Home / ಕವನ / ಕವಿತೆ / ಭ್ರಾತೃ ಕವಿ

ಭ್ರಾತೃ ಕವಿ

ಶ್ರೀಮಾನ್ ದ ರಾ ಬೇಂದ್ರೆಯವರಿಗೆ

ದೋಷರಾಹಿತ್ಯದಾ
ಕಲ್ಪನಾ ರಾಜ್ಯದೊಳು
ಸಗ್ಗದೂಟವನುಣುವ
ಹಿರಿಯ ಕಬ್ಬಿಗನೇ

ನಿನ್ನ ಕಾಣಲು ಬಯಸಿ
ಹಲವಾರು ದಿನಗಳಿಂ
ಇಣಿಕಿಣಿಕಿ ನೋಡುತಿದೆ
ಈ ಸಣ್ಣ ಮನವು

ಕವಿಯ ಬರೆಹವ ಕಂಡ
ರಸಬಿಂದುಗಳ ಸವಿಯೆ
ಸುಳಿಯುತಿದೆ ಭೃಂಗದೊಲು
ಭಾವವರಿಯದೆಯೆ

ಗುರಿಯ ನೆಟ್ಟಿಹ ತಾಣ
ದೊಗಟೆಯೊಡೆಯದೆ
ಅಣುವು ಧಾವಿಸಿದೆ
ದಿಕ್ಕು ತಪ್ಪಿ

ಕರೆಯದಾವುದೊ ಒಂದು
ಕೇಳುತಿದೆ ದೂರದೊಳು
ಬಾಳಿನೆಲೆಗಳ ನೆಗೆದು
ಬಾ ತಂಗಿಯೆಂದು

ಹರಿಯುತಿದೆ ಮಧುರಸದ
ಝರಿ ಎಲ್ಲೊ ಭೋರ್ಗರೆದು
ಬಳಿಸಾರಲಾಗದಾ
ಬಂಧನದ ಆಚೆ

ಮೇಳ ತಾಳದ ದಿವ್ಯ
ಝೇಂಕೃತದ ನಾದಗಳು
ಕೇಳಿ ಕೇಳಿಸದಾಗಿ
ಸಾಗುತಿಹುವು

ಭಾವಗಳ ಪರ್ವತದ
ಶ್ರೇಣಿಗಳ ಶಿಖರಗಳು
ಕಂಡು ಕಾಣಿಸದಾಗಿ
ಮೆರೆಯುತಿಹುವು

ಜಡ ಮನಕೆ ಚೇತನವ
ಕಲ್ಪಿಸುವ ಮಾನ್ಯ
ತೇಲಿಬಿಡು ಆ ನಿನ್ನ
ಭಾವಗಳನೊಮ್ಮೆ

ಆಳದೊಳು ಹೂಳಿರುವ ವಿಷಯಗಳ ಬಯಲಿಗಿಡು
ಮಾರ್ಗವಾವುದೊ ಕಂಡು ಮೆಲ್ಲನೆಯೆ
ಸಾಗುವಳು ಶಾಂತಿಯಿಂದೀ
ನಿನ್ನ ತಂಗಿ ಜನಕಜೆಯು
*****
೧೨-೦೧-೧೯೪೫

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...