ಕುಬ್ಜರು

ನಾವೆಲ್ಲ ಕುಬ್ಜರು
ಮನಸ್ಸು, ಬುದ್ಧಿ, ಭಾವನೆಯಿಂದ
ಚೇತನ, ಚಿಂತನ, ವಿವೇಕದಿಂದ
ನಾವು ವಿಶಿಷ್ಟರಲ್ಲ
ಸಾಮಾನ್ಯರು, ಅದಕೆಂದೆ
ಎಲ್ಲ ಕಾಲದಲ್ಲಿಯು
ಕುಬ್ಜರಿರ ಬೇಕೆಂದೆ
ಲೋಕದ ಬಯಕೆ.
ವಕ್ತಾರರಿಗೆ ಶೋತೃಗಳಾಗಿ
ನೇತಾರರಿಗೆ ಹಿಂಬಾಲಕರಾಗಿ
ಭೋಧಕರಿಗೆ ಪಾಠಕರು
ಅಂದೋಲನಕೆ ಗುಂಪು
ಧರ್ಮಕ್ಕೆ ಭಕ್ತರಾಗಿ,
ಸಂಪ್ರದಾಯಗಳಿಗೆ ಮತಿಮಂದರಾಗಿ
ಆಡಳಿತೆಗೆ ಬಾಬುಗಳು
ಗಿರಣಿಗಳಿಗೆ ಕಾರ್ಮಿಕರಾಗಿ
ತೋಪುಗಳಿಗೆ ಕಾರ್ತೂಸ್
ಪಕ್ಷದೊಡೆಯರಿಗೆ ಯಸ್‌ಮೆನ್
ಆಳುವವರಿಗೆ ಗುಲಾಮರಾಗಿ
ವ್ಯವಸ್ಥೆಗೆ ಭ್ರಷ್ಟರು
ಡೆಮೊಕ್ರಸಿಗೆ ಮಿಡಿಯೊಕರು
ಮತವಾದಿಗಳಿಗೆ ಮೂರ್ಖರು
ಪಾರ್ಟಿಯ ಅಂಧ ಅನುಯಾಯಿಗಳಾಗಿ
ನಾವೆಲ್ಲ
ಯುಗ ಯುಗದಿಂದ
ಅವರಿಗಾಗಿಯೆ ಬದುಕಿ ಬಂದಿದ್ದೇವೆ
ಕ್ರೀತದಾಸರು ನಾವು
ಇತಿಹಾಸದ ಚಿಂದಿ ಹೊಲಿಯುತ್ತೇವೆ
ಇತಿಹಾಸ ಅವರದು
ನಾವು ಶಾಯಿ ಮಾತ್ರ
ವಿಜಯ ಅವರದು
ನಾವು ಗಾಯಾಳುಗಳು
ಎಂದೆಂದಿಗೂ
ಗಾಯಗೊಂಡ ಸಿಪಾಯಿಯಾಗಿ
ಆ ದೈತ್ಯರ ಸೇವೆಗೈಯುತ
ಬದುಕ ಬೇಕಾಗಿದೆ
ಕುಬ್ಜರಾಗಿ.
*****
ಮೂಲ: ಗಿರಿಜಾ ಕುಮಾರ ಮಾಥುರ್
(ಹಿಂದಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರಿದ್ದರೇನಂತೆ
Next post ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…