Home / ಕವನ / ಅನುವಾದ / ಸಾವಿಗೆ ಒಡೆತನವಿಲ್ಲ

ಸಾವಿಗೆ ಒಡೆತನವಿಲ್ಲ

ಸಾವಿಗೆ ಸ್ವಾಮಿತ್ವವಿಲ್ಲ
ಸತ್ತವರು ನಗ್ನರಾಗುವರು
ಗಾಳಿಯಲೆಯಲಿ ಸುಳಿವ
ಮನುಷ್ಯನಲಿ ಮತ್ತು ಪಶ್ಚಿಮ ಚಂದ್ರನಲಿ
ಬೆರೆತು ಹೋಗುವರು.
ಅವರ ಎಲುವನ್ನು ಸರಿಯಾಗಿ ಹೆಕ್ಕುವಾಗ
ಶುದ್ಧ ಎಲುಬು ಮಾಯಾವಾಗುವುದು,
ಅವರ ಮೊಣಕ್ಕೆ ಪಾದಗಳಲಿ
ನಕ್ಷತ್ರ ಕಾಣುವುದು;
ಹುಚ್ಚರಾಗಿಯು ಅವರು ಮತಿವಂತರು,
ಸಮುದ್ರದಾಳದಲಿ ಮುಳುಗಿಯು
ಮತ್ತೆ ಏಳುವರು;
ಪ್ರೇಮಿಗಳು ಸಾಯುವರು
ಪ್ರೇಮ ಸಾಯದು
ಮತ್ತು ಸಾವಿಗೆ ಒಡೆತನವಿಲ್ಲ.
ಸಾಗರದಲೆಗಳ ಸುಳಿಯೊಳಗೆ
ಬಹುಕಾಲ ಸೇರಿಕೊಂಡರವರು
ಉದ್ದಕೆ ಒರಗಿ ಸಾಯಲಾರರು ಗಾಳಿಯಿಂದ.
ಚುಚ್ಚುವ ಮೊನಚು ಸರಲಿಗೆ
ಎದೆ ಕೊರೆಯುವಾಗಲು
ಗಾಲಿಗೆ ಬಿಗಿಯುವಾಗಲು
ಅವರು ಮುರಿಯರು ಬೇನೆಯಿಂದ.
ವಿಶ್ವಾಸ ಅವರ ಕೈಯಲಿ
ಎರಡು ತುಂಡಾಗುವುದು ಮತ್ತು
ಒಂದು ಕೋಡಿನ ದುಷ್ಟ ಮೃಗ
ಅವರನ್ನು ತೊಂದರೆಗೆ ಒಳಪಡಿಸುವುದು,
ಹೋಳಾಗಿ ಮುಗಿದರು ಅವರು ಒಡೆಯುವುದಿಲ್ಲ
ಸಾವಿಗೆಂದೂ ಸ್ವಾಮಿತ್ವವಿಲ್ಲ.
ಅವರ ಕಿವಿಯಲ್ಲಿ ಇನ್ನು ನೀರ್‌ಹಕ್ಕಿ
ಕೂಗಲಾರದು
ತೆರೆಗಳು ದಂಡೆಗೆ ಬಡಿದು
ಸದ್ದು ಮಾಡಲಾರವು
ಹೂವರಳುವಲ್ಲಿ ಇನ್ನು ಹೂವರಳದು
ಮಳೆಯ ಹೊಡೆತಕೆ ತಲೆ ಎತ್ತದು
ಸತ್ತ ಹುಚ್ಚು ಉಗುರಿನಂತಾದರು
ಮಲ್ಲಿಗೆಯ ಸುತ್ತಿಗೆಯಿಂದ
ಪಾತ್ರಗಳ ತಲೆಗೆ ಹೊಡೆದರು
ಬಿಸಿಲು ಬೀಳುವ ತನಕ ತಡೆದರು
ಬಿಸಿಲಿನಲ್ಲಿ.
ಸಾವಿಗೆ ಸ್ವಾಮಿತ್ವವೆಲ್ಲಿ.
*****
ಮೂಲ: ಸೈಲನ್ ಥೋಮಸ್
(And Death Shall Have No Dominion)

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...