Home / ಲೇಖನ / ವಿಜ್ಞಾನ / ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಇದೊಂದು ನೋವು ನಿವಾರಕ ಔಷಧಿ. ನೋವನ್ನು ನಿವಾರಿಸುವ ಈ ಔಷಧಿ ಬಗೆಗೆ ನಂಬಿಕೆ ಇಟ್ಟಿದ್ದ ಜನಕ್ಕೆ ಒಂದು ಶಾಕ್ ಆಗುವ ಸುದ್ಧಿ ಹೊರಬಿದ್ದಿದೆ. ನ್ಯೂ‌ಆರ್ಲಿಯನ್ಸನಲ್ಲಿ ವಾಸಿಸುವ ಟೂಲೆನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪ್ಲಬಿಕ್‌ಹೆಲ್ಥ್ Tapicol Medician ನ ಡಾ|| ಜಿಯೆಂಗ್ ಹೀ ಮತ್ತು ಅವರ ತಂಡವು ಇದರ ಸೇವನೆಯಿಂದ “ಬ್ರೇನ್ ಹ್ಯಾಮರೇಜ್” ಆಕ್ರಮಣವಾಗುತ್ತದೆಂದು ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಜತೆಗೆ ಇಸೆಮಿಕ್ ಕೂಡ ಆಕ್ರಮಿಸುತ್ತದೆಂದು ಹೇಳುತ್ತಾರೆ.

ಇದನ್ನು ಸೇವಿಸುವುದರಿಂದ ದಮನಿಗಳಲ್ಲಿ ಅಡಚಣೆಯುಂಟಾಗಿ ಪರಿಣಾಮವಾಗಿ ಮೆದುಳಿಗೆ ರಕ್ತ ಹಾಗೂ ಪ್ರಾಣವಾಯುವಿನ ಪೂರೈಕೆಯು ಆಗುವುದಿಲ್ಲವೆಂದು ವಿವರಿಸುತ್ತಾರೆ. ವೃದ್ಧರು ವಿಶೇಷವಾಗಿ ಹೈಬ್ಲಡ್ ಪ್ರೆಶರ್ ಇರುವ ರೋಗಿಗಳಿಗೆ ಬ್ರೇನ್ ಹ್ಯಾಮರೇಜಿನ ಅಪಾಯ ಹೆಚ್ಚಾಗಿರುತ್ತದೆ. ವಿಪರೀತ ತಲೆನೋವು, ಒಮ್ಮಲೆ – ಮೂರ್ಚೆ ಹೋಗುವುದು, ಧ್ವನಿಬಾರದಿರುವುದು. ಮುಖ ಹಾಗು ಕೈ ಕಾಲುಗಳಲ್ಲಿ ಲಕ್ವ ಹೊಡೆದಂತಾಗಿ ನಿಶಕ್ತಿ ಆವರಿಸುವುದು ಮುಂತಾದವು ಇದರ ಲಕ್ಷಣಗಳಾಗಿವೆ.

ಹೀ ಮತ್ತು ಇವರ ಅನುಮಾಯಿಗಳು ೧೮ ವಿಭಿನ್ನ ಪರೀಕ್ಷೆಗಳಲ್ಲಿ೫೫,೪೬೨ ರೋಗಿಗಳಿಗೆ ಆಸ್ಟ್ರೀನ್ ಸೇವನೆ ಮಾಡಿಸಿ ನಂತರ ಪರೀಕ್ಷಿಸಿದಾಗ ಇವರಲ್ಲಿ ಶೇ. ೧೫ ರಷ್ಟು ರೋಗಿಗಳಿಗೆ ಬ್ರೇನ್ ಹ್ಯಾಮರೇಜ್ ಆಕ್ರಮಣವಾದುದು ದೃಢಪಟ್ಟಿತು. ಉಳಿದಂತೆ ರೋಗಿಗಳಿಗೆ ಇಸೆಮಿಕ್ ಅಟ್ಯಾಕ್ ಆಗಿತ್ತು. ಆದ್ದರಿಂದ ನೋವು ನಿವಾರಕವೆಂದು ಇದನ್ನು ಸೇವಿಸುವ ರೋಗಿಗಳು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಸೇವಿಸುವುದು ಅಗತ್ಯ. ಕೆಲವು ಔಷಧಿಗಳು ತಕ್ಷಣಕ್ಕೆ ಪರಿಹಾರವನ್ನು ಸೂಚಿಸಿದರೂ ನಿಧಾನವಾಗಿ ಸ್ಲೋಪಾಯಿಜನ್ ಆಗುವ ಭೀತಿ ಇರುತ್ತದೆ. ಹಾಗಾದರೆ ಈ ದೇಹ ನೆಟ್ಟಗಿರಬೇಕಾದರೆ ಯಾವುದನ್ನು ಸೇವಿಸಬೇಕು? ಎಲ್ಲವನ್ನು ಒಬ್ಬ ಸಾಮಾನ್ಯ ರೋಗಿ ವೈಜ್ಞಾನಿಕವಾಗಿ ಪರೀಕ್ಷೆಗೆ ಗುರಿ ಮಾಡುತ್ತಾನೆಯೋ? ಎಂಬ ಪ್ರಶ್ನೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...