Home / ಲೇಖನ / ವಿಜ್ಞಾನ / ನಾವು ಎತ್ತರ ಏಕೆ ಬೆಳಯುವುದಿಲ್ಲ?

ನಾವು ಎತ್ತರ ಏಕೆ ಬೆಳಯುವುದಿಲ್ಲ?

ಭೌತಿಕವಾಗಿ ವಯಸ್ಸಾದಂತೆ ಬೆಳೆಯುತ್ತಲೇ ಹೋಗಿದ್ದರೆ ಈಗಿನ ಮನೆಗಳ ಬಾಗಿಲುಗಳು ೬೦-೭೦ ಅಡಿ ಎತ್ತರವಾಗಿರಬೇಗಿತ್ತು. ನಿಸರ್ಗದ-ದತ್ತವಾಗಿ ಮಾನವನ ಶರೀರದ ಬೆಳವಣಿಗೆಯ ನಿಯಂತ್ರಣವು ನಿಗದಿತ ವಯಸ್ಸಿಗೆ ನಿಂತು ಹೋಗುತ್ತದೆ. ಅತಿ ಕುಳ್ಳರಾಗಿ ಬೆಳೆದಿರುವ ಉದಾಹರಣೆಗಳು ಇವೆ.

ಆಗ ತಾನೆ ಜನಿಸಿದ ಶಿಶುಗಳು ಸಾಮಾನ್ಯವಾಗಿ ೫೦ ಸೆಂ.ಮೀ. ಉದ್ದವಿದ್ದರೆ ಮುಂದೆ ೨೦ ವರ್ಷಗಳಲ್ಲಿ ೧.೭ ಮೀಟರ್ ಬೆಳೆಯುತ್ತದೆ. ನಾವೇಕೆ ನಮ್ಮ ವಯಸ್ಸಿನ ಪರ್‍ಯಂತರ ಬೆಳಯುವುದಿಲ್ಲ? ಎಂಬ ಪ್ರಶ್ನೆ ಏಳದಿರದು. ಈ ಪ್ರಶ್ನೆಗೆ ಶರೀರ ವಿಜ್ಞಾನಿಗಳು ನಮ್ಮ ಶರೀರದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವ “ಎಂಡೋಕೈನ್” ಗ್ರಂಥಗಳಿದ್ದು ಕುತ್ತಿಗೆಯಲ್ಲಿನ ಥೈರಾಯ್ಡ್‌ ಮಿದುಳಿಗೆ ಹೊಂದಿಕೊಂಡಿರುವ ಪಿಟ್ಯುಟರಿ, ಎದೆಯಲ್ಲಿ ಥೈಮಸ್ ಹಾಗೂ ಲೈಂಗಿಕ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳ ಬೆಳವಣಿಗೆ ಹತೋಟಿಯಲ್ಲಿಡುತ್ತವೆ. ಇವುಗಳ ಪ್ರಭಾವ ಹದ್ದು ಮೀರಿದರೆ ನಮ್ಮ ಕೈ ಕಾಲು ಭುಜ ಮುಂತಾದ ಅಂಗಗಳು ರಾಕ್ಷಸೋಪಾದಿಯಲ್ಲಿ ಬೆಳದು ಬಿಡುತ್ತವೆ. ಮತ್ತು ಇವು ಅಗತ್ಯಾನುಸಾರ ವರ್ತಿಸಿದ್ದರೂ ಮನುಷ್ಯ ಕುಳ್ಳಗಾಗುತ್ತಾನೆಂದು ವಿವರಣೆಗೊಡುತ್ತಾರೆ.

ಎಳೆಯತನದಲ್ಲಿ ಥೈಮಸ್ ಗ್ರಂಥಿಗಳ ಚಟುವಟಿಗೆ ತೀವ್ರವಾಗಿ ಸಾಗಿ ೧೩-೧೪ ರ ವಯಸ್ಸಿನಲ್ಲಿ ಕ್ಷೀಣಿಸುತ್ತವೆ. ನಂತರ ಲೈಂಗಿಕ ಗ್ರಂಥಿಗಳು ಕ್ರಿಯಾಶೀಲಗೊಳ್ಳುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ಎತ್ತರ ೨೨ನೇ ವಯಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಒಂದು ವೇಳೆ ಲೈಂಗಿಕ ಗ್ರಂಥಿಗಳ ಉತ್ಪತ್ತಿ ಮೊದಲೇ ಆದರೆ ಎತ್ತರ ಬೆಳೆಯುವಲ್ಲಿ ಆಗುವುದಿಲ್ಲ. ಒಂದು ವೇಳೆ ಈ ಲೈಂಗಿಕ ಗ್ರಂಥಿಗಳು ಬಹಳ ತಡವಾಗಿ ಸೃಜಿಸಲಾರಂಭಿಸಿದರೆ ವ್ಯಕ್ತಿಗಳು ಬೃಹದಾಕಾರವಾದ ಎತ್ತರಕ್ಕೆ ಬೆಳೆಯುತ್ತಾರೆ. (ಥೈಮಸ್‌ನಿಂದಾಗಿ) ಒಂದು ಸಮೀಕ್ಷೆಯಂತೆ ೨೫ ನೇ ವಯಸ್ಸಿನ ನಂತರವೂ ವ್ಯಕ್ತಿಗಳು ಎತ್ತರ ಅತ್ಯಲ್ಪ ಪ್ರಮಾಣದಲ್ಲಿ ಏರುಮುಖವನ್ನೇ ಕಾಣುತ್ತದೆ. ಗರಿಷ್ಠ ಎತ್ತರವನ್ನು ನಾವು ತಲುಪುವುದು ೩೫-೪೦ ರ ಪ್ರಾಯದಲ್ಲಿ ವೈಶಿಷ್ಯವೆಂದರೆ ೪೦ ವರ್ಷ ವಯಸ್ಸಿನ ನಂತರ ನಾವು ಹತ್ತು ವರ್ಷಗಳಿಗೆ ೧೨ ಮಿಲಿ ಮೀಟರ್‌ನಂತೆ ಕುಳ್ಳರಾಗುತ್ತೇವೆ. ಕೀಲುಗಳಲ್ಲಿರುವ ‘ಕಾರ್ಟರೇಜ್’ ಎಂಬ ವಸ್ತು ಕುಗ್ಗುವುದೇ ಈ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಶರೀರ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...