Home / ಕವನ / ಕವಿತೆ / ಆಗಮನ

ಆಗಮನ

ವಾಯುಸಂಚಾರಿ ಒಂದು ಪಟ್ಟಣದಿಂದ ಇನ್ನೊಂದಕ್ಕೆ ಹಾರಿ
ಬರುತ್ತಿದ್ದಾನೆ, ಕೆಳಗೆ ಮೋಡಗಳ ಮೇಲೆ ಮೋಡಗಳು ಬಿದ್ದು
ಅವುಗಳಂಚಿನಲಿ ಸೂರ್ಯನ ರಶ್ಮಿಗಳೆದ್ದು
ನಿಮಿಷಗಳು ಸರಿದರೂ ಸರಿಯುವುದಿಲ್ಲ ದಾರಿ

ಹೊಸೆಯುತ್ತಾನೆ ಮನಸ್ಸಿನಲ್ಲಿ ಒಂದು ಕವಿತೆಯ ಚರಣ:
ಎಲೆಲೆ ಗಗನ ಸಖಿ ಚಂದ್ರಮುಖಿ ಬಾರೆ
ಕಳಚಿ ಈ ಸೂಟುಬೂಟು ಆ ಅನಗತ್ಯದ ಸೀರೆ
ಮೋಡಗಳ ಮೆತ್ತೆಯೊಳಕ್ಕೆ ಹಾರೋಣ!

ಫಾರೂಕಬ್ದುಲ್ಲನ ಪತನ ವಿರೋಧಪಕ್ಷಗಳ ಪ್ರಕ್ಷೋಭನ
ಆಂತುಲೆಯ ವಿಚಾರಣೆ ಮುಂಬರುವ ಲೋಕಸಭಾ ಚುನಾವಣೆ
ಶೇರುಗಳ ಏರಿಳಿತ ಡಾಲರಿನ ಅನಿರೀಕ್ಷಿತ ಕುಸಿತ
ಶಬನಾ ಆಜ್ಮಿ ಸ್ಮಿತಾಪಾಟೀಲರ ಒಳಜಗಳ

ಆಹ! ಎಂತಹ- ಪೃಷ್ಠ!
ತಬ್ಬಿಕೊಳ್ಳಲೆಂದೇ ಉಬ್ಬಿನಿಂತ ಮಾಟ
ಕೇವಲ ಒಂದು ಒಳಚಡ್ಡಿಯ ಜಾಹೀರು
ಇರಲಿರಲಿ! ಈ ವಾರದ ಭವಿಷ್ಯ
ಏನು ವಿಷಯ?

“ಇಳಿಯಲಿದ್ದೇವೆ ನಾವೀಗ!
ದಯವಿಟ್ಟು ನಿಮ್ಮ ನಿಮ್ಮ
ಸೀಟು ಬೆಲ್ಟುಗಳನ್ನು ಕಟ್ಟಿಕೊಳ್ಳಿರಿ!
ಹೊಗೆಬತ್ತಿ ಸೇದದಿರಿ ! ಕೃತಜ್ಞತೆಗಳು !”
ಎನ್ನುತ್ತಾಳವಳು.

ಹೊರಗೆ ನೋಡುತ್ತಾನೆ-ಮೋಡಗಳಿಲ್ಲ
(ಶುಭ್ರ ವಾತಾವರಣ, ಸುಖಾಗಮನ)
ಎಷ್ಟೋ ದೂರ ಕೆಳಗೆ
ನೆಲ ಬಿದ್ದಿದೆ ಚಾಪೆಯ ಹಾಗೆ
ಮನೆ ಮರ ಕಾರ್ಖಾನೆ
ಮರೆತುಬಿಟ್ಪ ಆಟಿಕೆಗಳಂತೆ
ಮೊಡವೆಗಳಂಥ ಬಂಡೆಗಳು
ಇರುವೆಗಳಂತೆ ಸರಿಯುವ ಮನುಷ್ಯರು
ಇಷ್ಟೆತ್ತರದಿಂದಲೇ ಹೀಗೆ ಕಾಣಿಸಿದರೆ
ಇನ್ನೊಂದು ಗ್ರಹದಿಂದ ಹೇಗೆ ಕಾಣಿಸಬೇಡ!
ಎಂದುಕೊಳ್ಳುತ್ತಾನೆ-ಸೆಜಿಟೇರಿಯಸ್
ಧನುರ್ಧಾರಿ ಎಷ್ಟೋ ಬೇಟೆಗಳ ಹೊಡೆದವನು
ಸೀಟಿನೊಳಕ್ಕೆ ಜಾರಿ

ಎಂಥ ಸೆಕೆ ನೆಲದ ಮೇಲೆ
ನೂಕು ನುಗ್ಗಲು ಬೇರೆ!
ಯಾರ ಹೆಂಡಿರು ಯಾರ ಮಕ್ಕಳು
ಯಾರು ಯಾರಿಗೆ ಹಿಡಿದು ನಿಂತ ಹಾರಗಳು?
ಬಾಗಿಲಿನಿಂದಾಚೆ ಇರಿಸುತ್ತಾನೆ ಪಾದ
ಪರಿಚಯದ ಮುಖಗಳಿಗಾಗಿ ಹುಡುಕುತ್ತಾನೆ
ಇವನಲ್ಲ! ಇವನಲ್ಲ! ಎನ್ನುತ್ತವೆ
ಪ್ರತಿಯೊಂದು ಜತೆ ಕಣ್ಣುಗಳು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...