ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ಕರುಣಾಮಯಿ ಹೂವು
ಜಗತ್ತಿನ ಒಳಿತಿಗಾಗಿ
ಧೇನಿಸುವುದು
ಹೂವಿನ ಧ್ಯಾನವೆ ಧ್ಯಾನ
ಅದು ಪರಿಮಳಿಸಿ
ಲೋಕವ ವ್ಯಾಪಿಸುವುದು
ಪರಿಮಳಕೆ ಪಕ್ಕಾಗಿ
ಕೇಡು ತಂತಾನೆ
ಹಿಂಜರಿದು
ನಿರ್ಗಮಿಸುವುದು
ಹೂವಿಗೆ
ಧ್ಯಾನವೇ
ಜೀವನ
ಮರಣವೂ
ಹೂವಿಗೆ
ಸಮಾನ.
*****
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…