Home / ಕವನ / ಕವಿತೆ / ನುತಿಸುವೆನು ಬಸವ

ನುತಿಸುವೆನು ಬಸವ

ಬಸವಣ್ಣ ಬಸವಯ್ಯ ಬಸವೇಶ ಶರಣು
ನಿನ್ನ ನುತಿಸುವ ಭಾಗ್ಯ ಸವಿಹಾಲು ಜೇನು || ಪ ||

ಶರಣರು ಕವಿಗಳು ಹೊಗಳಿದರು ನಿನ್ನ
ಅವರ ಜಾಡನೆ ಹಿಡಿದು ಹಾಡುವೆನು ಚೆನ್ನ || ಅ.ಪ. ||

ಕಲ್ಯಾಣ ಪಣತೆಗೆ ಭಕ್ತಿ ತ್ಯೆಲವೆರೆದು
ದೀಪ ಹೊತ್ತಿಸಿ ನೀನು ಬೆಳಕಾಗಲು
ನೂರಾರು ಹಣತೆಗಳು ಹೊತ್ತಿಕೊಂಡವು ಶರಣ
ಕಾಂತಿ ಪುಂಜದ ಹೊನಲು ಇರುಳು ಹಗಳು || ೧ ||

ಭಾವದ ಬುಗ್ಗೆಗೆ ಭಾಷಯು ಚಿಮ್ಮಲು
ನುಡಿಯೆಲ್ಲ ವಚನದ ಕಾವ್ಯಸುಗ್ಗಿ
ಸುವಿಚಾರ ಮೊಗ್ಗು ಆಚಾರದ ಹೂವರಳಿ
ಕನ್ನಡ ವನದನುಭಾವ ಹಿಗ್ಗಿ || ೨ ||

ಶಿವನ ಪ್ರೀತಿಯ ಕಂದ ಶಿವಕೀರ್ತಿಯಾನಂದ
ಶಿವ ಭಕ್ತಿ ಭಂಡಾರಿ ಶಿವಲಿಂಗ ಬಸವ
ಪ್ರಮಥರ ಜೀವನೆ ಪೂರ್ವಾಚಾರ್ಯನೆ
ವೀರಶೈವದ ಆದಿ ಗುರುವೆ ಬಸವ || ೩ ||

ನಂಬಿದವರಿಗೆಲ್ಲ ತಂದೆ ತಾಯಿಯು ನೀನೆ
ಬಂಧುಬಳಗ ಸರ್ವ ಶರಣ ಬಸವ
ಗತಿ ನೀನೆ ಮತಿ ನೀನೆ ಸರ್ವಾವಲಂಬನೆ
ಬಾಳಿನ ಬೆಳಕು ಜಗಜ್ಯೋತಿ ಬಸವ || ೪ ||

ದೋಷರಹಿತನೆ ಬಸವ ಪಾಪ ವಿದೂರನೆ
ತನುಮನ ಬಯಲಾದ ಪೂರ್ಣ ಬಸವ
ಭವ ಪಾಶ ಹರಿಯುತ ಭಕ್ತಿಯ ಹರಡಿದೆ
ಯುಗಕೊಬ್ಬ ಜಗಕೆ ಮಹಾಂತ ಬಸವ || ೫ ||

ಹರಬಸವ ಶಿವಬಸವ ಗುರುಬಸವ ದೇವನೆ
ನಿನ್ನ ನೆನೆದರೆ ಭವವು ನಾಸ್ತಿಯಹುದು
ಜ್ಞಾನ ಮೂಲನೆ ಧ್ಯಾನ ಲೋಲನೆ ಬಸವೇಶ
ನಿನ್ನಿಂದ ನರಜನ್ಮ ಹರಜನ್ಮವಹುದು || ೬ ||

ಶರಣರಿಗೆ ಶರಣು ಶರಣರ ಬಂಧುವೆ
ಶರಣ ಧರ್ಮವ ಮೆರೆದೆ ಲೋಕದಲ್ಲಿ
ವೀರರಿಗೆ ಧೀರನು ಛಲದಂಕ ಮಲ್ಲನು
ಬಹಿರಂತರಂಗದ ಪಾಕದಲ್ಲಿ || ೭ ||

ಕುಲಭೇದ ಮೀರಿದ ಭೂತದಯಾಪರನೆ
ಲಿಂಗದ ಮುಂದಿಲ್ಲ ಲಿಂಗಭೇದ
ಅಂಗದಿ ಲಿಂಗವ ಸಾಕ್ಷಾತ್ಕರಿಸಿದ
ಕೂಡಲ ಸಂಗಮ ದೇವ ಪಾದ || ೮ ||

ಇಹಪರ ನಡೆನುಡಿ ಶಿವಜೀವ ದ್ವಂದ್ವಗಳ
ಒಂದಾಗಿ ಬೆಸೆದೆಯೊ ತುಂಬು ಬಸವ
ಭಕ್ತಿ ಜ್ಞಾನ ಕರ್ಮ ವೈರಾಗ್ಯ ಅನುಭಾವ
ಎಲ್ಲ ಹದಗೂಡಿ ಸಮಗ್ರ ಬಸವ || ೯ ||

ಗುರುಲಿಂಗ ಜಂಗಮ ಪ್ರಾಣ ಬಸವಣ್ಣ
ಅರಿವಿನಿ ಜ್ಯೋತಿಯ ಕ್ರಾಂತಿ ಸೂರ್ಯ
ಪ್ರಸಾದ ಕಾಯನೆ ಕಾಯಕ ಜೀವನೆ
ಸಿದ್ಧ ಯೋಗಿಯೆ ನೀನು ಶಾಂತಿವರ್‍ಯ || ೧೦ ||

ಸತ್ಯದ ತವನಿಧಿ ಮುಕ್ತಿಯ ಸನ್ನಿಧಿ
ಸುವಿಚಾರ ಚಿಂತನ ಮಹೋದಯ
ಮರ್ತ್ಯವ ಅಮೃತದ ಮಹಮನೆ ಮಾಡಿದೆ
ಇಹಬಾಳು ಭಾಗ್ಯದ ಶುಭೋದಯ || ೧೧ ||

ಆದಿಯ ಗುರು ನರ ಜಾತಿಯ ಗುರು ನೀನೆ
ದೇವತೆಗಳಿಗೆಲ್ಲ ಬಸವ ಗುರುವೆ
ಹಿರಿಯ ಶರಣರು ಕೂಡ ಗುರುವೆಂದು ನುತಿಸಿದರು
ಪರ ಗುರು ವರಗುರು ನೀನೆ ಗುರುವೆ || ೧೨ ||

ಭಕ್ತಿಗೆ ಬೀಜನೆ ಮುಕ್ತಿಗೆ ಓಜನೆ
ಶಕ್ತಿಗೆ ಯುಕ್ತಿಗೆ ನೀನೆ ಬಸವ
ದೀಕ್ಷೆಗೆ ಬಸವಣ್ಣ ಮೋಕ್ಷಕೆ ಬಸವಣ್ಣ
ಕ್ರಮ ಶಿಕ್ಷೆ ಬೋಧೆಗು ತಂದೆ ಬಸವ || ೧೩ ||
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...