Home / ಕವನ / ಕವಿತೆ / ಸಂಕಟ

ಸಂಕಟ

ರಥ, ಹರಿದಂತೆ ಈ ಬಾಳು
ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ
ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ

ಹೋಗುವವೆ ಒಳ್ಳೆ ಕಾಲ
ಬರುವವೆ ಕೆಟ್ಟ ಕಾಲ
ನಮ್ಮದೂ ಒಂದು ಕಾಲಾನಾ?

ಏನು ಹೇಳಲಿ ಅಂದಿನ ವೈಭವವಾ-
ಎಲ್ಲಾ ಕೈ ನೀಡಿದಂಗಿತ್ತು
ಎತ್ತ ನೋಡಿದರು ಊರು ಕಾಲು ಕಟ್ಟಿದಂಗೆ ನಮ್ಮ
ಜಮೀನು ಕಾಣಿಗಳೆ

ಎಂಟಾರಿನ ಬೇಸಾಯ
ಕೈಗೊಬ್ಬ ಕಾಲಿಗೊಬ್ಬ ಅಳು
ಕುಡಿಯವಷ್ಟು ಕರೇವು
ಜೊತೆಗೆ ಗೌಡಿಕೆ ಬೇಕೆ
ಇನ್ನು ಕೇಳಬೇಕೆ!
ನಾಲ್ಕು ಜನರಿಗೆ ಬೇಕಾಗಿಬದುಕಿದರು ಹಿರಿಯರು

ನಮಗೆ ಊರು ಮನೆ ಏಕಪಥವಾಗಿತ್ತು
ತೋಳಿಂದ ಇಳಿಯಲಿಲ್ಲ-
ಮನೆಯವರು ತಪ್ಪ ಊರವರು
ಊರವರು ತಪ್ಪ ಮನೆಯವರು
ಆಡಿಸಿ ಬೆಳೆಸಿದರು

ಅದೆಲ್ಲಾ ಈಗ ಮುಗಿದ ಅಧ್ಯಾಯ!
ಹಿರಿಯರು ಹೋದರು
ಜೊತೆಗೆ ಎಲ್ಲವೂ ಹೋಯಿತು
ಪಾಂಡವರ ಬೀಳಾಗಿ ಹೋಯಿತು.

ಏನಾಯಿತೋ ಏನು ಕತೆಯೋ
ಭಗ್ಗನೆ ಬರಿದಾಯತು
ಮನೆ ಉಳಿಯಲಿಲ್ಲ
ವಂಶ ಬೆಳೆಯಲಿಲ್ಲ

ಯಾವ ಬಾಯಲ್ಲಿ ಹೇಳಲಿ
ಅತ್ತಿಗೆ ಹೋದ ಮೇಲೆ ಅಣ್ಣ ಕೆಟ್ಟು ಬಿಟ್ಟ
ಎಲ್ಲಾ ಮರೆತು ಬಿಟ್ಟ
ಮಕ್ಕಳು ಬೀದಿಗೆ ಬಿದ್ದವು
ಅನ್ಯರ ಮನೆಯ ಜಗುಲಿಯಾಯಿತು.
ಅವುಗಳಾಯಿತು
ಯಾರಿದ್ದು ಏನು ಬಂತು?
ಶಿವಾ ಇಷ್ಟು ಕಠೋರನಾಗಬಾರದಿತ್ತು

ಯಾರನ್ನಂದು ಏನು ಬರುವುದು?
ನಾವು ಬೇಡಿ ಬಂದಿದ್ದೇ ಇಷ್ಟು!
ಹಿಂದೆ ನಾವ್ಯಾರ ತೌರ ತೊರೆಸಿದ್ದೇವೊ…
ಯಾವ ಪಾಪಕ್ಕಾಗಿ ಈ ಶಿಕ್ಷೆಯೋ
ಬಲ್ಲವರಾರು?

ಎಲ್ಲರೂ ತವರೂರಿಗೆ ಹೋಗಿ
ಒಂದೆರಡು ದಿನವಿದ್ದು
ಕೈಯಾರಿಸಿ ಕೊಂಡು ಬರುವರು
ನಾವೆಲ್ಲಿಗೆ ಹೋಗುವುದು?
ನೆನೆಯದ ದಿನವಿಲ್ಲ
ಕೊರಗದ ಕ್ಷಣವಿಲ್ಲ
ಮರವೆಯಾಗದಲ್ಲ?

ಯಾರಾದರೂ ಸಿಕ್ಕಿ ಸುದ್ದಿ ಹೇಳಿದರೆ
ಆದಿನವೆಲ್ಲ ತುತ್ತುಮಿದ್ದರೆ ಮಗಳಲ್ಲ
ಏನು ಮಾಡುವುದು ಹೇಳಿ
ಎದೆ ಕೊಟ್ಟ ನಿಲ್ಲೋಣವೆಂದರೆ
ಇಲ್ಲೂ ಬಗೆ ಮಿಗಿಯಿಲ್ಲ.

ಕಂಡರೆ ಕಣ್ಣುರಿ
ಕಾಣದಿದ್ದರೆ ಹೊಟ್ಟೆಯುರಿ
ಈ ರೀತಿ ಯಾಗಿದೇ ರೀ ನನ್ನ ಸ್ಥಿತಿ
ಅದಕ್ಕೆ,
ಕಾಣದಂಗೆ ಕಣ್ಮರೆಯಲ್ಲಿರುವುದೊಂದೇ ನನಗುಳಿದಿರುವ ದಾರಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...