Home / ಲೇಖನ / ಇತರೆ / ಉಪದೇಶ

ಉಪದೇಶ

ಪ್ರಿಯ ಸಖಿ,
ಕೆಲವರಿಗೆ ಸದಾ ಉಪದೇಶ ನೀಡುವ ಖಯಾಲಿ. ಯಾರು ಕೇಳಲಿ ಬಿಡಲಿ ಉಪದೇಶ ನೀಡುವ ಸಂದರ್ಭವಿರಲಿ ಬಿಡಲಿ, ಉಪದೇಶ ಕೇಳುವವನು ಅರ್ಹನಿರಲಿ ಬಿಡಲಿ ಉಪದೇಶಿಸುತ್ತಿರುವುದು ಅಂಥವರ ಹವ್ಯಾಸ. ಇಂತಹ ಚಟವನ್ನು ಕಂಡ ಸರ್ವಜ್ಞ ಹೀಗೆ ಹೇಳುತ್ತಾನೆ.
ಕೇಳುವವರಿದ್ದಿಹರೆ ಹೇಳುವುದು ಬುದ್ಧಿಯನು
ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
ಹೇಳಿ ಫಲವೇನು? ಸರ್ವಜ್ಞ!
ಹೌದಲ್ಲವೇ ಸಖಿ? ಕೇಳುವವರಿರುವಾಗ ನಾವು ಕೊಟ್ಟ ಉಪದೇಶಕ್ಕೊಂದು ಬೆಲೆ. ತಾನೇ ಕೋಳದಲಿ ಬಿದ್ದು, ಎಂದರೆ ದೌರ್ಬಲ್ಯ, ಕೆಟ್ಟಗುಣ, ಅಹಂಕಾರದ ಬಂಧನದಲ್ಲಿ ಬಿದ್ದು ನರಳುತ್ತಿರುವವನಿಗೆ ಎಷ್ಟು ಬುದ್ಧಿ ಹೇಳಿದರೆ ಏನು ಪ್ರಯೋಜನ? ನೀಚರಿಗೆ, ಮೂರ್ಖರಿಗೆ ಹೇಳಿದ ಉಪದೇಶದಿಂದ ನಮಗೇ ಕೇಡುಂಟಾಗುತ್ತದೆ ಎನ್ನುತ್ತಾರೆ ಹಿರಿಯರು. ಉಪದೇಶದ ಮಹತ್ವವನ್ನು ಅರಿಯದ ಅವರು ಅದು ತಮ್ಮ ಅಭಿಮಾನಕ್ಕೆ ಬಿದ್ದ ಪೆಟ್ಟೆಂದುಕೊಂಡು ಆ ಮಾತುಗಳಿಂದಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾರೆ.

ಅದಕ್ಕೆಂದೇ ಕವಿ ಷೇಕ್ಸ್ಪಿಯರ್ ಹೀಗೆ ಹೇಳುತ್ತಾನೆ. Speak when you are spoken to and come when you are called for ನಿನ್ನೊಂದಿಗೆ ಮಾತನಾಡಿದಾಗ ಮಾತನಾಡು ಮತ್ತು ನಿನ್ನನ್ನು ಕರೆದಾಗ ಮಾತ್ರ ಬಾ ಎಂದು. ಉಪದೇಶವನ್ನು ಅಥವಾ ತಿಳುವಳಿಕೆಯನ್ನು ಕೇಳಿದಾಗಷ್ಟೇ ನೀಡಿದಾಗ ಅದಕ್ಕೊಂದು ಘನತೆ ಬರುತ್ತದೆ. ಅದು ಬಿಟ್ಟು ಸಿಕ್ಕವರಿಗೆಲ್ಲಾ ಉಪದೇಶ ನೀಡಿದರೆ ವ್ಯರ್ಥವಾಗುತ್ತದೆ.

ಅದರೆ ಸಖಿ, ನಾವೇ ಉಪದೇಶವನ್ನು ಕೇಳುವವರಾದರೆ ಸದಾ ನಮ್ಮ ಕಿವಿಗಳನ್ನು ತೆರೆದಿಡೋಣ. ಒಳಿತಾದ ಮಾತು ಎಲ್ಲಿಂದಲೇ, ಯಾರಿಂದಲೇ ಬರಲಿ ಕೇಳೋಣ. ಆದರೆ ನಾವೇ ಉಪದೇಶ ಕೊಡುವವರಾದರೆ ಬಹಳಷ್ಟು ಯೋಚಿಸೋಣ. ಷೇಕ್ಸ್ಪಿಯರ್ ಹೇಳುತ್ತಾನೆ, From hearing comes wisdom, from speaking repentance. ಕೇಳುವುದರಿಂದ ಜಾಣತನ ಬರುತ್ತದೆ, ಮಾತನಾಡುವುದರಿಂದ ಪಶ್ಚಾತ್ತಾಪ
ಪಡಬೇಕಾಗುತ್ತದೆ ಎಂದು ಹೇಳಿ ಕೆಟ್ಟವರಾಗುವುದಕ್ಕಿಂತ ಅಥವಾ ಪಶ್ಚಾತ್ತಾಪ ಪಡುವುದಕ್ಕಿಂತಾ ಒಳ್ಳೆಯ ಕೇಳುಗರಾಗುವುದೇ ಮೇಲಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...