Home / ಲೇಖನ / ವಿಜ್ಞಾನ / ಜಗತ್ಪ್ರಸಿದ್ಧ ಗೋಪುರ ಉಳಿಸಲು ಶತಪ್ರಯತ್ನ

ಜಗತ್ಪ್ರಸಿದ್ಧ ಗೋಪುರ ಉಳಿಸಲು ಶತಪ್ರಯತ್ನ

ಸುಮಾರು ೮೦೦ ವರ್‍ಷಗಳಷ್ಟು ಹಿಂದೆ ಕಟ್ಟಲಾದ ಇಟಲಿಯ ಪೀಸಾ ಗೋಪುರ ಪ್ರತಿ ವರ್‍ಷ ಒಂದು ಮಿ.ಮೀಟರ್‌ನಷ್ಟು ವಾಲುತ್ತಿದ್ದು, ಅದನ್ನು ರಕ್ಷಿಸುವುದು ಒಂದು ಸಮಸ್ಯೆಯಾಗಿದೆ. ಅದಕ್ಕಾಗಿ ಅಭಿಯಂತರು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಅದನ್ನು ತಂತಿ-ಹಗ್ಗದಿಂದ ಬಿಗಿದು ನಿಲ್ಲಿಸಲು ಪ್ರಯತ್ನಿಸಲಾಗಿದೆ. ಪ್ರವಾಸಿಗರನ್ನು ಆಕರ್‍ಷಿಸುವ ಈ ಗೋಪುರ ಸರ್‍ಕಾರಕ್ಕೆ ಆದಯವನ್ನು ತರುತ್ತಿರುವುದು.

ದಿನಪ್ರತಿ ಇಟಲಿಯ ಪೀಸಾ ನಗರದ ದರ್‍ಶನಕ್ಕೆ ಪ್ರವಾಸಿಗರ ದಂಡೇ ಮುಗಿಬೀಳುತ್ತದೆ. ಅವರ ಆಕರ್‍ಷಣೆಯ ಮುಖ್ಯ ಕಾರಣ ಅಲ್ಲಿರುವ ಜಗತ್ಪ್ರಸಿದ್ಧ ಪೀಸಾ ಗೋಪುರ. ನಿರ್‍ಮಾಣವಾದಾಗಿನಿಂದ ಸದಾ ಸುದ್ದಿಯಲ್ಲಿರುವ ಈ ಗೋಪುರ ಈಗ ಮತ್ತೆ ಚರ್‍ಚೆಯ ಕೇಂದ್ರ ಬಿಂದುವಾಗಿದೆ. ಕಾರಣವಿಷ್ಟೇ, ಅದು ವರ್‍ಷಕ್ಕೆ ಒಂದು ಮಿಲಿಮೀಟರ್‌ನಷ್ಟು ವಾಗಲುತ್ತಿದೆ! ಹಾಗೆಯೇ ಬಿಟ್ಟರೆ ಮುಂದೊಂದು ದಿನ ಉರುಳಬಹುದು. ಗೋಪುರದ ವಾಲುವಿಕೆಯನ್ನು ತಡೆಯಲು ಇಟಲಿಯ ಎಂಜಿರಯರುಗಳ ತಂಡ ಶತಪ್ರಯತ್ನ ನಡೆಸುತ್ತಿದೆ.

ಪರಿಚಯ: ಬಿಳಿಯ ಅಮೃತ ಶಿಲೆಯಲ್ಲಿ ನಿರ್‍ಮಾಣವಾದ ಪೀಸಾ ಗೋಪುರ ಇಟಲಿಯ ಪ್ರತಿಷ್ಠಿತ ಚಿಹ್ನೆಯಾಗಿದೆ. ಗೋಪುರವು ೯ ಅಂತಸ್ತುಗಳನ್ನು ಹೊಂದಿದ್ದು ೫೫ ಮೀಟರ್‍ ಎತ್ತವಿದೆ. ತಳದ ಗೋಡೆಗಳ ದಪ್ಪ ೪ ಮೀಟರ್‌ಗಳು. ಮೇಲಿನ ಅಂತಸ್ತು ಒಂದನ್ನು ಬಿಟ್ಟರೆ ಉಳಿದೆಲ್ಲ ಅಂತಸ್ತುಗಳಲ್ಲಿ ೩೦ ಕಂಬಗಳಿವೆ.

ಕ್ರಿ.ಶ. ೧೧೭೪ ರಲ್ಲಿ ಬೋನಾನೋ ಎಂಬ ಶಿಲ್ಪಿಯಿಂದ ಗೋಪುರದ ನಿರ್‍ಮಾಣ ಕೆಲಸ ಮುಗಿದಿದ್ದು ೧೩೫೦ರಲ್ಲಿ. ಹೀಗೆ ಈ ಗೋಪುರಕ್ಕೆ ೮೦೦ ವರ್‍ಷಗಳ ಇತಿಹಾಸವಿದೆ. ಗೋಪುರದ ಒಟ್ಟು ತೂಕ ೧೪,೫೦೦ ಟನ್ಗಳು. ಗೋಪುರದ ಮೇಲೇರಲು ೩೦೦ ಮೆಟ್ಟಿಲುಗಳಿವೆ. ಮೇಲೆ ನಿಂತು ಸುಮಾರು ೧೦ ಕಿ.ಮೀ ದೂರದ ಪ್ರದೇಶವನ್ನು ವೀಕ್ಷಿಸಬಹುದಾಗಿದೆ.

