Home / ಲೇಖನ / ಇತರೆ / ಗೆಳೆತನ

ಗೆಳೆತನ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಪ್ರತಿಯೊಬ್ಬರ ಬಾಳಿನಲ್ಲೂ ಗೆಳೆತನವೆನ್ನುವುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಷ್ಟೋ ಬಾರಿ ಗೆಳೆತನವೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಅದಕ್ಕೆಂದೇ ಆಂಗ್ಲ ನಾಣ್ಣುಡಿಯೊಂದು “ನಿನ್ನ ಗೆಳೆಯನನ್ನು ತೋರಿಸು ನೀನು ಏನೆಂದು ಹೇಳುತ್ತೇನೆ” ಎನ್ನುತ್ತದೆ. ಮಾನವ ಸಂಘಜೀವಿ ಅವನಿಗೆ ಸ್ನೇಹಿತರು ಬೇಕೇಬೇಕು. ಆದರೆ ಜಾರ್ಜ್ ವಾಷಿಂಗ್ಟನ್ ಅವರ ಈ ಮಾತುಗಳನ್ನು ನೋಡು

associate yourself with
men of good quality
if you esteem your
own reputation,
for it is better to be
alone than in
bad company

ನಿನ್ನ ಗೌರವ, ಪ್ರತಿಷ್ಟೆಗೆ ಬೆಲೆ ಕೊಡುವುದಾದರೆ ಉತ್ತಮ ಗುಣಗಳಿರುವ ವ್ಯಕ್ತಿಗಳೊಂದಿಗೆ ಸೇರು. ಕೆಟ್ಟವರ ಸಹವಾಸಕ್ಕಿಂತ ಒಂಟಿಯಾಗಿರುವುದೇ ಲೇಸು ಎಂದು ಹಿತನುಡಿಗಳನ್ನಾಡಿದ್ದಾರೆ. ಉತ್ತಮ ಗುಣಗಳಿರುವ ವ್ಯಕ್ತಿ ನಮ್ಮ ಗೆಳೆಯನಾದರೆ ಅವನಿಂದ ನಾವೂ ಉತ್ತಮರಾಗಲು ಸಾಧ್ಯ. ಜೊತೆಗೆ ಅಂತಹ ವ್ಯಕ್ತಿಯ ಸಾಹಚರ್ಯದಿಂವ ನಮಗೆ ಗೌರವವೂ ಸಿಕ್ಕುತ್ತದೆ. ಅದೇ ಕೆಟ್ಟವರ ಸಹವಾಸದಿಂದ ಅವಮಾನ, ನೋವು, ಅಪಖ್ಯಾತಿಗಳು ಕಟ್ಟಿಟ್ಟ ಬುತ್ತಿ. ಜೊತೆಗೇ ಅಂತವರ ಒಡನಾಟದಿಂದ ನಮ್ಮ ಉತ್ತಮ ಗುಣಗಳೂ ಮಸುಕಾಗಿ ಹೋಗುತ್ತವೆ. ಆದ್ದರಿಂದಲೇ ಇಂತವರ ಒಡನಾಟ, ಗೆಳೆತನಕ್ಕಿಂತ ಒಂಟಿಯಾಗಿರುವುದೇ ಮೇಲೆನ್ನುತ್ತಾರೆ ವಾಷಿಂಗ್ಟನ್.

ಉತ್ತಮ ಗೆಳೆಯರನ್ನು ಹೊಂದಲು ಪೂರ್ವಜನ್ಮದ ಪುಣ್ಯವಿರಬೇಕು ಎನ್ನುತ್ತಾರೆ ಹಿರಿಯರು. ಇದು ನಿಜವೂ ಹೌದು. ಉತ್ತಮ ಗೆಳೆಯರು ದೊರಕುವುದು, ಉತ್ತಮ ಒಡನಾಡಿಗಳನ್ನು ಹುಡುಕುವುದು ಕಷ್ಟದ ಕೆಲಸವೇ. ಹಾಗೆಂದು ಸಿಕ್ಕ ಸಿಕ್ಕವರನ್ನೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಂಡು, ನಂತರ ಪಶ್ಚಾತ್ತಾಪ ಪಡುವುದರ ಬದಲು, ಒಳ್ಳೆಯ ಸ್ನೇಹಿತ ಒಬ್ಬನಿದ್ದರೂ ಸಾಕು ಅಥವಾ ಯಾರೂ ಇಲ್ಲದಿದ್ದರೆ ಒಂಟಿಯಾಗಿಯೇ ಇದ್ದು ನಮ್ಮೆಲ್ಲ ಭಾವನೆಗಳನ್ನು ನಮ್ಮ ಮನಸ್ಸಿನೊಂದಿಗೇ ಹಂಚಿಕೊಂಡು, ಒಳಿತು-ಕೆಡುಕುಗಳ ಕುರಿತು ವಿವೇಚಿಸೋಣ. ಮನವನ್ನೇ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಳ್ಳೋಣ. ಇದಕ್ಕೆ ನೀನೇನನ್ನುತ್ತೀ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...