Home / ಲೇಖನ / ವಿಜ್ಞಾನ / ರಾಷ್ಟ್ರ ಪಕ್ಷಿ: ನವಿಲು

ರಾಷ್ಟ್ರ ಪಕ್ಷಿ: ನವಿಲು

ನವಿಲು ನಮ್ಮ ರಾಷ್ಟ್ರಪಕ್ಷಿ. ನವಿಲು ತನ್ನ ಸೌಂದರ್‍ಯ, ಬಣ್ಣ ಹಾಗೂ ನಡೆಗಳಿಗೆ ಪ್ರಸಿದ್ಧಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಸುಂದರವಾದ ಪಕ್ಷಿ.

ಹೆಣ್ಣು ನವಿಲಿಗಿಂತ ಗಂಡು ನವಿಲು ಹೆಚ್ಚು ಸುಂದರ. ಹಾಲು ಬಣ್ಣದ ಹೊಳಪಿನ ಮುಖ, ನೀಲಿಬಣ್ಣದ ತಲೆ, ಅದರ ಮೇಲೆ ರಾಜಠೀವಿ ಮೆರೆಸುವ ತುರಾಯಿ, ಕೆಂಪುಮಿಶ್ರಿತ ನಸುಹಳದಿ ಬಣ್ಣದ ರೆಕ್ಕೆ, ಬೆನ್ನಮೇಲಿನ ಹಸಿರು, ನೀಲಿ ಬಣ್ಣದ ಉದ್ದದ ಗರಿಗಳು, ಆ ಗರಿಗಳ ಮೇಲೆ ಕಣ್ಣಿನ ಹಾಗೆ ಕಾಣುವ ದುಂಡಾಕಾರದ ಚುಕ್ಕೆಗಳು.

ಹೆಣ್ಣು ನವಿಲು ಗಂಡು ನವಿಲಿಗಿಂತ ಚಿಕ್ಕದಾಗಿರುತ್ತದೆ. ಬಣ್ಣವೂ ಕೂಡ ಮಸುಕಾಗಿರುತ್ತದೆ. ಗಂಡು ನವಿಲು ಒಂದೂವರೆ ಮೀಟರ್‍ ಉದ್ದವಾಗಿದ್ದರೆ, ಹೆಣ್ಣು ನವಿಲಿನ ಉದ್ದ ಒಂದು ಮೀಟರ್‌ಗಿಂತ ಕಡಿಮೆ ಹಾಗೂ ಗಂಡು ನವಿಲು ೫ ಕೆ.ಜಿ. ಭಾರವಿದ್ದರೆ ಹೆಣ್ಣು ನವಿಲಿನ ಭಾರ ೫ ಕೆ.ಜಿ.ಗಿಂತ ಕಡಿಮೆ. ಸಾಮಾನ್ಯವಾಗಿ ನವಿಲುಗಳು ೨೦ ವರ್‍ಷಗಳವರೆಗೆ ಬದುಕುತ್ತವೆ.

ಹೆಣ್ಣು ನವಿಲು ಮೊಟ್ಟೆಯಿಡುವ ಕಾಲ ಫೆಬ್ರುವರಿಯಿಂದ ಆಗಸ್ಟ್‌ ತಿಂಗಳವರೆಗೆ. ಈ ಕಾಲದಲ್ಲಿ ಹೆಣ್ಣು ನವಿಲು ನೆಲದಲ್ಲಿ ಗೂಡು ಕಟ್ಟಿ ೧೦ ಬಿಳಿಯ ಮೊಟ್ಟೆಗಳನ್ನಿಡುತ್ತದೆ. ಅದು ೮ ತಿಂಗಳವರೆಗೆ ತನ್ನ ಮರಿಗಳನನ್ನು ಪೋಷಿಸುತ್ತದೆ. ನವಿಲುಮರಿಗೆ ತನ್ನ ಮೂರನೆಯ ವರ್‍ಷದಲ್ಲಿ ಗರಿ ಬೆಳೆಯಲಾರಂಭಿಸುತ್ತದೆ.

ಥೈಲೆಂಡ್, ಜಾವಾ, ಬರ್‍ಮಾ ಮತ್ತು ಮಲಯ ದೇಶಗಳಲ್ಲಿರುವ ನವಿಲುಗಳು ನಮ್ಮ ದೇಶದ ನವಿಲಿಗಿಂತ ಭಿನ್ನ. ಅವುಗಳ ಬಣ್ಣ ಹಸಿರು, ಉದ್ದವಾದ ಕಾಲುಗಳು ಅವುಗಳಿಗಿರುತ್ತವೆ.

ಮಳೆಗಾಲದ ಮೋಡಗಳನ್ನು ನೋಡಿ ನವಿಲಿಗೆ ಬಹಳ ಸಂತೋಷವಾಗುತ್ತದೆ. ಆಗ ಅದು (ಗಂಡು ನವಿಲು) ಹೆಣ್ಣು ನವಿಲಿನ ಮುಂದೆ ಕುಣಿಯಲು ಅನುವಾಗುತ್ತದೆ. ತನ್ನ ಬಣ್ಣ ಬಣ್ಣದ ಗರಿಗಳನ್ನು ಬಿಲ್ಲಿನಾಕಾರದಲ್ಲಿ ಕೆದರಿಕೊಂಡು ತನ್ನ ಸೌಂದರ್‍ಯವನ್ನು ಪ್ರದರ್‍ಶಿಸುತ್ತದೆ. ಗರಿಗಳನ್ನು ಪಟಪಟನೆ ಬಡಿದು ಅವುಗಳನ್ನು ಇನ್ನಷ್ಟು ಹರವಿ ಹೆಣ್ಣು ನವಿಲಿನಮನಸ್ಸನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತದೆ. ಈ ಮಯೂರ ನೃತ್ಯ ಮಧ್ಯ ಜನವರಿಯಿಂದ ಡಿಸೆಂಬರ್‌ವರೆಗೆ ನಡೆಯುತ್ತದೆ. ನವಿಲಿನ ಈ ನೃತ್ಯ ೧೫ ರಿಂದ ೩೫ ನಿಮಿಷಗಳವರೆಗೂ ಸಾಗಬಹುದು.

