Home / ಕವನ / ಕವಿತೆ / ಕನಸು

ಕನಸು

ಪಿಡಿಗೆ ಅಡವೆನ್ನುವೊಲು! ನಿಡುಗತ್ತಲಡಗಿರಲು
ಸುಡುವ ಮನದವಮಾನದಲ್ಲಿ ಬೆಂದು ಬೆಂದು!
ಕಡುದುಗುಡ ಭಾರವನು ಹೂರುತಿರುವಳಾರೊ…………
ಅಮಮ! ಮಲಗಿರಲೆಲ್ಲ ಮೈಮರೆದು ಮರೆದು!-

ದೂರದಾತಾರೆಗಳು ತೀರದಾದುಗುಡಕ್ಕೆ
ತುಂಬಿ ಕಂಗಳ ನಿಂದು ನಿಡುಸುಯ್ದು ನೋಡಿ-
ಅಂಬ! ನೀನಾರೌವ್ವ ದುಗುಡವೇನೆನಲು
-ಅಮಮ! ಮಲಗಿರಲೆಲ್ಲ ಮೈಮರೆದು ಮರೆದು

ಯಾರದಾರಲಲ್ಲಲ್ಲಿ! ದಾರಿಯಲಿ ನಿಲ್ಲುತಲೆ
ಕುಂಟುತ್ತಲೆಡವುತ್ತ ನಡೆಯುತ್ತಲಿಹಳು
ಎಂಟು ರಾಜ್ಯದ ಮಾತೆ ಗಂಭೀರೆ ಯಾರೊ!
-ಅಮಮ! ಮಲಗಿಹರೆಲ್ಲ ತನುಮನವ ಮರೆದು-

ಸೆರೆ ಹಿಡಿದ! ಸರಪಳಿಯ ಸರಸರಕಜಣಜಣಕೆ
ನೆರೆ ಹಳಿವ ನಿಡುನಿಟ್ಠುರದ ನುಡಿಗೆ ನಡುಗಿ!
ಸೆಳೆದೊಯ್ಯುವಳು ಅಡಿಗಳನು! ಎಡವಿದರು ಎದ್ದು
-ಅಮಮ! ಮಲಗಿಹರಿವರು ಮೈಮರೆದು ಮರೆದು-

ಈ ಜಗದ ತಾಯಿಗೀಸೋಜಿಗದ ಭಂಧನವೆ?
ಪೂಜೆಗೊಂಬುವ ಪದ ಬಂಧನದಲಿರಲು
ಪೂಜೆಮಾಳ್ಪನೆ! ನಾನು! ಸಂಕೋಲೆಯ ಸೆರೆಯ!
-ಅಮಮ! ಮಲಗಿಹರೆಲ್ಲ ತನುಮನವ ಮರೆದು-

ಹೆಜ್ಜೆಯೊಂದಿಗೆ ಧನಿಯು! ಗೆಜ್ಜೆ ಪಾಡಗವಲ್ಲ.
ಸದ್ದ ಕೇಳಿದೆ ನಾನು! ಸರಪಳಿಯ ಸದ್ದ.
ನಿದ್ದೆ ತಿಳಿದದ್ದು ನಾನೆದ್ದು ಕುಳಿತಿರಲು………..
– ಅಮಮ! ಮಲಗಿಹರಿವರು ಮೈಮರೆದು ಮರೆದು-

ಜನದ ಗಜಬಿಜಿಯಲ್ಲಿ! ತನುಮನದ ಕೂಗಿನಲ್ಲಿ!
ಕನಸಿನಾಸಿರಿಪಾದ ಸರಪಣಿಯ ಸೆಳೆವ…….
ಜಣ ಝಣವು ಕೇಳುತಿದೆ ಈ ಹೃದಯದಲ್ಲಿ!
-ಅಮಮ! ಮಲಗಿಹರಿವರು ತನುಮನವ ಮರೆದು-
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...