Home / ಕವನ / ಕವಿತೆ / ಅವಳಲ್ಲಿ ನಾನು

ಅವಳಲ್ಲಿ ನಾನು

ಈ ಮಧ್ಯಾಹ್ನ ಅವಳು ದಾಟಿ
ಹೋದಳು ಹಾಗೆಯೇ ಇದ್ದವು
ಅರೆತೆರೆದ ಕಣ್ಣುಗಳು ಕನಸುಗಳು
ಅದು ಅಪರೂಪದ ದೃಶ್ಯವೆಂದು
ಅನಿಸಿಕೊಂಡಾಗಲೇ ಬೆರೆಯುತ್ತಿತ್ತು
ಬೆವರ ಹನಿಗಳು ಗಾಳಿಯಲಿ,
ಅವಳು ಮೆತ್ತಗೆ ನಡೆಯುತ್ತಿದ್ದಳು.

ಗಾಳಿಯಲಿ ತೇಲಿದ ಪರಾಗ
ಸೆರಗಿನಗುಂಟ ಹರಿದು, ಅವಳ
ಮೈಗೆ ಮೆತ್ತಿಕೊಂಡಿದೆ ದಣಿವು ಗಂಧ,
ಮನೆಯಲಿ ಮಿನುಗುವ ಕಣ್ಣುಗಳು
ಮಕ್ಕಳು ಹಾರಾಡಿವೆ ಹಾಗೆ ಚಿಟ್ಟೆಗಳಾಗಿ,
ಅವಳೆದೆಯ ತುಂಬ ಕೆಂಡಸಂಪಿಗೆ
ಅವಳು ಮೌನವಾಗಿ ಸರಿದು ಹೋಗಿದ್ದಾಳೆ.

ಶೂನ್ಯದ ಕ್ಷಣಗಳಲಿ ಒಂದಾದ
ಅವಳ ಕಣ್ಣೋಟಗಳು ಯಾಕೋ
ಎದೆಗೂಡಿನೊಳಗೆ ಕಟ್ಟಿವೆ ಜೇನುಗೂಡು,
ನಾನು ಅವಳೋ ಅವಳು ನಾನೋ
ಪ್ರಭೆಯಲಿ ಒಂದಾದ ಮರಳೋ
ಸಮರ ಹೂಡಿದ ಯೋಧರಂತೆ
ಸಾಗಿದ್ದೇವೆ ಟೊಂಕಕಟ್ಟಿ ಹರವಾದ ಬದುಕಿನಲ್ಲಿ.

ಇಂದು ನಿನ್ನೆಯಂಥೆ ಇಲ್ಲ ಅವಳು
ಬದಲಾಗಿದ್ದಳು ವಿಸ್ಮಯಗಳು ಘಟಿಸಿವೆ
ಯಾರೂ ಹೊರಳದ ದಾರಿಯ ತಿರುವಿನಲಿ
ಸಂಜೆಯ ಬಿಸಿಲಿನ ನೆರಳುಗಳು ಮುಳುಗಿ
ಹರಿದು ಹೋಗುತ್ತದೆ ನದಿಯ ಅಲೆ ಅಲೆಗಳು
ನಮ್ಮ ಕುರುಹುಗಳು ಅಲ್ಲಿ ಕಾಣುವವು
ಒಂದರೊಳಗೊಂದು ಇಳಿದಂತೆ ಹೊಕ್ಕಳ ಬಳ್ಳಿ ಬೇರುಗಳು!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...