ಗೋಪುರ ನಿರ್‍ಮಿಸುವಾಗ ಅದೊಂದು ಓಲು ಗೋಪುರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಮೂರನೇ ಅಂತಸ್ತಿನವರೆಗೆ ಗೋಪುರ ನಿರ್‍ಮಾಣವಾದಾಗ ಓಲತೊಡಗಲು ಶುರುವಾಯಿತಂತೆ. ಗೋಪುರದ ಮೊದಲಿನ ರಚನೆಯನ್ನು ಸ್ವಲ್ಪ ಬದಲಿಸಿ ನಿರ್‍ಮಾಣದ ಕೆಲಸ ಪೂರ್‍ತಿ ಮಾಡಲಾಯಿತಂತೆ.

ಸಮಸ್ಯೆ: ಗೋಪುರ ದಕ್ಷಿಣ ಭಾಗಕ್ಕೆ ವಾಲುತ್ತಿದ್ದು ಉತ್ತರದ ಭಾಗ ನೆಲದಿಂದ ಮೇಲೇಳುತ್ತಿದೆ. ಗೋಪುರವು ೫.೫ ಡ್ರಿಗ್ರಿಗಳಷ್ಟು ವಾಲುತ್ತಿದ್ದು, ತುದಿಯ ವಾಲುವಿಕೆಯು ೫.೪೪ ಡಿಗ್ರಗಳು. ಕಳೆದ ನೂರು ವರ್‍ಷಗಳಲ್ಲಿ ಗೋಪುರವು ೩೦ ಸೆಂ.ಮೀ ನಷ್ಟು ವಾಲಿದ್ದು ದಾಖಲೆಯಿಂದ ಹೇಳಬಹುದು. ೧೯೮೫ರಲ್ಲಿ ಒಮ್ಮೆಲೆ ಅದು ೨ ಮಿ.ಮೀ. ವಾಲಿತು! ಹೀಗೆ ವಾಲುತ್ತಿದ್ದರೂ ಅದು ಬೀಳದಿರಲು ಕಾರಣ ಇಂದಿನವರೆಗೂ ಗುರುತ್ವ ಕೇಂದ್ರದಿಂದ ಲಂಬ ರೇಖೆಯು ಗೋಪುರದ ತಳದೊಳಗೆ ಇರುತ್ತದೆಯಾದ್ದರಿಂದ ಎನ್ನಲಾಗಿದೆ.

ವಾಲುವಿಕೆಗೆ ಕಾರಣವೇನಿದ್ದಿರಬಹುದು?

ಗೋಪುರ ವಾಲಲು ಕಾರಣವೇನಿದ್ದಿರಬಹುದು? ಗೋಪುರದ ತಳಪಾಯದಲ್ಲಿ ಮರಳನ್ನು ಹಾಕಿರುವುದೇ ಗೋಪುರ ವಾಲಲು ಕಾರಣ ಎನ್ನಲಾಗುತ್ತಿದೆ.