ನವಿಲು ತನ್ನ ಶತ್ರುಗಳ ನಡುವೆ ಸಿಕ್ಕಿಹಾಕಿಕೊಂಡಾಗಲೂ ಕ್ರೋಧದಿಂದ ಕುಣಿದು ವೈರಿಯನ್ನು ತಲ್ಲಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಸಮಯ ಸಾಧಿಸಿ ಅಪಾಯದಿಂದ ಪಾರಾಗುತ್ತದೆ. ಅದೂ ಅಲ್ಲದೆ ನವಿಲು ತನ್ನ ಮಕ್ಕಳ ಹಾಗೂ ತನ್ನ ಗೂಡಿನ ಗಡಿಯ ರಕ್ಷಣೆಗಾಗಿ ಸಮಯ ಬಂದಾಗ ಗರಿಹರವಿ ನರ್‍ತಿಸುತ್ತದೆ.

ನವಿಲುಗಳು ಅಡವಿಯಲ್ಲಿ ಗುಂಪು-ಗುಂಪಾಗಿ ವಾಸಿಸುತ್ತವೆ. ಅವು ರಾತ್ರಿಗಳನ್ನು ಮರಗಳ ಮೇಲೆ ಕಳೆಯುತ್ತವೆ.

ಕ್ರಿಮಿ ಕೀಟಗಳು, ಬೀಜ ಧಾನ್ಯಗಳು, ಹಾವು, ಉರಗಗಳು, ಹಲ್ಲಿಗಳು, ಮಿಡತೆಗಳು ಮತ್ತು ಕಂಬಳಿಹುಳಗಳು ನಿವಿಲಿನ ಆಹಾರಗಳಾಗಿವೆ.

ನವಿಲು ಬಹಳ ಉಪಯುಕ್ತ ಪ್ರಾಣಿ. ಅದರ ರೆಕ್ಕೆಗಳಿಂದ ನಿರ್‍ಮಿತವಾದ ಬೀಸಣಿಗೆಗಳು ಅತ್ಯಂತ ಆಕರ್‍ಷಕ. ನವಿಲು ಬೆಳೆಗಳನ್ನು ನಾಶ ಮಾಡುವ ಕ್ರಿಮಿಕೀಟಗಳನ್ನು ತಿಂದು ಬೆಳೆಗಳ ರಕ್ಷಣೆ ಮಾಡುತ್ತದೆ.

ನವಿಲು ಮಾಂಸವನ್ನು ಕೆಲ ಜನರು ತಿನ್ನುತ್ತಾರೆ; ಅಲ್ಲದೆ ಅದು ಔಷಧಕ್ಕೂ ಉಪಯುಕ್ತ. ಈ ಎಲ್ಲ ಉಪಯುಕ್ತತೆಯಿಂದಾಗಿ ಕೆಲವರು ನವಿಲುಗಳ ಕಳ್ಳ ಬೇಟೆಯಲ್ಲಿ ತೊಡಗಿದ್ದಾರೆ. ಆದ್ದರಿಂದಾಗಿ ನವಿಲುಗಳ ಸಂತತಿ ನಶಿಸಿ ಹೋಗುವ ಹಂತದಲ್ಲಿದೆ. ಗುಂಪು-ಗುಂಪಾಗಿದ್ದ ಸ್ಥಳಗಲ್ಲಿ ಈಗ ಒಂದೋ-ಎರಡೋ ನವಿಲುಗಳು ಕಾಣಿಸುತ್ತಿವೆ. ಪರಿಣಾಮವಾಗಿ ನಮ್ಮ ನಿಸರ್‍ಗದ ಚೆಲುವಿಗೆ ಭಂಗ ಬರಗೊಡಗಿದೆ. ಹುಳುಹುಪ್ಪಟೆಗಳ ನಿರ್‍ಮೂಲನೆಯಲ್ಲಿ ನಮ್ಮ ರೈತರಿಗಾಗುತ್ತಿದ್ದ ಸಹಾಯಕ್ಕೆ ಈಗ ಸಂಚಕಾರ ಒದಗುತ್ತಿದೆ. ಇದನ್ನೆಲ್ಲ ಗಮನಿಸಿಯೇ ಸರ್‍ಕಾರ ಅವುಗಳ ಬೇಟೆಯನ್ನು ಅಪರಾಧವೆಂದು ಸಾರಿದೆ. ರಾಷ್ಟ್ರೀಯ ಪಕ್ಷಿ ನವಿಲನ್ನು ರಕ್ಷಿಸುವುದು ನಮ್ಮೆಲ್ಲರ ಕರ್‍ತವ್ಯವಲ್ಲವೇ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...