Home / ಕವನ / ಕವಿತೆ / ನಾ…. ಬರುತ್ತೇನೆ ಕೇಳು!

ನಾ…. ಬರುತ್ತೇನೆ ಕೇಳು!

ಒಂದಲ್ಲ ಒಂದು ದಿನ ನಿನ್ನ
ಕನಸಿನಲ್ಲಿ ಸದ್ದಿಲ್ಲದೆ ಸುಳಿದು
ಬರುವವಳೇ…. ನಾನು
ಜಾಡಿಸಿ ಒದ್ದೋಡಿಸಿದರೆ
ಬಾಗಿಲ ಕಟಕಟಾಯಿಸಿವೆನು.
ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ
ತೂರಿ ಹೋಗುವ ಹಾಗೆ ಗೆಜ್ಜೆ-
ಝಣಗುಟ್ಟಿಸುವೆನು, ಕಣ್-
ತಪ್ಪಿಸಿಯಾದರೂ ಒಳನುಗ್ಗುವೆನು.

‘ಹಠಮಾರಿ ಹೆಣ್ಣು’ ಎಂದು
ಅನ್ನುವಿಯಾದರೆ ಅನ್ನು, ಆದರೆ
ಅತ್ತಿಂದಿತ್ತ ಗೋಣಾಡಿಸಿ ಮಾತ್ರ
ತುಂಟ ಕಂಗಳಿಗೆ ಎರಚದಿರು ಮಣ್ಣು,
ದಯವಿಟ್ಟು ದಯೆಯಿಟ್ಟು ದಾರಿಬಿಡು.
ಕೆಣಕದೆ, ಒಳಗೇನಿದೆಯೆಂದು
ಇಣುಕಿ ನೋಡುವೆನು, ಗುಲಾಬಿ
ಮೃದುಪಾದದ ಹೆಜ್ಜೆಯಿಟ್ಟು
ನೋವಾಗದ ಹಾಗೆ ನಡೆದಾಡುವೆನು.
ಖಾಲಿಯೆನಿಸಿದರೆ ಒಂದಿಷ್ಟು
ಹಸಿರ ಬೆಳಸುವೆನು.

ನೋಡು: ನಾಳಿನ ದಿನ ಕಣ್ಣ ಪೊರೆ
ಕಳಚಿ, ನೆನಪು ನಿಚ್ಚಳವಾಗಿ,
ಮಸುಕು ಹೆಜ್ಜೆಯನ್ನಪ್ಪಿ, ನೀ…
ಬಿಕ್ಕಳಿಸುವಾಗ ಸಾವಿರ ಮೈಲುಗಳಾಚೆ
ಸಮಶೃತಿಯಲ್ಲಿ ನುಡಿಯಬಹುದು
ನನ್ನ ಗೆಜ್ಜೆಯ ಗುನುಗು.

ಆಗ: ಬಾಜಾ-ಬಜಂತ್ರಿ ನುಡಿಸಿ
‘ಸುಸ್ವಾಗತ’ ಫಲಕ ತೂಗು ಹಾಕಿದರೂ
ತಿರುಗಿ ನೋಡುವವಳಲ್ಲ ನಾನು.
ಎರಡೂ ಕೈ ಚಾಚಿ ‘ಬಾ’ ಎಂದು
ಕರೆದರೂ ಬರುವವಳಲ್ಲ ನಾನು
ಬರಬೇಕೆನಿಸಿದರೂ ಬರಲಾಗುವುದಿಲ್ಲ ಕೇಳು!
ಹಿಂದಿರುಗಿ ಬರಲಾರದಷ್ಟು ದೂರ
ಹೋದ ಮೇಲೆ ಹೇಗೆ ಬರುವುದು ಹೇಳು?


Tagged:

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...