Home / ಕವನ / ಕವಿತೆ / ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ

ಹೀಗೆ ನೀನು ನನ್ನ ಬಿಟ್ಟು ಹೋಗಬೇಡ.
ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು.
ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ,
ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ,
ನಿನಗೆ ರಾತ್ರಿ ಹೊತ್ತು ಚಳಿ ಆಗದ ಹಾಗೆ,
ಯಾವುದೂ ಭಯ ಆಗದ ಹಾಗೆ
ನಾನು ನಿನ್ನ ಸುತ್ತಲೂ ಕೋಟೆಯಾಗಿ ನಿಂತು
ನಿನ್ನನ್ನು ಕಾಪಾಡಿಕೊಂಡಿದ್ದೇನೆ.

ನೀನು ಹೋದರೆ ನಿನ್ನನ್ನು ಬೇಟೆ ಆಡಿ
ಬೇಯಿಸಿ ತಿಂದು ಬಿಡುತ್ತಾರೆ. ಪ್ರಪಂಚ ಕೆಟ್ಟದ್ದು,
ನಾನು ನಿನಗೆ ಸಿಗುವ ಮುಂಚೆ ನೀನು ಹೇಗಿದ್ದೆ,
ಜ್ಞಾಪಿಸಿಕೋ. ನಿನಗೆ ಇನ್ನೇನು ಬೇಕು ಹೇಳು-
ನಾನು ನಿನ್ನದೇ ಕನಸು ಕಾಣುತ್ತೇನೆ
ನಿನ್ನನ್ನು ಉಸಿರಾಡುತ್ತೇನೆ
ನಿನ್ನನ್ನು ಪ್ರೀತಿಸುತ್ತೇನೆ
ನೀನು ಇಲ್ಲೇ ಇರಬೇಕು.

ನಿನಗೋಸ್ಕರ ನಾನು ನನ್ನನ್ನೂ ಲೆಕ್ಕಿಸದೆ, ನನ್ನನ್ನೂ
ಲೆಕ್ಕಿಸದ ಹಾಗೆ ತ್ಯಾಗ ಮಾಡಿದ್ದೇನೆ, ತ್ಯಾಗ-ಗೊತ್ತಾ ?
ನಿನ್ನ ಕಾಡಿನ ಬೋಳುಮರಕ್ಕಿಂತ ಈ ಅರಮನೆ ದೊಡ್ಡದಲ್ಲವಾ ?
ನೀನು-ಹೋಗಲ್ಲ ನಿಮ್ಮನ್ನು ಬಿಟ್ಟು ಹೋಗೋದೇ ಇಲ್ಲ
ಅಂತಲೇ ಅನ್ನಬೇಕು ತಿಳಿಯಿತಾ ?

ಅದು ನನ್ನ ಹತ್ತಿರವೇ ಇರಲಿ ಅಂತ ನಾನು
ತೆಳ್ಳನೆದಾರ,
ತೆಳ್ಳನೆ ಕೆಂಪು ಸಿಲ್ಕಿನ ದಾರದಲ್ಲಿ
ಅದರ ಕಾಲು ಕಟ್ಟಬಾರದಾಗಿತ್ತಾ ?
ನಾನು ಹಗಲೂ ಸಂಜೆ ನನ್ನ ಕೈಯಿಂದಲೇ ಕೊಟ್ಟ ಕಾಳು
ಅದಕ್ಕೆ ಬೇಡ ಅನ್ನಿಸಿತಾ ; ಈ ಅರಮನೆಗಿಂತ
ಇನ್ನು, ಯಾವ ಸುಖಬೇಕಾಗಿತ್ತು ಅದಕ್ಕೆ ? ಆ ಪಾರಿವಾಳ
ದಿನಾ ದಿನಾ ಜಾಸ್ತಿ ಅಳುತ್ತಿದ್ದದ್ದು ಯಾಕೆ?
ಅದು ಸತ್ತು ಹೋಗಿದ್ದು ಯಾಕೆ ಅಂತ ಯಾರಿಗಾದರೂ ಗೊತ್ತಾ? ಗೊತ್ತಾ?

ಅದು ನನ್ನ ಬಿಟ್ಟು ಹೋಗುತ್ತಲ್ಲಾ ಅಂತ
ಸಹಿಸುವುದಕ್ಕೆ ಆಗದೆ, ಪ್ರೀತಿಯಿಂದ,
ತುಂಬಾ ಪ್ರೀತಿಯಿಂದ ನಾನೇ ಕೊಂದು ಹಾಕಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...