Home / ಲೇಖನ / ವಿಜ್ಞಾನ / ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಧ್ವನಿಗಳು

ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಧ್ವನಿಗಳು

ಈ ವಿಷಯ ಮನಸ್ಸಿನ ಭಾವಗಳಮ್ನ ಪ್ರತಿಫಲನಗೊಳಿಸುವ ಸೂಕ್ಷ್ಮಕ್ರಿಯೆಯಿಂದ ಕೂಡಿದೆ. ಜಗತ್ತಿನಲ್ಲಿ ಆತ್ಮಹತ್ಯೆಗೊಳಗಾಗುವ, ಆದ ಕೋಟ್ಯಾಂತರ ಜನರ ಧ್ವನಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡು ಬರುತ್ತವೆ ಎನ್ನುವದಕ್ಕೆ ಅಮೇರಿಕಾದ ಟೆನ್ನೇಸಿ ನಗರದ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನೀಯರ್‌ಗಳಾದ ಸ್ವಿರ್‌ಮನ್ ಮತ್ತು ಮಿಷರ್‌ಮಿಲ್ಕ್ ಅವರು ಸಂಶೋಧನೆಗಳಿಂದ ಸಾಬೀತುಪಡಿಸಿದ್ದಾರೆ.

ವ್ಯಾಕುಲತೆಗೆ ತುತ್ತಾಗಿರುವ ೬೪ ಮಂದಿ ರೋಗಿಗಳು ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿದ್ದ ೩೨ ಮಂದಿಯ ಜತೆ ಇಬ್ಬರು ವಿಜ್ಞಾನಿಗಳು ಮಾತುಕತೆ ನಡೆಸಿದರು. ಕೊನೆಗೆ ಪರೀಕ್ಷಿಸಿದಾಗ ಈ ಜನರಲ್ಲಿ೨೨ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದರು. ಈ ಎಲ್ಲ ವ್ಯಕ್ತಿಗಳ ಮಾತುಕತೆಗಳನ್ನು ಟೇಪರಿಕಾರ್ಡ್‌ರ್ ಮಾಡಿಕೊಳ್ಳಲು ೨೨ ಮಂದಿ ರೋಗಿಗಳ ಜೀವನದಲ್ಲಿ ಮುಂದೆ ನಡೆವ ಘಟನೆಗಳನ್ನು ಆ ಇಬ್ಬರು ಸಂಶೋಧಕರು ಪರಿಶೀಲಿಸಿದ್ದರು. ಆತ್ಮಹತ್ಯಗೆ ತಯರಾಗಿದ್ದವರ ಧ್ವನಿಯಲ್ಲಿ ಇತರರಿಗಿಂತ ಬದಲಾವಣೆ ಕಂಡು ಬಂದಿತು. ಆತ್ಮಹತ್ಯೆಮಾಡಿಕೊಳ್ಳಲಿರುವ ಮತ್ತು ಸಾದಾ ವ್ಯಕ್ತಿಗಳಿಗೆ ಒಂದು ವಾಕ್ಯವನ್ನು ಓದಲು ಹೇಳಿದಾಗ ಈ ಇಬ್ಬರ ಧ್ವನಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಲಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವವರ ಧ್ವನಿ ಕ್ಷೀಣಗತಿಯಲ್ಲಿತ್ತು. ಆ ಧ್ವನಿ ರೀಕಾರ್ಡಿನಲ್ಲಿ ಪೊಳ್ಳಾಗಿರುವಂತೆ ಸ್ಪಷ್ಟವಾಯಿತು. ಮತ್ತು ಅದೇ ವ್ಯಕ್ತಿಗಳು ಆರೋಗ್ಯವಾಗಿದ್ದು ಯಾವ ದುರಾಲೋಚನೆ ಇಲ್ಲದೇ ಇರುವಾಗ ಮಾತನಾಡಿದ ಧ್ವನಿಗೂ ಮತ್ತು ಆತ್ಮಹತ್ಯೆಗೆ ತಯಾರಾಗಿದ್ದ ಸಮಯದಲ್ಲಿ ಮಾತನಾಡಿದ ಧ್ವನಿಗಳಿಗೆ ವ್ಯತ್ಯಾಸಗಳಿದ್ದವು.

ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ವ್ಯಕ್ತಿಯ ಧ್ವನಿಯನ್ನು ಪರೀಕ್ಷಿಸಿದಾಗ ಈತ ಮುಂದೆ ಸಾಯಲಿದ್ದಾನೆ ಎಂದು ತಿಳಿದು ರಕ್ಷಿಸಬಹುದು. ಇದು ತೀರ ಸರಳವಾದ ವಿಧಾನ ಮತ್ತು ಸೂಕ್ಷ್ಮವಾದ ಮಾನಸಿಕ ಸ್ಥಿತಿಯನ್ನು ಅರಿಯಬಲ್ಲವಿಧಾನ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...