Home / ಕವನ / ಕವಿತೆ / ಗೌರಿಯಾಕಳು ಮತ್ತು ನಾನು

ಗೌರಿಯಾಕಳು ಮತ್ತು ನಾನು

ಕರೆಮೊಗೆಯ ಹಿಡಿದು ಹೊರಟೆ
ಕೈಗೊಂದಿಷ್ಟು ಗೌರಿಯಾಕಳ
ಹಾಲಿನ ತುಪ್ಪ ಸವರಿ
ಕರು ಮೆಲ್ಲುತ್ತಿತ್ತು ಹುಲ್ಲು
ಅಂಬಾ ಎನ್ನುತ್ತ ದಾಂಬು ಎಳೆಯತೊಡಗಿತ್ತು
ವಾಸನೆ ಗೃಹಿಸಿ,
ದುಣಕಲು ತುಂಬಿದ ಹುಲ್ಲು ರುಚಿಯಿಲ್ಲ
ತೊಳಕಲು ಅಕ್ಕಚ್ಚು ಮೆಚ್ಚಿಲ್ಲ.
ಅಚ್ಚು ಮೆಚ್ಚುಗಳೆಲ್ಲ ಹಡದಬ್ಬೆ ಮೊಲೆಹಾಲೇ
ತೆರೆದ ಕೆಚ್ಚಲು ಕಚ್ಚಿ ಘಾಸುಕೊಟ್ಟು
ಚೀಪುಲದು ಕಳಸದೊಳಗಣ ಅಮೃತ.
ನನಗೀಗ ಹುರುಪು
ಸೆರೆ ಬಿಟ್ಟಿತು ಕೆಚ್ಚಲು ಕರುವಿನ
ಬಾಯಿ ಘಾಸಿಗೆ,
ಎಳೆಯತೊಡಗಿದೆ ದಾಂಬು
ಕೈಹಾಕಿ ಹಿಂಡಿ ಹಾಲು ಕರೆಯಲು
ಗಿಂಡಿ ತುಂಬಬೇಕು.

ಗೌರಿಯೀಗ ತಾಯಿ-ಬೆರಕಿಯಾಗಲೇ ಬೇಕು
ಆದರೂ ಮಣ್ಣು ಮುಕ್ಕಿಸಲಾಗದು ಅದಕೆ
ನರಜಾತಿಯ ಒಡತಿ ನಾನು
ಕಪಟತೆಯ ಕಲಿಸಬೇಕಿಲ್ಲ. ಕಣಕಣದ ಗುಣ
ಕೈ ಸ್ಪರ್ಶಕ್ಕೆ ಸಿಕ್ಕಂತೆ ಆಳಕ್ಕೆ
ಎಳೆದುಕೊಳ್ಳುವ ಅವಳ ತಂತ್ರಕ್ಕೆ
ಪ್ರತಿತಂತ್ರ ಹೂಡುತ್ತ ಮತ್ತೆ ಬಿಚ್ಚಿದೆ ಕರು
ಕೆಚ್ಚಲಿಗೆ, ಸುರ್ರನೆ ಸೆರೆ ಬಿಡುವ ಗಂಗೆ
ಮತ್ತೆ ಮೇಲಕ್ಕೆ ಎಳೆದುಕೊಳ್ಳುವ ಭರದಲ್ಲಿ
ಸಮರಕ್ಕೆ ನಿಂತಂತೆ ಮತ್ತು ಕರು ಎಳೆದು ಕಟ್ಟುವ
ನಾನು, ತಡೆದು ತಡೆದು
ಸೆರೆಯುಬ್ಬಿ ಸೊರಸೊರನೆ ಸುರಿಯತೊಡಗಿತು ಹಾಲು
ಭರಭರನೇ ಗಿಂಡಿತುಂಬತೊಡಗಿದೆ ನಾನು.
ಗತ್ತಿನಿಂದ ದಕ್ಕಿಸಿಕೊಂಡು,
ನನ್ನದಲ್ಲದ ಎಲ್ಲವೂ ನನ್ನದೇ
ಅದಕ್ಕೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...