Home / ಲೇಖನ / ವಿಜ್ಞಾನ / ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಆಸ್ಪ್ರಿನ್ ನಿಂದ ಬ್ರೇನ್ ಹ್ಯಾಮರೇಜ್

ಇದೊಂದು ನೋವು ನಿವಾರಕ ಔಷಧಿ. ನೋವನ್ನು ನಿವಾರಿಸುವ ಈ ಔಷಧಿ ಬಗೆಗೆ ನಂಬಿಕೆ ಇಟ್ಟಿದ್ದ ಜನಕ್ಕೆ ಒಂದು ಶಾಕ್ ಆಗುವ ಸುದ್ಧಿ ಹೊರಬಿದ್ದಿದೆ. ನ್ಯೂ‌ಆರ್ಲಿಯನ್ಸನಲ್ಲಿ ವಾಸಿಸುವ ಟೂಲೆನ್ ಯುನಿವರ್ಸಿಟಿಯ ಸ್ಕೂಲ್ ಆಫ್ ಪ್ಲಬಿಕ್‌ಹೆಲ್ಥ್ Tapicol Medician ನ ಡಾ|| ಜಿಯೆಂಗ್ ಹೀ ಮತ್ತು ಅವರ ತಂಡವು ಇದರ ಸೇವನೆಯಿಂದ “ಬ್ರೇನ್ ಹ್ಯಾಮರೇಜ್” ಆಕ್ರಮಣವಾಗುತ್ತದೆಂದು ಪ್ರಯೋಗಗಳಿಂದ ಸ್ಥಿರೀಕರಿಸಿದ್ದಾರೆ. ಜತೆಗೆ ಇಸೆಮಿಕ್ ಕೂಡ ಆಕ್ರಮಿಸುತ್ತದೆಂದು ಹೇಳುತ್ತಾರೆ.

ಇದನ್ನು ಸೇವಿಸುವುದರಿಂದ ದಮನಿಗಳಲ್ಲಿ ಅಡಚಣೆಯುಂಟಾಗಿ ಪರಿಣಾಮವಾಗಿ ಮೆದುಳಿಗೆ ರಕ್ತ ಹಾಗೂ ಪ್ರಾಣವಾಯುವಿನ ಪೂರೈಕೆಯು ಆಗುವುದಿಲ್ಲವೆಂದು ವಿವರಿಸುತ್ತಾರೆ. ವೃದ್ಧರು ವಿಶೇಷವಾಗಿ ಹೈಬ್ಲಡ್ ಪ್ರೆಶರ್ ಇರುವ ರೋಗಿಗಳಿಗೆ ಬ್ರೇನ್ ಹ್ಯಾಮರೇಜಿನ ಅಪಾಯ ಹೆಚ್ಚಾಗಿರುತ್ತದೆ. ವಿಪರೀತ ತಲೆನೋವು, ಒಮ್ಮಲೆ – ಮೂರ್ಚೆ ಹೋಗುವುದು, ಧ್ವನಿಬಾರದಿರುವುದು. ಮುಖ ಹಾಗು ಕೈ ಕಾಲುಗಳಲ್ಲಿ ಲಕ್ವ ಹೊಡೆದಂತಾಗಿ ನಿಶಕ್ತಿ ಆವರಿಸುವುದು ಮುಂತಾದವು ಇದರ ಲಕ್ಷಣಗಳಾಗಿವೆ.

ಹೀ ಮತ್ತು ಇವರ ಅನುಮಾಯಿಗಳು ೧೮ ವಿಭಿನ್ನ ಪರೀಕ್ಷೆಗಳಲ್ಲಿ೫೫,೪೬೨ ರೋಗಿಗಳಿಗೆ ಆಸ್ಟ್ರೀನ್ ಸೇವನೆ ಮಾಡಿಸಿ ನಂತರ ಪರೀಕ್ಷಿಸಿದಾಗ ಇವರಲ್ಲಿ ಶೇ. ೧೫ ರಷ್ಟು ರೋಗಿಗಳಿಗೆ ಬ್ರೇನ್ ಹ್ಯಾಮರೇಜ್ ಆಕ್ರಮಣವಾದುದು ದೃಢಪಟ್ಟಿತು. ಉಳಿದಂತೆ ರೋಗಿಗಳಿಗೆ ಇಸೆಮಿಕ್ ಅಟ್ಯಾಕ್ ಆಗಿತ್ತು. ಆದ್ದರಿಂದ ನೋವು ನಿವಾರಕವೆಂದು ಇದನ್ನು ಸೇವಿಸುವ ರೋಗಿಗಳು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಸೇವಿಸುವುದು ಅಗತ್ಯ. ಕೆಲವು ಔಷಧಿಗಳು ತಕ್ಷಣಕ್ಕೆ ಪರಿಹಾರವನ್ನು ಸೂಚಿಸಿದರೂ ನಿಧಾನವಾಗಿ ಸ್ಲೋಪಾಯಿಜನ್ ಆಗುವ ಭೀತಿ ಇರುತ್ತದೆ. ಹಾಗಾದರೆ ಈ ದೇಹ ನೆಟ್ಟಗಿರಬೇಕಾದರೆ ಯಾವುದನ್ನು ಸೇವಿಸಬೇಕು? ಎಲ್ಲವನ್ನು ಒಬ್ಬ ಸಾಮಾನ್ಯ ರೋಗಿ ವೈಜ್ಞಾನಿಕವಾಗಿ ಪರೀಕ್ಷೆಗೆ ಗುರಿ ಮಾಡುತ್ತಾನೆಯೋ? ಎಂಬ ಪ್ರಶ್ನೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...