Home / ಕವನ / ಕವಿತೆ / ಮಸ್ಸೂರಿ

ಮಸ್ಸೂರಿ

ಗುರಿ ಮಸ್ಸೂರಿ ಮಹತ್ವಾಕಾಂಕ್ಷೆ ಗರಿ ಕೆದರಿ
ಎತ್ತರಕೆ ನಿಂತಿತ್ತು ನೋಡಿದರೆ ಕತ್ತು ನೋಯುತ್ತಿತ್ತು
ಕೆಳಗೆ ಸುಣ್ಣದಕಲ್ಲು ಮೇಲೆ ಹುಲ್ಲಿನ ಮಖಮಲ್ಲು
ಎರಡು ಜಗತ್ತುಗಳ ನಡುವೆ ಇಷ್ಟು ವ್ಯತ್ಯಾಸವೆ!

ರಸ್ತೆಯೋ ಬಹಳ ಕಡಿದು ಜೀವ ಕೈಯಲ್ಲಿ ಹಿಡಿದು
ಕುಳಿತಿದ್ದೆವು ಕಾರಿನಲ್ಲಿ ಅಪಘಾತಗಳ ನೋಟ ಅಲ್ಲಲ್ಲಿ
ನಮ್ಮ ಚಾಲಕನೂ ತೋರಿಸುತ್ತಿದ್ದ ತನ್ನ ಕೈಚಳಕ
“ಇಂಥ ಹಾದಿಗಳೇ ಹೀಗೆ!” ಎಂದುಕೊಂಡೆವು ನಮ್ಮೊಳಗೆ

ಸುತ್ತಿ ಬಳಸಿ ಹತ್ತಿ ಕುಳಿತಲ್ಲೆ ತಲೆ ಸುತ್ತಿ
ಮುಗಿಯುವುದೆಂದು ಈ ಆರೋಹಣವೆಂದು
ನೊಡಿದರೆ ಎಲಾ! ಎದುರು ಮಸ್ಸೂರಿಯ ಬಜಾರು
ಇನ್ನು ನಮ್ಮನ್ನು ಹಿಡಿದು ನಿಲ್ಲಿಸುವವರಾರು?

ಬಿಟ್ಟು ನಮ್ಮೂರ ಬಂದಿದ್ದೆವು ಬಹಳ ದೂರ
ಈಗೇಕೆ ಆ ಗೊಡವೆ ಇಂಥ ಬೀದಿಗಳ ನಡುವೆ
ಬೇಕಾದವರು ಹೊರಡಿ ಹೇಸರಗತ್ತೆಗಳ ಗಾಡಿ
ಪಾದಚಾರಿಗಳಾಗಿಯೆ ನಾವು ಇಲ್ಲಿ ಸಂಚರಿಸುವೆವು

ಕೊಡು ಎವೆಗೆ ಎವೆಯ ನೆಲೆ ಬೆಟ್ಟದ ಚೆಲುವೆ
ಇಲ್ಲಿಯ ತನಕವು ಬಂದೆ ನಿನ್ನ ನೋಡಲೆಂದೆ
ಏನ ಮಾರುವೆ ನನಗೆ ಬೇಕಾದ್ದು ನಿನ್ನ ನಗೆ
ಮಾರುವೆಯ ನನಗೊಂದು ಮಂಜಿನರಮನೆಯ ?

ಕಟಾಂಜಣದ ಬಳಿ ಸಿಗರೇಟಿನ ಹೊಗೆಯುಗುಳಿ
ನೋಡಿದೆನು ಡೆಹರಾಡೂನು ಆಚೆಗಿನ್ನೊಂದು ಸಾನು
ನಿಂತಿದ್ದೆನಲ್ಲಿ ಮರೆತು ಹೀಗೆಷ್ಟು ಹೊತ್ತು
ಬಂದ ದಾರಿಯ ಪಯಣ ಉಳಿದಿತ್ತು ಅವರೋಹಣ

ಆವರಿಸಿದಾಗ ಕತ್ತಲು ತಲಪಿದ್ದೆವು ಕೆಳಗಿನ ತಪ್ಪಲು
ಎಲ್ಲಿ ಮುಂಜಾನೆ ಎಲ್ಲಿ ನನ್ನ ಮಂಜಿನರಮನೆ ?
ಎದ್ದೆ ಹಾಸಿಗೆಯಿಂದ ಧಾವಿಸಿದೆ ಅಂಗಳದ ಬದಿಗೆ
ತೇಲಿ ಹೋಗುತ್ತಿತ್ತು ಅದು ಮಸ್ಸೂರಿಯ ಕಡೆಗೆ
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್