Home / ಲೇಖನ / ಇತರೆ / ಮಿತಿ

ಮಿತಿ

ಪ್ರಿಯ ಸಖಿ,
ಇತ್ತೀಚೆಗೆ ಆತ್ಮೀಯರೊಬ್ಬರಿಗೆ ಅಪಘಾತವಾಗಿ ಸರ್ಕಾರಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ಅವರನ್ನು ನೋಡಲು ಹೋದೆ. ಆಸ್ಪತ್ರೆಯ ಎಲ್ಲ ವಾರ್ಡುಗಳಲ್ಲೂ ವಿವಿಧ ರೋಗಗಳಿಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಾಲು ಕಾಣಿಸಿತು. ನನ್ನ ಪರಿಚಿತರು ಎಲ್ಲೆಂದು ಬಿಳಿ ಯೂನಿಫಾರಂ ಧರಿಸಿದ್ದವರೊಬ್ಬರನ್ನು ಕೇಳಿದರೆ, ಅವರು ಸ್ಥಳದಲ್ಲೇ ಸತ್ತರು ಅನ್ಸುತ್ತೆ ಎಂದು ಬಿಟ್ಟರು! ಇದನ್ನು ಕೇಳಿ ಜೀವ ಬಾಯಿಗೆ ಬಂದಾಯ್ತು. ಆತನ ಪಕ್ಕದಲ್ಲಿದ್ದವರು ತುರ್ತು ಚಿಕಿತ್ಸಾ ವಿಭಾಗಕ್ಕೆ ಹೋಗಿ ವಿಚಾರಿಸಿ ಎಂದು ದಾರಿ ತೋರಿದರು. ಅಲ್ಲಿ ಬಂದು ನೋಡಿದರೆ……..  ಅದೊಂದು ಜೀವಂತ ನರಕ!

ಕೈ ಕತ್ತರಿಸಿದ್ದವರು, ಕಾಲು ಕತ್ತರಿಸಿದ್ದವರು, ತಲೆಗೆ ಏಟು ಬಿದ್ದವರು, ಮೂಳೆ ಮುರಿದವರು, …… ಇತ್ಯಾದಿ ಅಪಘಾತಕ್ಕೊಳಗಾದವರ ಸಾಲು ಮಂಚಗಳು. ಮೃತ್ಯುಲೋಕವನ್ನು ಹೊಕ್ಕು ಬಂದಂತಹಾ ಪ್ರೇತ ಕಳೆಯಾಡುವ ಮುಖಗಳು! ಮಂಚಗಳಲ್ಲೊಂದರಲ್ಲಿ ನನ್ನ ಆತ್ಮೀಯರು! ಆ ಎಲ್ಲ ನೋವಿನಿಂದ ಮುಲುಗುಟ್ಟುವ ಸದ್ದಿನಡಿಯಿಂದಲೇ ಮೂಡಿ ಬಂತೊಂದು ಕರುಳು-ಕಿವುಚುವ ಆರ್ತನಾದ! ಅಬ್ಬಾ! ಅದು ಎಷ್ಟು ಮಾರ್ಮಿಕವಾಗಿತ್ತೆಂದರೆ………. ಸಖಿ, ನಾನದನ್ನು ವರ್ಣಿಸಲಾರೆ. ನೋವನ್ನು ಬಣ್ಣಬಣ್ಣದ ಪದಗಳಿಂದ ವರ್ಣಿಸುತ್ತಾ ನೋವಿನನುಭವವನ್ನು ಸಣ್ಣಗಾಗಿಸಲಾರೆ! ಬಹುಶಃ ಅದನ್ನು ಯಾವ ಕವಿಯೂ ಕವಿತೆಯಾಗಿಸಲಾರ. ಯಾವ ಸಂಗೀತಗಾರನೂ ನೋವು ತುಂಬಿ ಹಾಡಲಾರ, ಯಾವ ಚಿತ್ರಗಾರನೂ ತನ್ನ ಚಿತ್ರ, ಶಿಲ್ಪದಲ್ಲಿ ಚಿತ್ರಿಸಲಾರ. ನಿಜಕ್ಕೂ ಆ ವೇದನೆಯನ್ನು ಯಾವ ಸಮರ್ಥ ನಟನೂ ಅಭಿನಯಿಸಿ ತೋರಿಸಲಾರ. ಆ ಕ್ಷಣದಲ್ಲಿ ಅವ್ಯಕ್ತ ಭಾವವೊಂದು ಮನವನ್ನು ಆವರಿಸಿ ಮಿಕ್ಕಿದ್ದೆಲ್ಲಾ ಮಿಥ್ಯ. ಆ ನೋವು ತುಂಬಿದ ಆರ್ತನಾದವೊಂದೇ ಸತ್ಯ ಎನಿಸಿಬಿಟ್ಟಿತು. ಅತ್ಯಂತ ಸಮರ್ಥ ಕಲಾವಿದ ಕೂಡ ಇದರ ಹತ್ತಿರಕ್ಕೆ ಹೋಗಬಲ್ಲ, ಆ ಭಾವನೆಯೇ ಆಗಲಾರ ಅದು ಕಲಾವಿದನ ಮಿತಿಯೂ ಹೌದು!

ಸಖಿ, ಹಾಗಿದ್ದರೆ ಇಂತಹ ಹೃದ್ಯಭಾವನೆಗಳನ್ನು ಹಿಡಿದಿಡಲು ಯಾವ ಸೃಜನಶೀಲ ಕಲೆಗೂ ಸಾಧ್ಯವಿಲ್ಲವೇ? ಗುರುಗಳೊಬ್ಬರು ಹೇಳುತ್ತಿದ್ದುದು ನೆನಪಾಗುತ್ತದೆ. ಇಲ್ಲಿ ಎಷ್ಟೊಂದು ಕಣ್ಣಿನಿಂದ ನೋಡಲಾಗುವುದಿಲ್ಲ. ಅದನ್ನು ಹೃದಯದಿಂದ ಮಾತ್ರ ಅನುಭವಿಸಲು ಸಾಧ್ಯ. ಪ್ರಿಯ ಸಖಿ, ಯಾವ ಮಾಧ್ಯಮದಲ್ಲೂ ಸಮರ್ಥವಾಗಿ ನಮ್ಮ ಎಲ್ಲ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗದೇ ಸೋಲುತ್ತೇವೆ. ಹಾಗೆ ಸೋತರೂ ಸರಿಯೇ, ಮಾನವನ ಎಲ್ಲ ಭಾವನೆಗಳನ್ನೂ ಹೃದಯದಿಂದ ಅನುಭವಿಸಲೂ ಆಗದಂತೆ ನಾವು ಸೋಲುವುದು ಬೇಡ. ನಾವು ಮಾನವರೆನ್ನುವುದನ್ನು ಎಂದಿಗೂ ಮರೆಯದಿರೋಣ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...