Home / ಲೇಖನ / ವಿಜ್ಞಾನ / ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಮರೆವಿನ ರೋಗಕ್ಕೆ ಒಂದು ದೇಶಿ ಔಷಧಿ

ಬೆಳಿಗ್ಗೆಲ್ಲಾ ರಾಮಾಯಣ ಕೇಳಿ ‘ಸೀತೆಗೂ ರಾವಣನಿಗೂ’, ಏನು ಸಂಬಂಧ ಎಂಬ ಪ್ರಶ್ನೆಗೆ ಮಾವ, ಸೊಸೆ ಎಂಬ ಉತ್ತರ ಕೊಟ್ಟನಂತೆ ಅಂದರೆ ರಾಮಾಯಣದ ಪಾತ್ರಗಳ ಸಂಬಂಧವನ್ನೇ ಮರೆತು ಬಿಡುವ ಪ್ರಸಂಗವು ಬಹಳ ಜನಕ್ಕೆ ಇದೆ. ಇದೀಗ ಇಟ್ಟ ವಸ್ತು ಎಲ್ಲಿ ಅಂತ ಗೂತ್ತಾಗಿಲ್ಲ, ಎಂಬ ಮರವು. ಇಡೀ ರಾತ್ರಿ ಓದಿದ ವಿದ್ಯಾರ್ಥಿ ಬೆಳಗಿನ ಪರೀಕ್ಷೆಗೆ ಮರೆತು ಹೋಗಿ ಉತ್ತರಿಸಲಾರದೆ ಹಿಂದಿರುಗುತ್ತಾನೆ. ಇದಕ್ಕೆ ಕಾರಣ ಮರೆವು. ಇಂಥವರಿಗೆ ಮರೆವಿನ ಮಹಾಪುರುಷರೆಂದು ಕರೆಯುತ್ತಾರೆ. ಈ ಮರೆವು ಪ್ರತಿಯೊಬ್ಬರಲ್ಲೂ ಚರಿತ್ರೆ ಕಾಲದಿಂದಲೂ ಅಂಟು ರೋಗದಂತೆ ಬಂದಿದೆ, ಇದರಿಂದಾಗಿ ಏನೆಲ್ಲ ಅನಾಹುತಗಳಾದ ನಿದರ್ಶಗಳು ನಮ್ಮ ಮುಂದಿವೆ.

ಇಂಥಹ ಮರೆವಿಗೆ ದೇಶಿ ಔಷಧಿಯ ಮದ್ದನ್ನು ಇದೀಗ ಕಂಡು ಹಿಡಿಯಲಾಗಿದೆ. ಕೆಲವು ವರ್ಷಗಳಿಂದ ರಾಜ್ಯದಲ್ಲಿ ಆರಂಭಗೊಂಡ ಪ್ರಕೃತಿ ಆಯುರ್ವೇದಿಕ್ ಮತ್ತು ಆರ್ಗಾನಿಕ್ ಪೌಂಡೇಶನ್ ಸಂಸ್ಥೆಯು ಬಿಳಿಗಿರಿ ರಂಗನ ಬೆಟ್ಟದ ಡಾ|| ಸುದರ್ಶನ ಅವರ ಸಂಸ್ಥೆಯ ಪ್ರಕೃತಿಯಾಧಾರಿತ ಗಿಡಮೂಲಿಕೆ ಉತ್ಪನ್ನಗಳನ್ನು ಜನತೆಗೆ ತಲುಪಿಸುತ್ತಿದೆ. ತಜ್ಞವೈದ್ಯರುಗಳಿಂದ ಆಯುರ್‍ವೇದಿಕ್ ಚಿಕಿತ್ಸಾ ವ್ಯವಸ್ಥೆ ಗಿಡಮೂಲಿಕೆಗಳ ಬಗೆಗೆ ಜಾಗೃತಿ ಮೂಡಿಸಲಾಗುತ್ತದೆ. ಇದೀಗ ಈ ಸಂಸ್ಥೆಯು ಮರೆವಿನ ಸಮಸ್ಯೆಯಿಂದ ಬಳಲುತ್ತಿರವವರಿಗೆ ‘ಮೆಮೊಲಿಕ್ಸ್’ ಎಂಬ ಸಂಪೂರ್ಣ ಗಿಡಮೂಲಿಕಾ ಆಹಾರವನ್ನು ಬಿಡುಗಡೆ ಮಾಡಿದೆ. ಬ್ರಾಹ್ಮಿ, ಶಂಖಪುಷ್ಪಿಯಂತಹ ಉತ್ತಮ ಗಿಡಮೂಲಿಕೆಗಳನ್ನು ಹಲವಾರು ಔಷಧಿಯುಕ್ತ ಮೂಲಿಕೆಗಳ ಮಿಶ್ರಣದಿಂದ ಇದನ್ನು ತಯಾರಿಸಿದೆ. ‘ಮೆಮೊಲಿಕ್ಸ್’ ವಿಶೇಷವಾಗಿ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವವರಿಗೆ ವರದಾನದಾಗಿದೆ. ಮುಂಬರುವ ಪರೀಕ್ಷೆಗಳನ್ನು ಎದುರಿಸಲು ಮರೆವಿನ ಒತ್ತಡದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಯಾಗಿದೆ. ಯಾವುದೇ ದುಷ್ಪರಿಣಾಮವಿಲ್ಲದ ಈ ಉತ್ಪನ್ನ ಸ್ಮರಣಶಕ್ತಿ ಅಭಿವೃದ್ದಿಯೊಂದಿಗೆ ಅವಶ್ಯಕ ದೇಹ ಪೋಷಕಾಂಶಗಳನ್ನು ಹೂಂದಿದೆ ಮತ್ತು ಇದು ಸ್ವದೇಶಿ ಔಷಧಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...