Home / ಕವನ / ಕವಿತೆ / ವಿಪರ್ಯಾಸಗಳು

ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ
ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ
ಅಸಲಿಗೆ ದ್ವೈತ ಅದ್ವೈತಗಳೇ
ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು
ಹೊಸತು ಹುಡುಕುವ ಪರಿ
ಪರಿಪರಿಯಾಗಿ

ಇನ್ನೊಂದೆಡೆ ಕಾಂಚಾಣದ
ಕುಣಿತ
ಸತ್ಯಕ್ಕೂ ಸ್ಥಳವಿಲ್ಲ
ಜ್ಞಾನಕ್ಕೂ ಬೆಲೆಯಿಲ್ಲ
ಸತ್ಯ ಜ್ಞಾನಗಳೆರಡು
ಕಾಂಚಾಣದ ಮಾರುಕಟ್ಟೆಯಲ್ಲಿ
ಇಡಲ್ಪಟ್ಟಿವೆ ಗಿರವಿಗೆ

ಅಲ್ಲೊಂದು ಸೌಂದರ್ಯ ರಾಶಿ
ನೈಜತೆಯೋ, ಕೃತಕತೆಯೋ,
ಅರಿಯದಂತಿರೆ ಅಲಂಕಾರ
ನಟನೆಯೇ ನಿಜವೆಂಬ
ಭ್ರಮೆಯ ಬದುಕು

ಮತ್ತಲ್ಲಿ ಮಠಗಳು ಆಶ್ರಮಗಳು
ಸಭ್ಯಸ್ಥರ ಕೂಟ
ಖಾವಿಬಟ್ಟೆಗಳ ಮೇಲಾಟ

ವಿದ್ಯೆ ಬುದ್ಧಿಗಳ ಆಗರ
ಸಹನೆ ಸಂಯಮಗಳ ಸಾಗರ
ಆದರೂ ಖಾವಿ ಬಟ್ಟೆಯಲ್ಲೂ ಕಾಮಿ
ಅಲ್ಲಿಯೂ ಅಂಟಿದ ರಕ್ತದ ಕಲೆ
ಅನ್ಯಾಯ ಅನಾಚಾರ ವ್ಯಭಿಚಾರಗಳ ಬಲೆ

ಮತ್ತೊಂದು ಕಾಲ ಕಾಯುತ್ತಿದೆ
ವಿಧ್ವಂಸಕರೆ ವಿಧ್ವಾಂಸರಾಗುವರು
ಜಾರೆಯೆಂದರೆ ಗರತಿ
ಸನ್ಯಾಸಿಯೆಂದರೆ ಸಂಸಾರಿ
ಚಾಂಡಾಲನೆ ಗುರುವಾಗುವನು
ಅರ್ಥವಾಗದ
ಮತ್ತೆ ಅರ್ಥೈಸಲಾಗದ
ಆದರೂ ಜಾಣ ಕುರುಡು ನಾಟಕಗಳು
ಎಂಥೆಂಥದೋ ವಿಪರ್ಯಾಸಗಳು


Tagged:

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...