Home / ಕವನ / ಕವಿತೆ / ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು
ಕುಳಿತಲ್ಲಿ ಕೂರುವುದಿಲ್ಲ
ಒಂದು ವಸ್ತುವಿನಿಂದ
ಇನ್ನೊಂದು ವಸ್ತುವಿಗೆ
ನೆಗೆಯುತ್ತಲೇ ಇರುತ್ತದೆ

ಅದು ಉದಾತ್ತವಾಗಲು ಬಯಸುತ್ತಲೇ
ಸಣ್ಣತನವನ್ನೂ ತೋರಿಸುತ್ತದೆ
ತಥಾಗತನ ಧ್ಯಾನದಲ್ಲಿ ಕೂಡ
ಯೋನಿ ಶಿಶ್ನಗಳ ಕುರಿತು
ಯೋಚಿಸುತ್ತದೆ

ಶಬ್ದ ನಿಶ್ಯಬ್ದಗಳ
ಶ್ವಾಸ ನಿಶ್ವಾಸಗಳ
ಬೆನ್ನು ಹತ್ತುತ್ತದೆ
ತೆರೆದ ಕಿಟಕಿಗಳ
ಒಳಗೆ ಹಣಿಕುತ್ತದೆ

ಕಾಣುವ ಸಂಗತಿಗಳನ್ನು
ಕಡೆಗಣಿಸುತ್ತದೆ
ಕಾಣದ ಸಂಗತಿಗಳನ್ನು
ಕಂಡಿದ್ದೇನೆಂದು
ಭ್ರಮಿಸುತ್ತದೆ

ಸರಿ ಸರಿ ಯೋಚಿಸುದದನೆಲ್ಲ
ಬರೆಯಬೇಕಾಗಿಲ್ಲ
ಎಲ್ಲ ಮುಚ್ಚು ಮರೆಗಳನೂ
ತೆರೆದು ಮುಖಕ್ಕೆ
ಹಿಡಿಯಬೇಕಾಗಿಲ್ಲ

ತೋರಿಸು ಆಕಾಶ, ಸಮುದ್ರ.
ಹಿಮಾಲಯ, ಅಚ್ಛೋದ ಸರೋವರ
ನಾಗಾರ್ಜುನ ಸಾಗರ ಅಣೆಕಟ್ಟು
ಕನಾಟ್ ಸರ್ಕಲು
ಶೆರಾಟನ್ ಹೋಟೆಲು

ಒಂದೊಂದು ವಿಚಾರಗಳನ್ನೂ
ಚಿನ್ನದ ನೀರಲ್ಲಿ ಅದ್ದಿ ತೆಗೆ-ಆಗ ಅವು
ಥಳಥಳಿಸುವುವು-ಅವರವರ
ಪ್ರಿಯತಮೆಯರ ಕೊರಳ
ಆಭರಣಗಳಂತೆ

ಜನರು ಆದರಿಸುವರು ಮಹಾ
ದಾರ್ಶನಿಕನೆಂದು ಹೊಗಳುವರು
ಎಲ್ಲರೂ ಕರೆಯುವರು
ಯಾರೂ ತಮ್ಮ ಹೆಂಡಂದಿರನ್ನು
ನಿನ್ನ ಜತೆ ಬಿಡಲು ಹೆದರರು
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...