Home / ಲೇಖನ / ಇತರೆ / ಸಾಧನೆ

ಸಾಧನೆ

ಪ್ರಿಯ ಸಖಿ,

ಕೆಲವರು ಬಯಸುತ್ತಾರೆ
ತಾವು ಇಡುವ
ಪಾದಗಳ ಕೆಳಗೆ
ಇರಬೇಕೆಂದು ರತ್ನಕಂಬಳಿಗಳು
ಅಮೃತ ಶಿಲೆಗಳು
ಡಾಂಬರಿನ
ನಯ ನಾಜೂಕಿನ ರಸ್ತೆಗಳು
ಆದರೆ ತಮ್ಮ ಕಾಲುಗಳ ಕೆಳಗೆ
ಹಿಮಾಲಯ ಪರ್ವತ ಶಿಖರಗಳೆ
ಇರಬೇಕೆಂದು ಮೆಟ್ಟಿದವರು
ತೇನ್ಸಿಂಗ್ ಹಿಲೇರಿಗಳು.

ಜರಗನಹಳ್ಳಿ ಶಿವಶಂಕರ್ ಅವರ ‘ಸಾಧನೆ’ ಎಂಬ ಈ ಹನಿಗವನವನ್ನು ನೋಡಿದೆಯಾ ಸಖಿ, ಸಾಧನೆಯೆಂಬುದು ವ್ಯಕ್ತಿಯು ಹಾಕಿಕೊಂಡ ಮಿತಿಯನ್ನು ಅನುಸರಿಸಿ ನಿರ್ಮಿಸಲಾಗುತ್ತಿರುತ್ತದೆ. ಹಲವರು ಅಲ್ಪತೃಪ್ತರು. ಅವರಿಗೆ ತನ್ನ ಕಾಲ ಕೆಳಗೆ ರತ್ನಗಂಬಳಿ, ಅಮೃತ ಶಿಲೆಗಳಿದ್ದರೆ ಸಾಕು. ಆದರೆ ತೇನ್ಸಿಂಗ್, ಹಿಲೇರಿಗಳಂತಾ ಕೆಲವೇ ಸಾಧಕರು, ತಮ್ಮ ಕಾಲ ಕೆಳಗೆ ಹಿಮಾಲಯ ಪರ್ವತವೇ ಇರಬೇಕೆಂದು ಬಯಸುತ್ತಾರೆ. ಇಂತಹ ಸಾಧನೆಗಳು ಕಷ್ಟವಾದರೂ ಅಸಾಧ್ಯವಾದುದೇನಲ್ಲಾ.

ಇಂದಿನ ನಮ್ಮ ನಿತ್ಯ ಜೀವನದ ಎಷ್ಟೆಷ್ಟೋ ಸೂಕ್ಷ್ಮಾತಿಸೂಕ್ಷ್ಮ ಪರಿಕರಗಳು ಕೂಡ ಇಂತಹ ಸಾಧಕರಿಂದಲೇ ಮೂಡಿಬಂದಂತದು. ಇತರರ ಸುಖಕ್ಕಾಗಿ ತಮ್ಮ ಜೀವಿತದ ಅಮೂಲ್ಯ ಸಮಯವನ್ನೆಲ್ಲಾ ಇಂತಹ  ಸಂಶೋಧನೆಗಾಗಿಯೇ ಮುಡಿಪಿಟ್ಟು ತಮ್ಮ ಜೀವ, ಜೀವನವನ್ನೇ ತೇಯ್ದುಕೊಂಡ ಎಷ್ಟೊಂದು ಸಾಧಕರನ್ನು ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇರುತ್ತೇವೆ.

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನಾದರೊಂದು ಸಾಧಿಸುವ ಛಲಹೊಂದಿರಬೇಕು. ಕಷ್ಟಪಡದೇ ಇಲ್ಲೇನನ್ನೂ ಸಾಧಿಸಲಾಗುವುದಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಗುರಿಸೇರಲು ಸಾಧ್ಯ High aim is not crime ಎತ್ತರದ ಗುರಿ ಹೊಂದಿರುವುದು ಅಪರಾಧವಲ್ಲ. ಎನ್ನುತ್ತಾನೆ ದಾರ್ಶನಿಕನೊಬ್ಬ. ಸಖಿ, ಅದಕ್ಕೆಂದೇ ಬದುಕಿನಲ್ಲಿ ಉತ್ತಮ ಧ್ಯೇಯವೊಂದನ್ನು ಹೊಂದಿರುವುದರಲ್ಲಿ ತಪ್ಪೇನೂ ಇಲ್ಲ. ಅದನ್ನು ಸಾಧಿಸಿಯೇ ತೀರುತ್ತೇವೊ ಇಲ್ಲವೋ ಗೊತ್ತಿಲ್ಲ. ಸಾಧನೆಯ ಹಾದಿಯಲ್ಲಿ ಅವಿರತವಾಗಿ ಹೆಜ್ಜೆ ಹಾಕುತ್ತಿದ್ದರೆ ಅಷ್ಟೇ ಸಾಕು. ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...