನೀರಿನಲ್ಲಿ ಬೆರೆತ ನೈಟ್ರೈಟ್, ವಿಷಯುಕ್ತತೆಗಳ ಪರಿಣಾಮಗಳ ಹಲವಾರು ಪ್ರದೇಶಗಳಿಂದ ದಾಖಲಾಗಿವೆ. ಮಾನವ, ಭೂಮಿ ಪರಿಸರದ ನಡುವೆ ಇರುವ ಸರಪಳಿಯ ಬಿಚ್ಚುವ ಕಾಲದೂರವಿಲ್ಲ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...