Home / ಲೇಖನ / ಇತರೆ / ಎಲ್ಲೆಡೆ ಸಲ್ಲುವುದು ಒಳಿತು

ಎಲ್ಲೆಡೆ ಸಲ್ಲುವುದು ಒಳಿತು

ಪ್ರಿಯ ಸಖಿ,
ಅಲ್ಲಾಗಲಿ ಅಥವಾ ಇಲ್ಲಾಗಲಿ
ಸಲ್ಲದೆನ್ನಬೇಡ
ಒಳಿತು
ಎಲ್ಲೂ ಒಂದೇ ನೋಡ
ಸೆಣಸು ನಿಸು ಒಳ್ಮನಸು ಪತಾಕೆ
ಬೀಳದಂತೆ ಜೋಕೆ !
ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡಿ ತಲ್ಲಣಿಸುತ್ತಿದ್ದ ಎದೆಗೆ ಕೊಂಚ ತಂಪಾಯಿತೆ? ಒಳಿತು ಇಲ್ಲಿ ಇಲ್ಲವೇ ಇಲ್ಲ ಎಂದು ಪರಿತಪಿಸಿ ಕೊರಗಬೇಡ ಎಲ್ಲೆಡೆಯೂ ಒಳಿತು ಇದ್ದೇ ಇದೆ. ಒಳಮನಸ್ಸಿನಲ್ಲೇ ಕೆಟ್ಟದ್ದರೊಂದಿಗೆ ಸೆಣಸು. ಒಳಿತಿನ ಪತಾಕೆ ಕೆಳಜಾರಿ ಬೀಳದಂತೆ ಜೋಪಾನವಾಗಿ ನಿಲ್ಲಿಸು ಎಂದು ಹಿತನುಡಿಗಳನ್ನಾಡಿದ್ದಾರೆ ಕವಿ.

ನಮ್ಮ ಎಲ್ಲ ಒಳಿತು ಕೆಡುಕಿನ ಮೂಲ ನಮ್ಮೊಳಗೇ ಇದೆ. ಅದನ್ನು ಆ ದಿಕ್ಕುಗಳಲ್ಲಿ ನಡೆಸುವವರೂ ನಾವೇ. ಒಳಿತಿನೆಡೆಗೇ ನಾವು ನಡೆಯುತ್ತೇವೆ ಎಂದು ಮನದಲ್ಲಿ ದೃಢವಾಗಿ ನಿಶ್ಚಯಿಸಿದರೆ, ಅದನ್ನು ಮೀರುವ ಧೈರ್ಯ ಬಹುಶಃ ನಮಗೂ ಬರಬಾರದು! ಪದ್ಯವನ್ನು ಮುಂದುವರೆಸುತ್ತಾ ಕವಿ,
ಒಳಮನ ದೇವರ ಮನೆ ಮಣಿಯಲ್ಲಿ
ಇದೆ ಇಂದಿಗೂ ಆ ದೀಪದ ಮಲ್ಲಿ
ಎಣ್ಣೆ ತೀರಿ ಕರಟಿದರೂ ಬತ್ತಿ
ಒತ್ತಿ ತುಳಿದರೂ ತಮಸ್ಸು ಮುತ್ತಿ
ಹೂಡಿದೆ ಕತ್ತಲ ಕೊಡೆ ರಣ
ಈ ಚಿತ್ಕಣ ಘನ ಚಿರಂತನ
ನೋಡಿ ಬೀಗು, ಸಂದೇಹನೀಗು
ಸಾಷ್ಟಾಂಗ ಬಾಗು ಅದಕೆ
ಒಲವಿನ ಹನಿಮಣಿ ಕೊಡುಕೈಗಾಣಿಕೆ
ಎರೆಯೊ ನಿನ್ನ ಎದೆಯೊರತೆ
ಬೆಳಕಿಗೆ ಬಾರದಂತೆ ಕೊರತೆ!
ಎನ್ನುತ್ತಾರೆ ಒಳಮನಸ್ಸಿನ ದೇವರಮನೆಯಲ್ಲಿ ಎಣ್ಣೆ ತೀರಿ, ಬತ್ತಿ ಕರಟಿದ ಹಣತೆ ಇದೆ. ತುಂಬಿರುವ ಕತ್ತಲಿನೊಡನೆ ನಿರಂತರವಾಗಿ ಯುದ್ಧ ಸಾರಿದೆ ಮನಸ್ಸು. ಮನದಲ್ಲಿ ಸದಾ ಒಳಿತು ಕೆಡುಕಿನ ಕುರಿತು ವಿವೇಚನೆ ನಡೆದೇ ಇದೆ. ಅದನ್ನು ನೋಡಿ ಹೆಮ್ಮೆ ಪಡು. ಕತ್ತಲ ಮೇಲೆ ಬೆಳಕು ಗೆಲುವು ಸಾಧಿಸೇ ಸಾಧಿಸುತ್ತದೆ ಸಂದೇಹ ಬೇಡೆನ್ನುತ್ತಾ ಧೈರ್ಯ ತುಂಬುತ್ತಾರೆ ಕವಿ.

ಬೆಳಕನ್ನು ಶಾಶ್ವತವಾಗಿ ನುಂಗಿಬಿಡಲು ಕತ್ತಲು ಶತಪ್ರಯತ್ನ ಮಾಡಿದರೂ ಕತ್ತಲಿನ ಅರಿವಿಗೇ ಬರದಂತೆ ಮೆಲ್ಲ ಮೆಲ್ಲಗೆ ಬೆಳಕು ಪಸರಿಸಿ ಕತ್ತಲನ್ನು ಹೊಡೆದೋಡಿಸಿ ಬಿಡುತ್ತವಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...