Home / ಕವನ / ಕವಿತೆ / ಪ್ರೀತಿಸುವ

ಪ್ರೀತಿಸುವ

ಪ್ರೀತಿಸುವ ಮರಗಳನ್ನು
ಅವು ಒಂಟಿಯಾಗಿರುತ್ತವೆ
ಬೀಸುವ ಗಾಳಿಯ ಜತೆಯಷ್ಟೆ
ಮಾತನಾಡುತ್ತವೆ

ಪ್ರೀತಿಸುವ ಬೆಟ್ಟಗಳನ್ನು
ಅವು ಮೌನವಾಗಿರುತ್ತವೆ
ಚಳಿಗಾಲದ ಮಂಜಿಗೆ ಹೊದ್ದು
ಮಲಕೊಂಡಿರುತ್ತವೆ

ಪ್ರೀತಿಸುವ ನದಿಗಳನ್ನು
ಅವು ತು೦ಬಿಕೊಂಡಿರುತ್ತವೆ
ಕಬ್ಬಿನ ತೋಟಗಳನ್ನು
ತಬ್ಬಿಕೊಂಡಿರುತ್ತವೆ

ಪ್ರೀತಿಸುವ ಸಮುದ್ರಗಳನ್ನು
ಅವು ಆಳವಾಗಿರುತ್ತವೆ
ಎಂಥ ಪ್ರಕ್ಷುಬ್ಧತೆಯನ್ನೂ
ತಾಳಿಕೊಂಡಿರುತ್ತವೆ

ಪ್ರೀತಿಸುವ ಮೋಡಗಳನ್ನು
ಅವು ದಟ್ಟವಾಗಿರುತ್ತವೆ
ಅಂಗಳದಲ್ಲಿ ತುಂಬಾ ನೀರಗುಳ್ಳೆ
ಎಬ್ಬಿಸಿ ಹೋಗುತ್ತವೆ

ಪ್ರೀತಿಸುವ ಬಂಡೆಗಳನ್ನು
ಆವು ಅಚಲವಾಗಿರುತ್ತವೆ
ಯಾರೂ ಕೆತ್ತಿರದ ಪ್ರತಿಮೆಗಳನ್ನು
ಹಿಡಿದುಕೊಂಡಿರುತ್ತವೆ

ಪ್ರೀತಿಸುವ ಹೂವುಗಳನ್ನು
ಅವು ಕ್ಷಣಿಕವಾಗಿರುತ್ತವೆ
ನೋಡಬೇಕೆನ್ನುವಷ್ಟರಲ್ಲೇ
ಬಾಡಿಹೋಗಿರುತ್ತವೆ

ಪ್ರೀತಿಸುವ ಮಕ್ಕಳನ್ನು
ಅವು ಚಿಕ್ಕವಾಗಿರುತ್ತವೆ
ಪ್ರೀತಿಸಬೇಕೆನ್ನುವಷ್ಟರಲ್ಲೇ ಪ್ರೀತಿ
ಕಳೆದುಕೊಂಡಿರುತ್ತವೆ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...