Home / ಕವನ / ಕವಿತೆ / ನನಗೆ ಗೊತ್ತಿರಲಿಲ್ಲ….

ನನಗೆ ಗೊತ್ತಿರಲಿಲ್ಲ….

ನಾವು ಪುಟ್ಟ ಹುಡುಗಿಯಾಗಿದ್ದಾಗ
ಆಕಾಶಗೊಳಗೆ ಬೆಂಕಿಯಂತಹ
ನೋವಿದೆಯೆಂದು ಗೊತ್ತಿರಲಿಲ್ಲ.
ಮಳೆ ಸೂರ್ಯನ ಕಣ್ಣೀರು
ಎಂದು ಗೊತ್ತಿರಲಿಲ್ಲ.
ಗಡಗಡ ಎಂದು ಭೂಮಿ
ನಡುಗುವುದು ಅವಮಾನದಿಂದ
ಎಂದು ಗೊತ್ತಿರಲಿಲ್ಲ.

ಗೊತ್ತಿದ್ದರೆ….
ಈಡೇರದ ಆಸೆಗಳ ಮೇಲೆ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.

ಐದು ನಯಾಪೈಸೆಗಾಗಿ
ಆಟದ ಬೊಂಬೆಗಾಗಿ
ಬೆಲ್ಲದ ಮಿಠಾಯಿಗಾಗಿ
ಜರಿ ಲಂಗಕ್ಕಾಗಿ
ಅಷ್ಟೊಂದು ಕಣ್ಣೀರು
ಹರಿಸುತ್ತಿರಲಿಲ್ಲ.

ನನ್ನ ಗೆಳತಿಯರಿಗೆ
ಶ್ರೀಮಂತ ರೆಕ್ಕೆಗಳಿದ್ದವು
ಅವರು ಹಾರುತ್ತಿದ್ದರು
ಹದ್ದುಗಳಂತೆ ಎತ್ತರದಲ್ಲಿ.
ನಾನೋ ನಿಲ್ಲುತ್ತಿದ್ದೆ ಒಂಟಿಯಾಗಿ
ಆಟದ ಕುದುರೆ ಸಹ
ಏರಲಾಗದೆ ಖಾಲಿ ಖಾಲಿ.

ನನ್ನ ಗೆಳತಿಯರು ಅದೆಷ್ಟೊ
ಸಂತೋಷದ ಚಿಟ್ಟೆಗಳನ್ನು
ಸೃಷ್ಟಿಸುತ್ತಿದ್ದರು ನನ್ನೆದುರಲ್ಲಿ.
ನಾನು ಗುಬ್ಬಚ್ಚಿಯಾಗಿ
ಅಣಬೆಯಾಗಿ
ಅಪ್ಪಚ್ಚಿಯಾಗಿ ನೆಲದಲ್ಲಿ
ಹೊರಳುತ್ತಿದ್ದೆ ಹತಾಶೆಯಲ್ಲಿ.

ನನಗೂ ಜೊತೆಗಾರರಿದ್ದರು.
ಮಾತಾಡದ ರೈಲು ಹಳಿಗಳು
ಪುಟಿಯುವ ಹೊಂಡದ
ಮೀನುಗಳು
ಹುರಿದ ಹುಣಿಸೆಬೀಜಗಳು
ಚೌಕ-ಭಾರಗಳು.

ನನಗೆ ಎಷ್ಟೊ ಸಲ
ಅನಿಸುತ್ತಿತ್ತು
ಇಡಿ ಪ್ರಪಂಚವೆ
ನಗುವನ್ನು ನನ್ನ ಮುಖದ
ಮೇಲೆ ಉಗುಳಿದ ಹಾಗೆ
ಆಗೆಲ್ಲ ನಾನು ಮುಖಮುಚ್ಚಿಕೊಂಡು
ಇಳಿಯುತ್ತಿದ್ದೆ ನನ್ನೊಳಗೆ.

ಈಗ ನಾನು ದೊಡ್ಡವಳಾಗಿದ್ದೇನೆ.
ತಾರೆಯರನ್ನು ಕಿತ್ತು
ಮಡಿಲಿಗೆ ಹಾಕಿಕೊಳ್ಳುವಷ್ಟು
ಎತ್ತರ ಬೆಳೆದಿದ್ದೇನೆ.
ಒಂಟಿಯಾಗಿ ಸುತ್ತುತ್ತಿರುವ
ಹದ್ದುಗಳೀಗ ನೋಡುತ್ತಿವೆ.
ನನ್ನನ್ನು
ಸುಮ್ಮನೆ ನೋಡುತ್ತಿವೆ.


Tagged:

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...