Home / ಕವನ / ಕವಿತೆ / ಮಗುಚಲಾಗದ ಹಾಳೆ

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ
ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು
ಇಣುಕುತ್ತಿವೆ ಗದ್ದೆ ಗುಳ್ಳೆಗಳು
ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ
ಹದುಳಿಂದ ಪಾದ ಊರುತ್ತ,
ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ
ತುಂತುರು ಸೋನೆ ಮಳೆಗೆ ಸ್ವಲ್ಪ ಸ್ವಲ್ಪವೇ ನಡಗುತ್ತ
ಆದರೂ ಬತ್ತದ ಉತ್ಸಾಹದಲಿ

ಆಯ್ದ ಗುಳ್ಳೆಗಳು ಈಗ ಮನೆಯ ನಡು ಅಂಗಳದಿ ಚದುರಿ ಬಿದ್ದಿವೆ-
ಮೂತಿ ಹೊರ ತೂರುವ ಗುಳ್ಳೆಗಳ ಹೊಂಚಿ ಹಿಡಿದು
ತೆಂಗಿನ ಗರಿಯ ಕಡ್ಡಿಯಿಂದ ಮೀಟಿ ಮಾಂಸವನ್ನು
ಒತ್ತಿ ತೆಗೆಯುತ್ತಿದೆ ಆಕೃತಿ,
ಕೆಲವು ಬೆರಕಿ ಗುಳ್ಳೆಗಳು ಹವಣಿಸುತ್ತಿವೆ ಜೀವ ಜೋಪಾನಕ್ಕಾಗಿ-
ವ್ಯರ್ಥವಾಗಿ -ಗೌಲಕೋಣೆಯ ಮಣ್ಣ ಮಡಿಕೆಯಲ್ಲಿ
ಕೊತ ಕೊತ ಕುದಿಯುತ್ತಿದೆ ಮಸಾಲೆ
ಗುಳ್ಳೆ ಮಾಂಸಕ್ಕೆ ಕಾಯುತ್ತ.

ನೋಡ ನೋಡುತ್ತ ಮಬ್ಬುಗತ್ತಲೆ ಅವುಚಿಕೊಳ್ಳುತ್ತಿದೆ.
ಹತ್ತಲಾಗದ ದೃಷ್ಟಿಯ ನಿಚ್ಚಳವಾಗಿಸಿ
ಗೂಡಿನತ್ತ ತೆವಳುತ್ತ ಮತ್ತೆ ಮಂದದಿಟ್ಟಿಗೆ ಬಿದ್ದ
ಹುಳವನ್ನೊಮ್ಮೆ ಕೊಕ್ಕಿನಿಂದ ಹೆಕ್ಕಿ ಕುಕ್ಕತೊಡಗಿದೆ-ಹುಂಜ
ಮತ್ತೀಗ ಅದೇ ಆಕೃತಿ
ಮರಿಕೋಳಿ ಹುಂಜಗಳ ಹಿಡಿದು ಗೂಡಿಗೆ ತಳ್ಳುತ್ತಿದೆ.
ಒತ್ತರಿಸಿ, ಜಪ್ಪರಿಸಿ ಸುರಿಯತೊಡಗಿದೆ ಮುಸಲಧಾರೆ,
ಅದಾವ ಪರಿಯ ಸೊಗಡುಗಾರನೋ ತಿಳಿಯದಾದಂತೆ,
ಥಕಥೈ ಕುಣಿತ ಅಮಲೇರಿದಂತೆ.
ಅಷ್ಟೇ ಅಲ್ಲ, ಸೇರಿಗೆ ಸವ್ವಾಸೇರು, ಜುಗಲಬಂದಿಗೆ
ಸೆಟೆದು ಬೀಸತೊಡಗಿದೆ ಗಾಳಿ, ಪರಕಾಯ ಪ್ರವೇಶ ಮಾಡಿದಂತೆ.

ಗಿಡಮರದ ಕಿವಿಯೊಳಗೆ ತೂರಿ ಕಚಗುಳಿ ಇಡುತ್ತಿದ್ದ
ತಂಬೆಲರು ಮಟಮಾಯ.
ಎಲೆಗಳು ಥರಥರನೇ ನಡಗುತ್ತಿವೆ, ಹಕ್ಕಿಗೂಡಿನ ಮರಿಗಳು
ತಾಯ್ ಪಕ್ಕೆಯಲಿ ಬಚ್ಚಿಟ್ಟುಕೊಳ್ಳುತ್ತಿವೆ,
ಮುಚ್ಚಟೆಯಾಗಿ ಸುರಿವ ಮಳೆಮಾರುತಕ್ಕೆ ಬೆದರಿ.
ಈಗ ಗಾಢಾಂಧಕಾರ ವಕ್ಕರಿಸಿದೆ,
ತಡಕಾಡುತ್ತಿವೆ ಹತ್ತಾರು ಕೈಗಳು – ದೀಪ ಬೆಳಗಲು,
ಹೊತ್ತಿಸಿದ ಮಂದ ಪ್ರಭೆಯಲ್ಲಿ ದಿಟ್ಟಿಸುತ್ತೇನೆ
-ಅದೋ, ಎಳೆಯ ಆಕೃತಿಯ ಸ್ತಬ್ಧ ಚಿತ್ರ
ಬಯಲು ಚಿತ್ರದಂತೆ-ನನ್ನದೇ ನಿಚ್ಚಳ ರೂಪ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...