ಎಂಜಿನಿಯರುಗಳ ತಂಡವೊಂದು ಹಲವು ಅತಿ ವಿಶಿಷ್ಟ ಉಪಕರಣಗಳ ಮತ್ತು ವಿದ್ಯುತ್ ಚಾಲಿತ ಸೆನ್ಸಾರ್‌ಗಳ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸಿ ಕಂಪ್ಯೂಟರ್‌ಗಳ ಸಹಾಯದಿಂದ ನಡೆಸಿದ ಅಧ್ಯಯನದ ಪ್ರಕಾರ ಗೋಪುರದ ಕೆಳಗಿನ ನೆಲದಲ್ಲಿಯ ಅಂತರ್‍ಜಲ ಮಟ್ಟವು ಹೆಚ್ಚಾಗುತ್ತಿದ್ದಂತೆ ಅಥವಾ ಉಷ್ಣತೆ ಕಡಿಮೆಯಗುತ್ತಿದ್ದಂತೆ ಗೋಪುರ ವಾಲುತ್ತಿದೆ. ಹೀಗಾಗಿ ಗೋಪುರವು ಸೆಪ್ಟೆಂಬರ್‍ ತಿಂಗಳಿಂದ ಜನವರಿಯವರೆಗೆ ದಕ್ಷಿಣದ ಕಡೆಗೆವಾಲುತ್ತಿದೆ. ಈ ಉಪಕರಣಗಳು ಕಂಡುಕೊಂಡ ಇನ್ನೊಂದು ಪ್ರಮುಖ ಮಾಹಿತಿಯೆಂದರೆ ಸೂರ್‍ಯ ಉದಯಿಸಿ ಅಸ್ತಂಗತವಾಗುವರೆಗೆ ೫ ಚಾಪ (ಆರ್‍ಕ್) ಸೆಕೆಂಡ್‌ಗಳಷ್ಟು ವಾಲುತ್ತಿದೆ. ಸೂರ್‍ಯನ ಶಾಖದಿಂದ ಗೋಪುರದ ಭಾಗವು ಬಿಸಿಗೊಂಡ ಕಾರಣ ವಿರುದ್ಧ ದಿಕ್ಕಿನಲ್ಲಿ ವಾಲುತ್ತಿರಬಹುದೆಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಪರಿಹಾರ: ವಾಲುತ್ತಿರುವ ಪೀಸಾ ಗೋಪುರವನ್ನು ತಡೆದು ನೇರವಾಗಿ ನಿಲ್ಲಿಸುವುದು ಎಂಜಿನಿಯರುಗಳ ಸಾಹಸದ ಕೆಲಸವಾಗಿದೆ. ಅದಕ್ಕಾಗಿ ಅವರು ಶತಪ್ರಯತ್ನ ನಡೆಸುತ್ತಿದ್ದಾರೆ. ಟರಿನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ ವಿಜ್ಞಾನದ ಪ್ರೊಫೆಸರ್‍ ಮಿಚಲಿ ಜಮಿಯೋಕೋಸ್ಕಿ ಅವರೊಂದಿಗೆ ಎಂಜಿನಿಯರುಗಳ ತಂಡವೇ ಕಾರ್‍ಯದಲ್ಲಿ ತೊಡಗಿದೆ. ಈ ಕೆಲಸಕ್ಕಾಗಿ ಇಟಲಿ ಸರಕಾರ ಸಧ್ಯಕ್ಕೆ ೭ ಮಿಲಿಯನ್ ಡಾಲರ್‍ ಹಣ ಬಿಡುಗಡೆ ಮಾಡಿದೆ. ಪ್ರೊ. ಮಿಚಲಿ ಅವರು ೧೯೬೨ರಿಂದ ಗೋಪುರದ ವಾಲುವಿಕೆಯ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಒಂದು ನಿರ್‍ದಿಷ್ಟ ಯೋಜನೆ ಸಿದ್ಧಪಡಿಸುವವರೆಗೆ ವಾಲುವಿಕೆ ನಿಲ್ಲಿಸಲು ಗೋಪುರದ ಮೂರನೇ ಅಂತಸ್ತಿಗೆ ಕ್ಷಿತಿಜೀಯ ಕೇಬಲ್ ಅಳವಡಿಸಲು ತೀರ್‍ಮಾನಿಸಲಾಗಿದೆ. ೫೫ ಮೀಟರ್‍ ಎತ್ತರಕ್ಕೆ ಪ್ಲಾಸ್ಟಿಕ್ ಲೇಪಿತ ಉಕ್ಕಿನ ಪಟ್ಟಿಗಳಿಂದ ಆಧಾರ ನೀಡಿ ಅಲ್ಲಿಂದ ಎರಡು ಉಕ್ಕಿನ ಕೇಬಲ್‌ಗಳನ್ನು ತಂತಿಹಾಕಿ, ೧೧೦ ಮೀಟರ್‍ ದೂರ (ಗೋಪುರದ ತಳದಿಂದ) ದಲ್ಲಿ ಹೂಳಲಾಗುವುದು.

ಗೋಪುರದ ನಡುಪಟ್ಟೆಯಿಂದ ಉಕ್ಕಿನ ಕೇಬಲ್‌ಗಳು ಅದರ ತಳಪಾಯದಲ್ಲಿ ೮೩೦ ಟನ್ ಸೀಸದ ಇಟ್ಟಿಗೆಗಳನ್ನು ಮತ್ತು ಉಕ್ಕಿನ ಆವರಣದ ಕೆಳಭಾಗದ ಪರಿಧಿ (ಸುತ್ತಳತೆ) ಹಾಕುವ ಮತ್ತು ಗೋಪುರದ ತಳಪಾಯದ ಮರಳು ತೆಗೆದು ಕಲ್ಲು ಹಾಕುವ ಯೋಜನೆಯಿದೆ.

ಓಲುಗೋಪುರ ಎಂದೇ ಪ್ರವಾಸಿಗರನ್ನು ಆಕರ್‍ಷಿಸುವ ಪೀಸಾ ಗೋಪುರವನ್ನು ಮುಂದೊಂದು ದಿನ ನೇರವಾಗಿ ನಿಲ್ಲಿಸಲು ಸಾಧ್ಯವಾಯಿತೆನ್ನಿ. ಆಗದು ಮೊದಲಿನ ಆಕರ್‍ಷಣೆ ಕಳೆದುಕೊಳ್ಳುವುದೋ ಏನೋ ಎನ್ನುವ ಅನುಮಾನವೂ ಕೂಡ ತಂತ್ರಜ್ಞರ ತಲೆಯಲ್ಲಿ ಸುಳಿಯುತ್ತಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...