Home / ಕವನ / ಕವಿತೆ / ಬಸಿಯಿಂದ ಕುಡಿಯುವದು

ಬಸಿಯಿಂದ ಕುಡಿಯುವದು

ನನಗೆಂದೂ ಅದೃಷ್ಟ ಒಲಿದಿಲ್ಲ
ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ
ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ
ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ !

ಸಾಗುತಿರುವ ನನ್ನೀ ಪಯಣದ ದಾರಿಯಲಿ
ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ.
ನಾ ಬಸಿಯಿಂದಲೇ ಕುಡಿಯುತಿರುವೆ,
ಯಾಕೆನ್ನಿ,ನನ್ನ ಕಪ್ಪು ತುಂಬಿ ತುಳುಕಿದೆ !

ನಾನೇನು ಮಹಾ ಸಿರಿವಂತನೇನಲ್ಲ;
ಅಗೊಮ್ಮೆ ಈಗೊಮ್ಮೆ ದುರ್ಭರ ಎನಿಸಿದೆ
ಆದರೂ,ಸಂಬಂಧಿಕರ,ಸ್ನೇಹಿತರ ಒಲವಿನಿಂದಾಗಿ,
ನಾನೂ, ಸಾಕಷ್ಟು ಸಿರಿವಂತ ಎಂದೆನಿಸುತಿದೆ !

ಆ ದೇವನ ಆಶೀರ್ವಾದಕೆ ಧನ್ಯವಾದಗಳು
ಅವನ ಕೃಪೆ ಎನ್ನ ಮೇಲೆ ಪೂರ್ಣ ಇದೆ
ನಾ ಬಸಿಯಿಂದಲೇ ಕುಡಿಯುತಿರುವೆ
ಯಾಕೆನ್ನಿ ನನ್ನ ಕಪ್ಪು ತುಂಬಿ ತುಳುಕಿದೆ !

ಧೈರ್ಯ, ಸಾಮರ್ಥ್ಯ ಗಳು ಅವನವೇ ಬಳುವಳಿ
ಸಾಗುವ ದಾರಿ,ಏರು ದುರ್ಗಮ ಎನಿಸಿದಾಗೆಲ್ಲ,
ಮತ್ತೊಮ್ಮೆ,ಹಾರೈಸು ಎಂದು ನಾ ಬೇಡುವುದೇ ಇಲ್ಲ
ಈಗಾಗಲೇ ಸಾಕಷ್ಟು ಹರಸಿರುವ ಅವನು !

ನಾವು ಎಂದೂ ನಿರತರಾಗದೇ ಇರೋಣ
ಮತ್ತೊಂದು ಸಹಾಯಕ ಭಾರ ಭರಿಸೋಣ
ಆಗ ನಾವೆಲ್ಲರೂ ಬಸಿಯಿಂದಲೇ ಕುಡಿಯೋಣ
ನಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕಿದಾಗ !

ನಿಮ್ಮೆಲ್ಲರ ಕಪ್ಪುಗಳು ತುಂಬಿ ತುಳುಕುವಂತಾಗಲಿ

ಮೂಲ: ಜಾನ್ ಪಾಲ್ ಮೂರ್
Drinking From The Saucer by John Paul Moore


Tagged:

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...