Home / ಲೇಖನ / ವಿಜ್ಞಾನ / ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಧ್ವನಿಗಳು

ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಧ್ವನಿಗಳು

ಈ ವಿಷಯ ಮನಸ್ಸಿನ ಭಾವಗಳಮ್ನ ಪ್ರತಿಫಲನಗೊಳಿಸುವ ಸೂಕ್ಷ್ಮಕ್ರಿಯೆಯಿಂದ ಕೂಡಿದೆ. ಜಗತ್ತಿನಲ್ಲಿ ಆತ್ಮಹತ್ಯೆಗೊಳಗಾಗುವ, ಆದ ಕೋಟ್ಯಾಂತರ ಜನರ ಧ್ವನಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡು ಬರುತ್ತವೆ ಎನ್ನುವದಕ್ಕೆ ಅಮೇರಿಕಾದ ಟೆನ್ನೇಸಿ ನಗರದ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನೀಯರ್‌ಗಳಾದ ಸ್ವಿರ್‌ಮನ್ ಮತ್ತು ಮಿಷರ್‌ಮಿಲ್ಕ್ ಅವರು ಸಂಶೋಧನೆಗಳಿಂದ ಸಾಬೀತುಪಡಿಸಿದ್ದಾರೆ.

ವ್ಯಾಕುಲತೆಗೆ ತುತ್ತಾಗಿರುವ ೬೪ ಮಂದಿ ರೋಗಿಗಳು ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿದ್ದ ೩೨ ಮಂದಿಯ ಜತೆ ಇಬ್ಬರು ವಿಜ್ಞಾನಿಗಳು ಮಾತುಕತೆ ನಡೆಸಿದರು. ಕೊನೆಗೆ ಪರೀಕ್ಷಿಸಿದಾಗ ಈ ಜನರಲ್ಲಿ೨೨ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದರು. ಈ ಎಲ್ಲ ವ್ಯಕ್ತಿಗಳ ಮಾತುಕತೆಗಳನ್ನು ಟೇಪರಿಕಾರ್ಡ್‌ರ್ ಮಾಡಿಕೊಳ್ಳಲು ೨೨ ಮಂದಿ ರೋಗಿಗಳ ಜೀವನದಲ್ಲಿ ಮುಂದೆ ನಡೆವ ಘಟನೆಗಳನ್ನು ಆ ಇಬ್ಬರು ಸಂಶೋಧಕರು ಪರಿಶೀಲಿಸಿದ್ದರು. ಆತ್ಮಹತ್ಯಗೆ ತಯರಾಗಿದ್ದವರ ಧ್ವನಿಯಲ್ಲಿ ಇತರರಿಗಿಂತ ಬದಲಾವಣೆ ಕಂಡು ಬಂದಿತು. ಆತ್ಮಹತ್ಯೆಮಾಡಿಕೊಳ್ಳಲಿರುವ ಮತ್ತು ಸಾದಾ ವ್ಯಕ್ತಿಗಳಿಗೆ ಒಂದು ವಾಕ್ಯವನ್ನು ಓದಲು ಹೇಳಿದಾಗ ಈ ಇಬ್ಬರ ಧ್ವನಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಲಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವವರ ಧ್ವನಿ ಕ್ಷೀಣಗತಿಯಲ್ಲಿತ್ತು. ಆ ಧ್ವನಿ ರೀಕಾರ್ಡಿನಲ್ಲಿ ಪೊಳ್ಳಾಗಿರುವಂತೆ ಸ್ಪಷ್ಟವಾಯಿತು. ಮತ್ತು ಅದೇ ವ್ಯಕ್ತಿಗಳು ಆರೋಗ್ಯವಾಗಿದ್ದು ಯಾವ ದುರಾಲೋಚನೆ ಇಲ್ಲದೇ ಇರುವಾಗ ಮಾತನಾಡಿದ ಧ್ವನಿಗೂ ಮತ್ತು ಆತ್ಮಹತ್ಯೆಗೆ ತಯಾರಾಗಿದ್ದ ಸಮಯದಲ್ಲಿ ಮಾತನಾಡಿದ ಧ್ವನಿಗಳಿಗೆ ವ್ಯತ್ಯಾಸಗಳಿದ್ದವು.

ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ವ್ಯಕ್ತಿಯ ಧ್ವನಿಯನ್ನು ಪರೀಕ್ಷಿಸಿದಾಗ ಈತ ಮುಂದೆ ಸಾಯಲಿದ್ದಾನೆ ಎಂದು ತಿಳಿದು ರಕ್ಷಿಸಬಹುದು. ಇದು ತೀರ ಸರಳವಾದ ವಿಧಾನ ಮತ್ತು ಸೂಕ್ಷ್ಮವಾದ ಮಾನಸಿಕ ಸ್ಥಿತಿಯನ್ನು ಅರಿಯಬಲ್ಲವಿಧಾನ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...